Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಲಕ್ಷ್ಮೀನಗರದಲ್ಲಿ ವಿಶಿಷ್ಟ ಜಲಸೇವೆ:...

ಲಕ್ಷ್ಮೀನಗರದಲ್ಲಿ ವಿಶಿಷ್ಟ ಜಲಸೇವೆ: ನೀರಿಗಾಗಿ ಕೈಜೋಡಿಸಿದ ಸರ್ವಧಮೀಯರು

ನೀರು ಪೂರೈಕೆಯಲ್ಲಿ ಕೋಮು ಸೌಹಾರ್ದತೆ ಮೆರೆದ ಗ್ರಾಮಸ್ಥರು

ವಾರ್ತಾಭಾರತಿವಾರ್ತಾಭಾರತಿ14 May 2019 9:15 PM IST
share
ಲಕ್ಷ್ಮೀನಗರದಲ್ಲಿ ವಿಶಿಷ್ಟ ಜಲಸೇವೆ: ನೀರಿಗಾಗಿ ಕೈಜೋಡಿಸಿದ ಸರ್ವಧಮೀಯರು

ಉಡುಪಿ, ಮೇ 14: ಇಡೀ ಗ್ರಾಮಕ್ಕೆ ಗ್ರಾಮವೇ ನೀರಿಗಾಗಿ ಹಾತೊರೆಯುತ್ತಿರುವ ಸಂದರ್ಭದಲ್ಲಿ ಕೊಡವೂರು ಲಕ್ಷ್ಮೀನಗರದ ಎಲ್ಲಧರ್ಮಿಯರು ಜಾತಿ ಮತಗಳ ಬೇಧವಿಲ್ಲದೆ ಅಗತ್ಯ ಇರುವವರಿಗೆ ನೀರು ಪೂರೈಸುವಲ್ಲಿ ಒಂದಾಗಿದ್ದಾರೆ. ಈ ಮೂಲಕ ಲಕ್ಷ್ಮೀನಗರದ ನಿವಾಸಿಗಳು ನೀರು ಹಂಚಿಕೆಯಲ್ಲಿ ಸೌಹಾದರ್ತೆ ಮೆರೆಯುತ್ತಿದ್ದಾರೆ.

ನೀರು ಪೂರೈಕೆಗೆ ಬೇಕಾದ ವಾಹನ, ಟ್ಯಾಂಕಿನ ವ್ಯವಸ್ಥೆಯನ್ನು ಹಿಂದೂಗಳು ಕಲ್ಪಿಸಿದರೆ, ಕ್ರಿಶ್ಚಿಯನ್, ಹಿಂದೂಗಳ ಮನೆಯ ಬಾವಿಯಿಂದ ನೀರು ಪಡೆದು ಮುಸ್ಲಿಮ್ ಚಾಲಕ ಆ ನೀರನ್ನು ಅಗತ್ಯ ಇರುವವರಿಗೆ ರಮಝಾನ್ ಉಪವಾಸ ವೃತ್ತ ಆಚರಣೆ ಮಧ್ಯೆಯೂ ಹಗಲಿರುಳು ಎನ್ನದೆ ಹಂಚಿಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಳೆದ 10-12 ದಿನಗಳಿಂದ ಇಡೀ ಲಕ್ಷ್ಮೀನಗರವೇ ಈ ರೀತಿಯ ಜಲಸೇವೆಯಲ್ಲಿ ತೊಡಗಿಸಿಕೊಂಡಿದೆ.

ಉಡುಪಿ ನಗರಸಭೆ ವ್ಯಾಪ್ತಿಯ ಕೊಡವೂರು ಗ್ರಾಮದ ಲಕ್ಷ್ಮೀನಗರದಲ್ಲಿ ಬಜೆಯಲ್ಲಿ ನೀರು ಖಾಲಿಯಾಗಿರುವ ದಿನದಿಂದ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀನಗರದ ಜಯ ಪೂಜಾರಿ ಎಂಬವರು ನೀಡಿದ ವಾಹನ ದಲ್ಲಿ ಸಿರಿ ಕುಮಾರ ಕ್ಷೇತ್ರದ ಸಂಸ್ಥೆ ನೀಡಿರುವ ಟ್ಯಾಂಕ್ ಮೂಲಕ ಚಾರ್ಲಿ ಮ್ಯಾಥ್ಯು, ಸಂಜೀವ ಪೂಜಾರಿ, ಸಚಿನ್ ಶೆಟ್ಟಿ ಸೇರಿದಂತೆ ಹಲವು ಮಂದಿ ನೀಡಿರುವ ಬಾವಿಯ ನೀರನ್ನು ಮುಹಮ್ಮದ್ ಆಸೀಫ್, ಲಕ್ಷ್ಮೀನಗರದ ಗರಡಿ, ಕಾಫಿ ಮಿಲ್, ಪಾಳೆಕಟ್ಟೆ ಪ್ರದೇಶಗಳ ಮನೆಮನೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ.

‘ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆ ನೀರು ಪೂರೈಕೆ ಮಾಡಲಾಗುತ್ತಿದೆ. ನಿನ್ನೆ ಸುಮಾರು 50 ಮನೆಗಳಿಗೆ ನೀರು ಪೂರೈಕೆ ಮಾಡಲಾಗಿದೆ. ನೀರಿನ ಅಗತ್ಯದ ಬಗ್ಗೆ ಕರೆ ಬಂದ ಕೂಡಲೇ ನೀರು ಪೂರೈಸುವ ಕೆಲಸ ಮಾಡಲಾಗು ತ್ತಿದೆ. ಕುಡಿಯುವ ನೀರಿಗೆ ಜಾತಿ ಧರ್ಮ ಎಂಬುದಿಲ್ಲ. ನೀರು ಎಲ್ಲರಿಗೂ ಬೇಕಾಗಿದೆ. ನಮ್ಮ ಮನೆಯಲ್ಲೂ ನೀರಿನ ಸಮಸ್ಯೆ ಇದೆ. ಆದರೂ ಜನರಿಗಾಗಿ ನಮ್ಮಿಂದ ಸೇವೆ ಮಾಡುತ್ತಿದ್ದೇನೆ’ ಎಂದು ಮುಹಮ್ಮದ್ ಆಸೀಫ್ ಹೇಳಿದರು.

ಸೇವೆಗೆ ಅಡ್ಡಿಯಾಗದ ಉಪವಾಸ ವೃತ

ಮುಹಮ್ಮದ್ ಆಸೀಫ್ ಅವರಿಗೆ ನೀರಿನ ವಿಚಾರದಲ್ಲಿ ಜನರ ಸೇವೆ ಮಾಡಲು ರಮಝಾನ್ ಉಪವಾಸ ವೃತ್ತ ಆಚರಣೆ ಅಡ್ಡಿಯಾಗಲಿಲ್ಲ. ಬೆಳಗಿನ ಜಾವ ಸಹರಿ ಹಾಗೂ ಸಂಜೆಯ ಇಫ್ತಾರ್ ಮುಗಿಸಿ ಹೊರಡುವ ಆಸೀಫ್ ಮನೆ ಮನೆಗೆ ತೆರಳಿ ನೀರು ಸರಬರಾಜು ಮಾಡುತ್ತಿದ್ದಾರೆ. ಇವರೊಂದಿಗೆ ಚಾರ್ಲಿ ಮ್ಯಾಥ್ಯು ಕೂಡ ಕೈಜೋಡಿಸಿದ್ದಾರೆ.

ಹಣ್ಣಿನ ವ್ಯಾಪಾರ ನಡೆಸುತ್ತಿರುವ ಆಸೀಫ್ ಬೆಳಗಿನ ಜಾವ 4ಗಂಟೆಗೆ ಎದ್ದು ಸಹರಿ ಮುಗಿಸಿ ನಮಾಝ್ ನಿರ್ವಹಿಸಿ 6ಗಂಟೆ ಸುಮಾರಿಗೆ ಜಯ ಪೂಜಾರಿ ಅವರ ವಾಹನದಲ್ಲಿ ನೀರು ತುಂಬಿಸಿಕೊಂಡು ಮನೆಮನೆಗೆ ಪೂರೈಕೆ ಮಾಡುತ್ತಾರೆ. ಬೆಳಗ್ಗೆ 8ಗಂಟೆಯವರೆಗೆ ಈ ಸೇವೆಯನ್ನು ಮುಗಿಸಿ ಬಳಿಕ ತನ್ನ ವೃತ್ತಿಯನ್ನು ಮುಂದುವರೆಸುತ್ತಾರೆ.

ಸಂಜೆ ವೇಳೆ ಮತ್ತೆ ನೀರು ಪೂರೈಕೆಯಲ್ಲಿ ತೊಡಗಿಸಿಕೊಳ್ಳುವ ಆಸೀಫ್, ಇಫ್ತಾರ್‌ಗೆ ಸ್ವಲ್ಪ ಸಮಯ ತೆಗೆದುಕೊಂಡು ಬಳಿಕ ರಾತ್ರಿ 8:30ರವರೆಗೂ ನೀರು ಪೂರೈಸುವ ಕೆಲಸ ಮಾಡುತ್ತಿದ್ದಾರೆ.

‘ನೀರು ಪೂರೈಕೆ ಮಾಡುವ ವಾಹನಕ್ಕೆ ಬೇಕಾದ ಡಿಸೇಲ್‌ನ ಹಣವನ್ನು ಜನರಿಂದ ಸಂಗ್ರಹಿಸಲಾಗುತ್ತಿದೆ. ದಿನಕ್ಕೆ 7-10ಸಾವಿರ ಲೀಟರ್ ನೀರು ಸರಬ ರಾಜು ಮಾಡುತ್ತಿದ್ದೇವೆ. ಒಂದು ಕುಟುಂಬಕ್ಕೆ 300ಲೀಟರ್‌ನಷ್ಟು ನೀರು ನೀಡಲಾಗುತ್ತದೆ. ನಮ್ಮಲ್ಲಿ ಸುಮಾರು 300 ಮನೆಗಳಿದ್ದು, ನೀರಿನ ಅಭಾವ ತುಂಬಾ ಇದೆ.
- ಮಾಧವ ಬನ್ನಂಜೆ, ಸಾಮಾಜಿಕ ಕಾರ್ಯಕರ್ತ, ಕೊಡವೂರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X