Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಸೂಜಿದಾರ: ಬದುಕು ಸೂಜಿ; ಮನಸು ದಾರ

ಸೂಜಿದಾರ: ಬದುಕು ಸೂಜಿ; ಮನಸು ದಾರ

ವಾರ್ತಾಭಾರತಿವಾರ್ತಾಭಾರತಿ12 May 2019 12:01 AM IST
share
ಸೂಜಿದಾರ: ಬದುಕು ಸೂಜಿ; ಮನಸು ದಾರ

ರಂಗಭೂಮಿ ಕಲಾವಿದರೇ ಹೆಚ್ಚು ಪಾಲ್ಗೊಂಡಿರುವ ಚಿತ್ರ ಎನ್ನುವುದರ ಜೊತೆಗೆ ಯಶಸ್ವಿ ನಾಯಕಿ ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣಗಳಿಂದ ಗಮನ ಸೆಳೆದಂತಹ ಚಿತ್ರ ಸೂಜಿದಾರ. ಸಿನೆಮಾದಲ್ಲಿ ಕೂಡ ರಂಗಭೂಮಿ ಶೈಲಿಯನ್ನು ಉಳಿಸಿಕೊಂಡೇ ಪ್ರಯೋಗಾತ್ಮಕ ಎನ್ನಬಹುದಾದ ಚಿತ್ರ ಮಾಡಿದ್ದಾರೆ ನಿರ್ದೇಶಕ ಮೌನೇಶ್ ಬಡಿಗೇರ್.

ಚಿತ್ರದ ನಾಯಕ ಶಂಕರ ಓಡುತ್ತಲೇ ಇರುತ್ತಾನೆ. ಅದು ಭಯದ ಓಟ. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾದೀತೇನೋ ಎನ್ನುವ ಓಟ. ಆದರೆ ಆತನ ಓಟಕ್ಕೆ ಕಾರಣವಾದ ಘಟನೆ ರೋಚಕ. ಕರಾವಳಿಯಲ್ಲಿ ನಡೆದಂತಹ ಘಟನೆ. ಶಂಕರನ ನಿಜವಾದ ಹೆಸರು ಶಬೀರ್. ಆತ ಹಿಂದೂ ಹುಡುಗಿಯೊಬ್ಬಳನ್ನು ಪ್ರೀತಿಸಿರುತ್ತಾನೆ. ಆಕೆಯೂ ಆತನನ್ನು ಪ್ರೇಮಿಸಿರುತ್ತಾಳೆ. ಆದರೆ ಇದರ ನಡುವೆ ಬೇರೊಂದು ಹುಡುಗಿಗೆ ಮಾನ ಹಾನಿ ಮಾಡಿದ ಘಟನೆಯಲ್ಲಿ ಶಬೀರ್ ಸಿಕ್ಕಿಕೊಳ್ಳುತ್ತಾನೆ. ಆದರೆ ಅದು ಸುಳ್ಳು ಆರೋಪ ಎನ್ನುವುದನ್ನು ಸಾಬೀತು ಪಡಿಸಲಾಗದ ಶಬೀರ್ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಹಾಗೆ ಶುರುವಾದ ಓಟಕ್ಕೆ ಕ್ಲೈಮ್ಯಾಕ್ಸ್ ನಲ್ಲಿ ಒಂದು ಅರ್ಥ ಸಿಗುತ್ತದೆ. ಆದರೆ ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರಕುತ್ತದೆ ಎಂದು ಹೇಳಲಾಗದು. ಆದರೆ ತಾರ್ಕಿಕವಾದ ಅಂತ್ಯ ಖಂಡಿತವಾಗಿಯೂ ಇದೆ.

ಕರಾವಳಿಗೆ ಸಂಬಂಧಿಸಿದಂತೆ ನೈಜವೆನಿಸುವ ಘಟನೆಗಳ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಚಿತ್ರ ಇದು. ಶಂಕರ್ ಮತ್ತು ಶಬೀರ್ ಎಂಬ ಎರಡು ಹೆಸರುಗಳಲ್ಲಿ ಚಿತ್ರದ ಕೇಂದ್ರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿರುವವರು ಯಶ್ ಶೆಟ್ಟಿ. ಇದುವರೆಗೆ ಸೈಕೋ ಮಾದರಿಯ ಖಳನಾಗಿ ಗಮನ ಸೆಳೆದಿದ್ದ ಅವರು, ಚಿತ್ರದ ಮೂಲಕ ಒಬ್ಬ ಅಮಾಯಕ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹರಿಪ್ರಿಯಾ ಸಿನೆಮಾ ಎಂದು ಸುದ್ದಿಯಾಗಿದ್ದರೂ ಕೂಡ, ಚಿತ್ರದ ಕತೆ ನಾಯಕನ ಬದುಕನ್ನೇ ಪ್ರಮುಖವಾಗಿ ಹೇಳಿರುವುದು ನಿಜ. ಆದರೆ ಆತನ ಒಟ್ಟು ಸಮಸ್ಯೆಗಳ ಪರಿಹಾರವನ್ನು ಪದ್ಮಾ ಎನ್ನುವ ಪಾತ್ರದ ಮೂಲಕ ಹರಿಪ್ರಿಯಾ ಕೈಗಳಲ್ಲಿ ಇರಿಸಲಾಗಿದೆ. ನಿನ್ನೆಗಳ ನೆನಪಿರದ ಪದ್ಮಾ ನಾಳೆಗಳ ಕನಸುಗಳ ಮೂಲಕ ಹೇಗೆ ಇಂದಿನವರ ಕಣ್ಣಲ್ಲಿ ಕೆಟ್ಟವಳಾಗುತ್ತಾಳೆ ಎನ್ನುವುದನ್ನು ನಿರ್ದೇಶಕರು ಸೊಗಸಾಗಿ ತೋರಿಸಿದ್ದಾರೆ.

ಪದ್ಮಾಳ ಪತಿಯಾಗಿ ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ. ಅವರು ಮತ್ತು ಚೈತ್ರಾ ಕೋಟೂರ್ ರಂಗಭೂಮಿ ಕಲಾವಿದರಾಗಿ ಪರದೆಯ ಮೇಲೆ ಹೆಚ್ಚು ಹೊತ್ತು ಕಾಣಿಸಿಕೊಳ್ಳಲು ಬಹುಶಃ ಬಡಿಗೇರ್ ಅವರ ರಂಗಪ್ರೀತಿಯೇ ಕಾರಣವಿರಬಹುದು. ರಂಗ ಮತ್ತು ಜೀವನದ ರಂಗುಗಳನ್ನು ಸಮನ್ವಯಗೊಳಿಸುವಂತೆ ಕೆಲವು ದೃಶ್ಯಗಳನ್ನು ಹೊಂದಿಸಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಚೈತ್ರಾ ಅವರ ನಿರ್ವಹಣೆಯ ರಾಜಿ ಮತ್ತು ಆಕೆಯ ಜೋಡಿಯ ಪಾತ್ರದ ಅನಗತ್ಯ ವೆನಿಸುವ ಕೆಲವೊಂದು ದೀರ್ಘಾವಧಿಯ ದೃಶ್ಯಗಳಿಗೆ ಕಡಿವಾಣ ಹಾಕಿದ್ದರೆ ಮುಖ್ಯ ಕತೆ ಇನ್ನಷ್ಟು ಆಸಕ್ತಿಯಿಂದ ನೋಡಿಸಿಕೊಂಡು ಹೋಗುತ್ತಿತ್ತು. ಇನ್ನು ಉಳಿದ ಹಾಗೆ ಪ್ರೊಫೆಸರ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಎಂದಿನಂತೆ ಅಮೋಘ ಅಭಿನಯ ನೀಡಿದ್ದಾರೆ.

ಭಾಸ್ಕರ ಮಣಿಪಾಲ, ‘ಒಂದಲ್ಲ ಎರಡಲ್ಲ’ ಖ್ಯಾತಿಯ ಆನಂದ್ ಸೇರಿದಂತೆ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಂಡ ರಂಗಭೂಮಿ ಕಲಾವಿದರು ಕೂಡ ನೆನಪಲ್ಲಿ ಉಳಿಯುವಂತೆ ನಟಿಸಿದ್ದಾರೆ. ಖುದ್ದು ನಿರ್ಮಾಪಕ ಅಭಿಜಿತ್ ಕೋಟೆಗಾರ್ ಕೂಡ ಈ ಪ್ರಶಂಸೆಗೆ ಪಾತ್ರರಾಗುತ್ತಾರೆ. ಚಿತ್ರಕ್ಕೆ ಪ್ರತ್ಯೇಕವಾಗಿ ಕಾಸ್ಟ್ಯೂಮ್ ಡಿಸೈನರ್ ಇಲ್ಲ ಎಂದು ಹೇಳಿಕೊಂಡಿದ್ದರೂ ಒಟ್ಟು ವಸ್ತ್ರ ವಿನ್ಯಾಸ ಗಮನ ಸೆಳೆಯುತ್ತದೆ.

ಶಿಸ್ತು, ನಿಯಮಗಳ ಹೆಸರಿನಲ್ಲಿ ಮನೆಯ ಮಾನ ಕಾಪಾಡಲಾ ಗದೆ ಊರಿಗೆ ನಿಯಮ ಹೇರಲು ಪ್ರಯತ್ನಿಸುವ ಅಚ್ಯುತ್ ಕುಮಾರ್ ಅವರ ಪಾತ್ರ ಮತ್ತು ರಂಗಭೂಮಿಯ ರಾಮ ಹೇಗೆ ನಿಜ ಬದುಕಿನ ರಾವಣನಾಗಿದ್ದಾನೆ ಎಂದು ಸಾರುವ ಸುಚೇಂದ್ರ ಪ್ರಸಾದ್ ಪಾತ್ರಗಳು ಒಟ್ಟು ಚಿತ್ರದ ಭಾವವನ್ನು ಹಿಡಿದಿಡುವಲ್ಲಿ ಯಸ್ವಿಯಾಗಿದೆ. ಸಾಮಾನ್ಯ ಪ್ರೇಕ್ಷಕರಿಗೆ ಚಿತ್ರದ ಅಂತ್ಯ ಮತ್ತೊಂದು ಭಾಗಕ್ಕೆ ಮುನ್ನುಡಿಯಾಗಿ ಕಾಣಬಹುದು. ಆದರೆ ಬದುಕಿನ ಓಟ ನಿರಂತರ ಎಂದು ಅರ್ಥ ಮಾಡಿಕೊಂಡವರಿಗೆ ಸೂಜಿದಾರದಲ್ಲೇ ಹರಿದ ಮನಸ್ಸು ಹೊಲಿಸಿಕೊಂಡ ತೃಪ್ತಿಯನ್ನು ಚಿತ್ರ ನೀಡಬಲ್ಲದು.

ತಾರಾಗಣ: ಯಶ್ ಶೆಟ್ಟಿ, ಹರಿಪ್ರಿಯಾ
ನಿರ್ದೇಶನ: ಮೌನೇಶ್ ಬಡಿಗೇರ್
ನಿರ್ಮಾಣ: ಅಭಿಜಿತ್ ಮತ್ತು ಸಚೀಂದ್ರನಾಥ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X