Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನೀವು ಏಕೆ ಬಿಕ್ಕಳಿಸುತ್ತೀರಿ ಎನ್ನುವುದು...

ನೀವು ಏಕೆ ಬಿಕ್ಕಳಿಸುತ್ತೀರಿ ಎನ್ನುವುದು ನಿಮಗೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ14 May 2019 10:04 PM IST
share
ನೀವು ಏಕೆ ಬಿಕ್ಕಳಿಸುತ್ತೀರಿ ಎನ್ನುವುದು ನಿಮಗೆ ಗೊತ್ತೇ?

 ನಾವೆಲ್ಲರೂ ಆಗಾಗ್ಗೆ ಬಿಕ್ಕಳಿಸುತ್ತಿರುತ್ತೇವೆ,ಆದರೆ ಬಿಕ್ಕಳಿಕೆ ಏಕೆ ಉಂಟಾಗುತ್ತದೆ ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಬಿಕ್ಕಳಿಕೆಯು ಶ್ವಾಸಕೋಶಗಳ ತಳದಲ್ಲಿರುವ ಡಯಾಫ್ರಮ್ ಎಂದು ಕರೆಯಲಾಗುವ ಸ್ನಾಯುವಿನ ದಿಢೀರ್ ಸೆಳೆತವಾಗಿದೆ ಮತ್ತು ಇದರ ಬೆನ್ನಿಗೇ ಧ್ವನಿತಂತುಗಳು ಏಕಾಏಕಿ ಮುಚ್ಚಿಕೊಳ್ಳುತ್ತವೆ. ಇದು ವಿಶಿಷ್ಟವಾದ ‘ಹಿಕ್’ ಶಬ್ದವನ್ನು ಹೊರಡಿಸುತ್ತದೆ.

ಯಾವುದೇ ಸ್ಪಷ್ಟ ಕಾರಣವಿಲ್ಲದೆ ದಿಢೀರ್‌ನೆ ಉಂಟಾಗುವ ಮತ್ತು ಕೆಲವೇ ನಿಮಿಷಗಳ ಕಾಲ ಉಳಿಯುವ ಬಿಕ್ಕಳಿಕೆಗಳು ಅತ್ಯಂತ ಸಾಮಾನ್ಯವಾಗಿವೆ. ಕೆಲವೊಮ್ಮೆ ಬಿಕ್ಕಳಿಕೆಗೆ ಶರೀರದಲ್ಲಿಯ ಯಾವುದೋ ಅನಾರೋಗ್ಯ ಕಾರಣವಾಗಿರಬಹುದು ಮತ್ತು ಇಂತಹುದು ಸಾಮಾನ್ಯವಾಗಿ ಕಡಿಮೆ.

ಬಿಕ್ಕಳಿಕೆ ವಯಸ್ಕರಿಗೆ ಮಾತ್ರ ಸೀಮಿತವಲ್ಲ,ಶಿಶುಗಳು ಮತ್ತು ಮಕ್ಕಳನ್ನೂ ಅದು ಕಾಡುತ್ತದೆ. ಬಿಕ್ಕಳಿಕೆಯ ಕುರಿತು ಹೆಚ್ಚಿನ ಮಾಹಿತಿಗಳಿಲ್ಲಿವೆ.....

ಬಿಕ್ಕಳಿಕೆಗೆ ಕಾರಣವೇನು?

ಬಿಕ್ಕಳಿಕೆಗೆ ನಿಖರವಾದ ಕಾರಣವಿನ್ನೂ ಗೊತ್ತಾಗಿಲ್ಲ,ಆದರೆ ಅದನ್ನುಂಟು ಮಾಡುವ ಕೆಲವು ಅಂಶಗಳಿವೆ. ಹೊಟ್ಟೆ ಬಿರಿಯುವಂತೆ ಭೋಜನ,ಗಡಿಬಿಡಿಯಿಂದ ಊಟ ಮಾಡುವುದು,ಅತಿಯಾದ ಮದ್ಯಪಾನ,ಆಹಾರ,ಚ್ಯೂಯಿಂಗ್ ಗಮ್ ಅಥವಾ ಕ್ಯಾಂಡಿಗಳನ್ನು ಅಗಿಯುವಾಗ ಅತಿಯಾದ ಗಾಳಿಯನ್ನು ನುಂಗುವುದು,ಧೂಮ್ರಪಾನ,ತಾಪಮಾನದಲ್ಲಿ ದಿಢೀರ್ ಬದಲಾವಣೆ (ಆಂತರಿಕ ಮತ್ತು ಬಾಹ್ಯ),ತುಂಬ ಬಿಸಿ/ತಂಪು ಪಾನೀಯ ಸೇವನೆ,ಭಾವನಾತ್ಮಕ ಒತ್ತಡ ಮತ್ತು ಉದ್ವೇಗ,ಇಂಗಾಲೀಕೃತ ಪಾನೀಯಗಳ ಸೇವನೆ ಇವು ಇಂತಹ ಕೆಲವು ಸಾಮಾನ್ಯ ಕಾರಣಗಳಾಗಿವೆ.

ಕೆಲವು ವೈದ್ಯಕೀಯ ಸ್ಥಿತಿಗಳೂ ಬಿಕ್ಕಳಿಕೆಯನ್ನುಂಟು ಮಾಡುತ್ತವೆ. ಜಿಇಆರ್‌ಡಿ(ಆಮ್ಲೀಯತೆ),ಪಿತ್ತಕೋಶ ಕಾಯಿಲೆ,ಯಕೃತ್ತು,ಮೇದೋಜ್ಜೀರಕ ಗ್ರಂಥಿ ಮತ್ತು ಹೃದಯದ ಉರಿಯೂತ,ಗರ್ಭಾವಸ್ಥೆ,ಮದ್ಯಸೇವನೆ ಚಟ,ನ್ಯುಮೋನಿಯಾ ಮತ್ತು ರಕ್ತದಲ್ಲಿ ಅತಿಯಾದ ಯೂರಿಯಾ ಮಟ್ಟ ಇಂತಹ ಕೆಲವು ಸಮಸ್ಯೆಗಳಾಗಿವೆ.

  ಬಿಕ್ಕಳಿಕೆ ಸಾಮಾನ್ಯವಾಗಿ ಸ್ವನಿಯಂತ್ರಣಗೊಳ್ಳುವ ಸಮಸ್ಯೆಯಾಗಿದೆ. ಆದರೂ ಅದು 48 ಗಂಟೆಗಳವರೆಗೆ,ಕೆಲವೊಮ್ಮೆ ಎರಡು ತಿಂಗಳು ಮತ್ತು ಅದಕ್ಕೂ ಹೆಚ್ಚಿನ ಸಮಯ ಕಾಡಬಹುದು.

ಬಿಕ್ಕಳಿಕೆಯನ್ನು ಶಮನಿಸಲು ಸಾಮಾನ್ಯವಾಗಿ ಮನೆಮದ್ದುಗಳು ಸಾಕು. ಆದರೆ ಮೇಲೆ ತಿಳಿಸಿರುವಂತೆ ಬಿಕ್ಕಳಿಕೆ ನಿಲ್ಲದೆ ಮುಂದುವರಿದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗಬಹುದು.

ಸಾಮಾನ್ಯವಾಗಿ ಬಿಕ್ಕಳಿಕೆ ತನ್ನಿಂತಾನೇ ನಿಲ್ಲುತ್ತದೆ ಮತ್ತು ವೈದ್ಯಕೀಯ ಚಿಕಿತ್ಸೆಯು ಅಗತ್ಯವಿರುವುದಿಲ್ಲ. ಆದರೆ ಮೂರು ಗಂಟೆಗೂ ಹೆಚ್ಚಿನ ಸಮಯದಿಂದ ಉಳಿದುಕೊಂಡಿದ್ದರೆ,ಆಹಾರ ಸೇವನೆ ಮತ್ತು ನಿದ್ರೆಗೆ ತೊಂದರೆಯನ್ನುಂಟು ಮಾಡುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

10 ಸೆಕೆಂಡ್‌ಗಳವರೆಗೆ ಉಸಿರನ್ನು ಬಿಗಿಹಿಡಿಯುವುದು,ಒಂದು ಗ್ಲಾಸ್ ತಣ್ಣೀರನ್ನು ತ್ವರಿತವಾಗಿ ಸೇವಿಸುವುದು,ಮಂಜುಗಡ್ಡೆ ಬೆರೆತ ನೀರನ್ನು ಗುಟುಕರಿಸುವುದು,ನೀರಿನಿಂದ ಗಾರ್ಗಲ್ ಮಾಡುವುದು,ಸ್ವಲ್ಪ ಸಕ್ಕರೆ ಅಥವಾ ಜೇನು ಸೇವನೆ,ನಿಮ್ಮ ಮಂಡಿಗಳನ್ನು ಎದೆಯತ್ತ ಎಳೆದುಕೊಂಡು ಮುಂದಕ್ಕೆ ಬಗ್ಗುವುದು,ಕುತ್ತಿಗೆಯ ಹಿಂಭಾಗವನ್ನು ಉಜ್ಜುವುದು ಅಥವಾ ತಟ್ಟುವುದು ಇವು ಬಿಕ್ಕಳಿಕೆಯನ್ನು ತಡೆಯಲು ಕೆಲವು ಸರಳ ಉಪಾಯಗಳಾಗಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X