Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರೋಗಿಯ ಜೀವವುಳಿಸಲು ರಮಝಾನ್ ಉಪವಾಸ...

ರೋಗಿಯ ಜೀವವುಳಿಸಲು ರಮಝಾನ್ ಉಪವಾಸ ಮುರಿದು ರಕ್ತದಾನ ಮಾಡಿದ ಯುವಕ

ವಾರ್ತಾಭಾರತಿವಾರ್ತಾಭಾರತಿ11 May 2019 1:02 PM IST
share
ರೋಗಿಯ ಜೀವವುಳಿಸಲು ರಮಝಾನ್ ಉಪವಾಸ ಮುರಿದು ರಕ್ತದಾನ ಮಾಡಿದ ಯುವಕ

ಗುವಹಾಟಿ : ಬುಧವಾರ, ರಮಝಾನ್ ಉಪವಾಸದ ಎರಡನೆಯ ದಿನ  26 ವರ್ಷದ ಪನವುಲ್ಲಾ ಅಹ್ಮದ್, ಸಹರಿ (ಮುಂಜಾನೆಯ ಉಪಾಹಾರ) ನಂತರ  ವಿರಮಿಸುತ್ತಿದ್ದ ಸಂದರ್ಭ ತನ್ನ ರೂಮ್ ಮೇಟ್ ತಾಪಶ್ ಭಗವತಿ ತೀರಾ ಕಳವಳಗೊಂಡಿರುವುದನ್ನು ಗಮನಿಸಿದ.

 ರಕ್ತದಾನಿಗಳ ಗುಂಪಾದ ಟೀಮ್  ಹ್ಯುಮಾನಿಟಿಯ ಸಕ್ರಿಯ ಸದಸ್ಯನಾಗಿದ್ದ ತಾಪಶ್ ನಿಗೆ ಕಳೆದ ರಾತ್ರಿ  ಬಂದ ಕರೆಯೊಂದು ರೋಗಿಯೊಬ್ಬರಿಗೆ ತುರ್ತು ‘ಒ ಪಾಸಿಟಿವ್'  ಗುಂಪಿನ ಎರಡು ಯುನಿಟ್ ರಕ್ತ ಅಗತ್ಯವಿದೆ ಹಾಗೂ ರೋಗಿಯ ಕುಟುಂಬ ರಕ್ತ ಪಡೆಯಲು ಯತ್ನಿಸಿ ವಿಫಲವಾಗಿದ್ದನ್ನು  ತಿಳಿಸಿತ್ತು.

ಗುವಹಾಟಿಯ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುವ ಅಹ್ಮದ್ ತನ್ನ ರೂಮ್ ಮೇಟ್ ನಲ್ಲಿ ವಿಚಾರಿಸಿ ತಾನು ರಕ್ತ ನೀಡಲು ಸಿದ್ಧ ಎಂದು ತಿಳಿಸಿದ್ದ.

``ಆತ ರಕ್ತ ನೀಡುವುದಾಗಿ ಹೇಳಿದಾಗ ಖುಷಿ ಪಟ್ಟೆ ಆದರೆ ಆತ ಉಪವಾಸ ಮುರಿಯುವುದು ನನಗೆ ಬೇಕಿರಲಿಲ್ಲ, ಆದರೆ ಆತ ಮಾತ್ರ ಹಠ ಹಿಡಿದಿದ್ದ,'' ಎಂದು ಅದೇ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಟೆಕ್ನಿಶಿಯನ್ ಆಗಿರುವ ತಾಪಶ್ ಹೇಳುತ್ತಾನೆ.

ಇಬ್ಬರು ಸ್ನೇಹಿತರೂ ಅಸ್ಸಾಂನ ಧೇಮಜಿ ಎಂಬಲ್ಲಿನ 50 ವರ್ಷದ ಉದ್ಯಮಿ ರಂಜನ್ ಗೊಗೊಯಿ ದಾಖಲಾಗಿದ್ದ ಇನ್ನೊಂದು ಆಸ್ಪತ್ರೆಗೆ ಧಾವಿಸಿದ್ದರು. ಗೊಗೊಯಿ ಅವರ ಹೊಟ್ಟೆಯಲ್ಲಿನ ಎರಡು ಟ್ಯೂಮರ್ ಹೊರತೆಗೆಯುವ ಶಸ್ತ್ರಕ್ರಿಯೆ ನಡೆಯಲಿದ್ದುದರಿಂದ ನಂತರ ಅವರಿಗೆ ರಕ್ತದ ಅವಶ್ಯಕತೆಯಿತ್ತು.

``ನಾನು ಕೆಲ ಮೌಲವಿಗಳನ್ನು ಸಂಪರ್ಕಿಸಿದಾಗ ರಕ್ತದಾನ ಮಾಡುವಂತೆ ಆದರೆ ನಿತ್ರಾಣತೆ ಕಾಡಿದರೆ  ಉಪವಾಸ ಮುಂದುವರಿಸದಂತೆ ಸಲಹೆ ನೀಡಿದರು,'' ಎಂದು  ಅಹ್ಮದ್ ಹೇಳಿದ್ದಾನೆ.

``ನಾನು ದಾನ ಮಾಡಿದ ಒಂದು ಯುನಿಟ್ ರಕ್ತವನ್ನು ಆಸ್ಪತ್ರೆ ತನ್ನ ಬ್ಲಡ್ ಬ್ಯಾಂಕಿನಲ್ಲಿರಿಸಿ ಗೊಗೊಯಿ ಅವರಿಗೆ ಬೇಕಾದ `ಒ ಪಾಸಿಟಿವ್' ರಕ್ತ ಒದಗಿಸಿತು. ನಂತರ ನಾನು ಉಪವಾಸ ಮುರಿದು ಏನಾದರೂ ತಿನ್ನಬೇಕಾಯಿತು,''ಎಂದು ಅಹ್ಮದ್ ಹೇಳುತ್ತಾನೆ.

ಅತ್ತ ರೋಗಿಯ ಶಸ್ತ್ರಚಿಕಿತ್ಸೆ ನಡೆದು ಆತನ ಹೊಟ್ಟೆಯಲ್ಲಿನ ಎರಡು ಟ್ಯೂಮರ್ ತೆಗೆದ ವೈದ್ಯರು ನಂತರ ಕ್ಯಾನ್ಸರ್ ಕಾರಕ ಟ್ಯೂಮರ್ ಹೌದೇ ಅಲ್ಲೇ ಎಂದು ಪರೀಕ್ಷಿಸಲಿದ್ದಾರೆ. ರೋಗಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಆತನ ಉದಾತ್ತ ಗುಣ ಹಾಗೂ ಸೇವಾ ಮನೋಭಾವಕ್ಕೆ ಗೊಗೊಯಿ ಕುಟುಂಬ ಧನ್ಯವಾದ ಹೇಳಿದೆ. ``ರಕ್ತದಾನ ಮಾಡಿದ್ದಕ್ಕೆ  ಧನ್ಯವಾದ ಸೂಚಕವಾಗಿ ಆತನಿಗೆ ಏನಾದರೂ ನೀಡಲೆತ್ನಿಸಿದಾಗ ಆತ ನಿರಾಕರಿಸಿದ,'' ಎಂದು ಗೊಗೊಯಿ ಅವರ ಸಂಬಂಧಿ ಬಿನೋದ್ ಬೈಶ್ಯ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X