ಲೋಕಸಭಾ ಚುನಾವಣೆಯ ಆರನೇ ಹಂತ: 59 ಕ್ಷೇತ್ರಗಳಲ್ಲಿ ನಾಳೆ ಮತದಾನ

ಹೊಸದಿಲ್ಲಿ, ಮೇ 11:ಲೋಕಸಭಾ ಚುನಾವಣೆಯ ಆರನೇ ಹಂತದಲ್ಲಿ ಏಳು ರಾಜ್ಯಗಳ 59 ಕ್ಷೇತ್ರಗಳಲ್ಲಿ ರವಿವಾರ ಮತದಾನ ನಡೆಯಲಿದೆ.
ಉತ್ತರ ಪ್ರದೇಶದ 14,ಹರ್ಯಾಣದ ಎಲ್ಲ 10,ಪ.ಬಂಗಾಳ,ಬಿಹಾರ ಮತ್ತು ಮಧ್ಯಪ್ರದೇಶಗಳ ತಲಾ 8,ದಿಲ್ಲಿಯ ಎಲ್ಲ 7 ಮತ್ತು ಜಾರ್ಖಂಡ್ನ ನಾಲ್ಕು ಕ್ಷೇತ್ರಗಳಲ್ಲಿಯ ಮತದಾರರು ತಮ್ಮ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರಾದ ರಾಧಾಮೋಹನ ಸಿಂಗ್, ಹರ್ಷವರ್ಧನ,ಮೇನಕಾ ಗಾಂಧಿ,ನರೇಂದರ್ ಸಿಂಗ್ ತೋಮರ್,ಕೃಷ್ಣ ಪಾಲ್ ಗುರ್ಜರ್ ಮತ್ತು ರಾವ್ ಇಂದ್ರಜಿತ ಸಿಂಗ್ ಸೇರಿದ್ದಾರೆ. ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಗೌತಮ ಗಂಭೀರ್,ದಿಲ್ಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್,ಬಾಕ್ಸರ್ ಕಾಂಗ್ರೆಸ್ನ ವಿಜೇಂದರ್ ಸಿಂಗ್ ಮತ್ತು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹಣೆಬರಹವೂ ನಾಳೆಯೇ ನಿರ್ಧಾರವಾಗಲಿದೆ.
Next Story