Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜರಡಿಯಲ್ಲಿ ರೇಡಾರ್ ಇರುವುದು ಐಶ್ವರ್ಯಾಗೆ...

ಜರಡಿಯಲ್ಲಿ ರೇಡಾರ್ ಇರುವುದು ಐಶ್ವರ್ಯಾಗೆ ಗೊತ್ತಿರಲಿಲ್ಲ !

ಪ್ರಧಾನಿ ರೇಡಾರ್ ಹೇಳಿಕೆಗೆ ರವೀಶ್ ಕುಮಾರ್ ಚಾಟಿ

ವಾರ್ತಾಭಾರತಿವಾರ್ತಾಭಾರತಿ13 May 2019 1:49 PM IST
share
ಜರಡಿಯಲ್ಲಿ ರೇಡಾರ್ ಇರುವುದು ಐಶ್ವರ್ಯಾಗೆ ಗೊತ್ತಿರಲಿಲ್ಲ !

ಬಾಲಕೋಟ್ ವಾಯುದಾಳಿ ಸಂದರ್ಭ ಮೋಡ ಕವಿದ ವಾತಾವರಣವಿದ್ದರೂ ಅದರಿಂದ ರೇಡಾರ್ ನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ದಾಳಿ ಮಾಡಲು ಹೇಳಿದೆ ಎಂದು ಪ್ರಧಾನಿ ಮೋದಿ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಮೋಡ ಹಾಗು ರೇಡಾರ್ ಕುರಿತ ಮೋದಿ ಜ್ಞಾನ ಜನರ ನಡುವೆ ತಮಾಷೆಯ ವಿಷಯವಾದರೆ, ವಾಯುದಾಳಿಯಂತಹ ಗಂಭೀರ ವಿಷಯಗಳ ಬಗ್ಗೆ ಪ್ರಧಾನಿ ಇಷ್ಟು ಹಗುರವಾಗಿ ಹೇಗೆ ಮಾತನಾಡಿದರು ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಮೋಡಗಳಿದ್ದರೆ ರೇಡಾರ್ ನಿಂದ ತಪ್ಪಿಸಿಕೊಳ್ಳಬಹುದು ಎಂಬ ಪ್ರಧಾನಿ ಹೇಳಿಕೆ ಕುರಿತ ವ್ಯಂಗ್ಯ, ತಮಾಷೆ ಮಾತ್ರ ನಿಲ್ಲುತ್ತಲ್ಲೇ ಇಲ್ಲ. ಈ ಬಗ್ಗೆ ಪ್ರಧಾನಿಯನ್ನು ಕುಟುಕುವವರಲ್ಲಿ ಹೊಸ ಸೇರ್ಪಡೆ ಹಿರಿಯ ಪತ್ರಕರ್ತ, ವಿಶ್ಲೇಷಕ ರವೀಶ್ ಕುಮಾರ್. ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಬರೆದಿರುವ ರವೀಶ್ ಪ್ರಧಾನಿ ಹೇಳಿಕೆಯನ್ನು ಹಿಟ್ ಹಿಂದಿ ಚಲನಚಿತ್ರ ' ಹಮ್ ದಿಲ್ ದೇ ಚುಕೇ ಸನಮ್ ' ನಲ್ಲಿ ಬರುವ ಹಾಡೊಂದಕ್ಕೆ ಸಮೀಕರಿಸಿ ಚಾಟಿ ಬೀಸಿದ್ದಾರೆ. ಆ ಚಿತ್ರದಲ್ಲಿ  ಸಲ್ಮಾನ್ ಖಾನ್ ರನ್ನು ಪ್ರೀತಿಸುವ ಐಶ್ವರ್ಯ ರೈ ಗೆ ಅಜಯ್ ದೇವ್ಗನ್ ಜೊತೆ ಮದುವೆಯಾದ ಮೇಲಿನ ಕತೆ ಇದೆ. ಚಿತ್ರದ ಹಾಡೊಂದರಲ್ಲಿ ಎಲ್ಲ ಮಹಿಳೆಯರು ತಮ್ಮ ಪತಿಗಾಗಿ ಪ್ರಾರ್ಥಿಸುವಾಗ  ಐಶ್ವರ್ಯಗೆ ಮಾತ್ರ ಸಲ್ಮಾನ್ ಕಾಣುತ್ತಿರುತ್ತಾರೆ. ಕೊನೆಗೆ ಆಕೆಯ ಕೈಗೆ ಅಡುಗೆ ಮನೆಯಲ್ಲಿ ಸೋಸಲು ಬಳಸುವ ಜರಡಿ ಕೊಟ್ಟಾಗ ಎದುರಲ್ಲಿ ಅಜಯ್ ದೇವಗನ್ ಬರುತ್ತಾರೆ.

ಆ ಹಾಡಿನ ಲಿಂಕ್ ಶೇರ್ ಮಾಡಿರುವ ರವೀಶ್ " ಚಂದ್ರ ಮೋಡಗಳ ನಡುವೆ ಅವಿತುಕೊಂಡಿದ್ದ. ಜರಡಿಯಲ್ಲಿ ರೇಡಾರ್ ಇರುವುದು ಐಶ್ವರ್ಯಾಗೆ ಗೊತ್ತಿರಲಿಲ್ಲ. ಜರಡಿ ಕೈಗೆತ್ತಿಕೊಳ್ಳುವವರೆಗೂ ಸಲ್ಮಾನ್ ಮಾತ್ರ ಆಕೆಗೆ ಕಾಣುತ್ತಿದ್ದ. ಜರಡಿ ಕೈಗೆತ್ತಿಕೊಂಡ ಕೂಡಲೇ ಅಜಯ್ ದೇವಗನ್ ಎದುರು ಬಂದ. ಜರಡಿಯಲ್ಲಿರುವ ರೇಡಾರ್ ಆಗ ತನ್ನ ಕೆಲಸ ಮಾಡಿಬಿಡುತ್ತದೆ. ಪ್ರತಿ ಭಾರತೀಯ ತನ್ನ ಅಡುಗೆ ಮನೆಯಲ್ಲಿರುವ ಜರಡಿಯನ್ನು ಸರಿಯಾಗಿ ಬಳಸಿದರೆ ದೇಶದ ವಾಯುಪ್ರದೇಶಕ್ಕೆ ಯಾವುದೇ ಹಾನಿಯಾಗಲು ಸಾಧ್ಯವಿಲ್ಲ. ಪ್ರತಿ ವಿಮಾನದಲ್ಲಿ ಒಂದು ಜರಡಿ ಇರಬೇಕು. ಮೋಡ ಕವಿದ ಕೂಡಲೇ ಅದನ್ನು ರೇಡಾರ್ ಆಗಿ ಬಳಸಬಹುದು. ಈ ಹಾಡು ನೋಡಿ. ಇದರಲ್ಲಿ ವೈಜ್ಞಾನಿಕತೆ  ತುಂಬಿ ತುಳುಕುತ್ತಿದೆ. ಈ ವಿಷಯ ಪ್ರಧಾನಿಯವರಿಗೆ ಗೊತ್ತಿತ್ತು. ನನಗೆ ಮಾತ್ರ ಈಗಷ್ಟೇ ಗೊತ್ತಾಗಿದೆ. " ಎಂದು ಹೇಳಿ ಪ್ರಧಾನಿ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X