Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದೇವಯಾನಿ-ಶರ್ಮಿಷ್ಠೆ: ಕಾವ್ಯ ನಾಟಕ

ದೇವಯಾನಿ-ಶರ್ಮಿಷ್ಠೆ: ಕಾವ್ಯ ನಾಟಕ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ13 May 2019 12:00 AM IST
share
ದೇವಯಾನಿ-ಶರ್ಮಿಷ್ಠೆ: ಕಾವ್ಯ ನಾಟಕ

80ರ ದಶಕದಲ್ಲಿ ನಾಟಕ ಸಾಹಿತ್ಯದ ಬಹುದೊಡ್ಡ ಪ್ರಯೋಗವೇ ನಡೆಯಿತು. ಹಿರಿಯ ದಿಗ್ಗಜರ ನಾಟಕ ಕೃತಿಗಳು ಹೊರ ಬಂದುದು ಅದೇ ಸಮಯದಲ್ಲಿ. ಇತ್ತೀಚಿನ ದಿನಗಳಲ್ಲಿ ನಾಟಕ ಪ್ರಯೋಗಗಳಿಗೆ ವಿಶೇಷ ಪ್ರೋತ್ಸಾಹ ಸಿಗದೇ ಇರುವುದರಿಂದಲೋ ಏನೋ, ನಾಟಕ ಕೃತಿಗಳು ಹೊರಬರುವುದು ಕಡಿಮೆಯಾಗುತ್ತಿದೆ. ಅನೇಕರು ಕಾದಂಬರಿ, ಕತೆಗಳನ್ನೇ ನಾಟಕ ಮಾಡುತ್ತಿದ್ದಾರೆ.

‘ದೇವಯಾನಿ-ಶರ್ಮಿಷ್ಠೆ’ ಗೋಪಾಲ ಬಿ. ಶೆಟ್ಟಿ ಅವರು ಬರೆದ ಕಾವ್ಯ ನಾಟಕ. ಗೋಪಾಲ ಬಿ. ಶೆಟ್ಟಿ ಅವರು ತಮ್ಮ ವಿಮರ್ಶೆ, ವೈಚಾರಿಕ ಲೇಖನಗಳಿಂದ ಗುರುತಿಸಲ್ಪಟ್ಟವರು. ಅವರ ಪ್ರಖರ ವೈಚಾರಿಕ ಮಾತುಗಳು ಕರಾವಳಿಯಲ್ಲಿ ವೌಢ್ಯ, ಮತಾಂಧತೆಗಳನ್ನು ತೊಲಗಿಸಲು ಸಾಕಷ್ಟು ಕೆಲಸ ಮಾಡಿವೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಗೋಪಾಲ ಬಿ. ಶೆಟ್ಟಿಯವರು 80 ರ ದಶಕದಲ್ಲೇ ಕಾವ್ಯನಾಟಕವೊಂದನ್ನು ಬರೆದಿರುವುದು ವಿಶೇಷವಾಗಿದೆ. 1980 ಸಮಯದಲ್ಲಿ ಮುಂಬೈ ಬಂಟರ ಸಂಘದ ಮುಖವಾಣಿ ಬಂಟರವಾಣಿಯಲ್ಲಿ ಈ ನಾಟಕ ಧಾರಾವಾಹಿಯಾಗಿ ಹರಿದು ಬಂದಿದೆ. ಇದು ಪುನರ್‌ಮುದ್ರಣಗೊಳ್ಳಲು ಕಾರಣ, ‘ಸಮೂಹ’ ತಂಡದ ಉದ್ಯಾವರ ಮಾಧವಾಚಾರ್ಯ ಅವರು ಇದನ್ನು 2018ರಲ್ಲಿ ರಂಗಪ್ರಯೋಗಕ್ಕೆ ಒಡ್ಡಲು ಮುಂದಾದುದು. ಈ ನಾಟಕದ ಪ್ರಥಮ ಪ್ರದರ್ಶನ ಉಡುಪಿಯಲ್ಲಿ ನಡೆಯಿತು. ನಾಟಕದ ಸವಾಲುಗಳನ್ನು ನಿರ್ದೇಶಕರು ಯಶಸ್ವಿಯಾಗಿ ನಿಭಾಯಿಸಿದದರು.
 ‘ದೇವಯಾನಿ-ಶರ್ಮಿಷ್ಠೆ’ ಕತೆ ಬೇರೆ ಬೇರೆ ರೂಪಗಳಲ್ಲಿ ಓದುಗರನ್ನು ತಲುಪಿವೆ. ಕಾದಂಬರಿಯಾಗಿ, ಕಾವ್ಯವಾಗಿ, ಕತೆಯಾಗಿಯೂ ದೇವಯಾನಿ, ಶರ್ಮಿಷ್ಠೆ ಪಾತ್ರಗಳನ್ನು ವಿಶ್ಲೇಷಿಸಲಾಗಿದೆ. ನಾಟಕವಾಗಿ ತುಸು ಭಿನ್ನ ರೀತಿಯಲ್ಲಿ ಈ ಪಾತ್ರಗಳನ್ನು ಗೋಪಾಲ ಬಿ. ಶೆಟ್ಟಿ ನಿರೂಪಿಸಿದ್ದಾರೆ.
 ಯಯಾತಿ ಚಂದ್ರವಂಶದ ಅರಸ. ನಹುಷ ಚಕ್ರವರ್ತಿಯ ಪುತ್ರ. ದೇವಯಾನಿ ಅಸುರ ಗುರು ಶುಕ್ರಾಚಾರ್ಯರ ಕುವರಿ. ಶರ್ಮಿಷ್ಠೆ ಅಸುರ ಚಕ್ರವರ್ತಿ ವೃಷಪರ್ವನ ಮಗಳು. ಒಂದು ಹುಡುಗಾಟಿಕೆಯ ಕ್ಷಣ, ವಿಷಮಕ್ಕೆ ತಿರುಗಿ ಇಬ್ಬರ ನಡುವೆ ಕಲಹವಾಗಿ ಶರ್ಮಿಷ್ಠೆಯನ್ನು ಋಷಿಕನ್ಯೆ ದೇವಯಾನಿಯ ದಾಸಿಯನ್ನಾಗಿ ಮಾಡಿತು. ಅಹಮಿಕೆ ಬೇರೆ ಬೇರೆ ರೂಪಗಳನ್ನು ಪಡೆಯುತ್ತದೆ. ಈ ಅಹಮಿಕೆಯ ತಿಕ್ಕಾಟದಲ್ಲಿ ನಲುಗುವ ಪ್ರೀತಿಯನ್ನು ನಾಟಕ ನಿರೂಪಿಸುತ್ತದೆ. ಕಾವ್ಯ ರೂಪಕಕ್ಕೆ ಪೂರಕವಾಗಿ ತಿಳಿ ಹಳೆಗನ್ನಡವನ್ನು ನಾಟಕಕಾರರು ಬಳಸಿದ್ದಾರೆ. ನೂತನ ಪಬ್ಲಿಕೇಶನ್ಸ್, ಉಡುಪಿ ಇವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 52. ಮುಖಬೆಲೆ 80 ರೂ.

share
-ಕಾರುಣ್ಯಾ
-ಕಾರುಣ್ಯಾ
Next Story
X