Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮಳೆಯ ಲಯವನ್ನು ಹಿಡಿದಿಡುವ ‘ತಾರಸಿ...

ಮಳೆಯ ಲಯವನ್ನು ಹಿಡಿದಿಡುವ ‘ತಾರಸಿ ಮಲ್ಹಾರ್’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ15 May 2019 12:00 AM IST
share
ಮಳೆಯ ಲಯವನ್ನು ಹಿಡಿದಿಡುವ ‘ತಾರಸಿ ಮಲ್ಹಾರ್’

 ಕನ್ನಡದ ಖ್ಯಾತ ಕವಿ ಜಿ. ಕೆ. ರವೀಂದ್ರ ಕುಮಾರ್ ಅವರ ಲಲಿತ ಪ್ರಬಂಧ ಸಂಕಲನ ‘ತಾರಸಿ ಮಲ್ಹಾರ್’. ಇತ್ತೀಚಿನ ದಿನಗಳಲ್ಲಿ ಲಲಿತ ಪ್ರಬಂಧ ತೀವ್ರ ನಿರ್ಲಕ್ಷಕ್ಕೆ ಒಳಗಾಗಿವೆ. ಒಂದೇ ಅದು ಲಘು ಹಾಸ್ಯದ ಮಟ್ಟಕ್ಕೆ ಇಳಿದಿವೆ. ಬದುಕನ್ನು ಆಳವಾಗಿ ಕಟ್ಟಿಕೊಡುವ ಶಕ್ತಿ ಅವುಗಳಲ್ಲಿ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ರವೀಂದ್ರ ಕುಮಾರ್, ಭಾವಗೀತೆಗಳ ದಾಟಿಯಲ್ಲಿ ಗದ್ಯ ಪ್ರಯೋಗವನ್ನು ನಡೆಸಿದ್ದಾರೆ. ಒಬ್ಬ ಕವಿ ಮಾತ್ರ ಬರೆಯಬಲ್ಲ ಪ್ರಬಂಧಗಳಿವು.
ಇಲ್ಲಿ ಒಟ್ಟು ಹನ್ನೊಂದು ಪ್ರಬಂಧಗಳಿವೆ. ‘ತಾರಸಿ ಮಲ್ಹಾರ್’ ಇದರಲ್ಲಿ ಮುಖ್ಯವಾದುದು. ಮಳೆಯ ಲಯವನ್ನು ಹಿಡಿದು ಬರೆದ ‘ತಾರಸಿ ಮಲ್ಹಾರ್’ ಮಳೆಯ ಜೊತೆಜೊತೆಗೇ ನಮ್ಮನ್ನು ಹಿಂಬಾಲಿಸುವ ಸಂಭ್ರಮಗಳ ಕ್ಷಣಗಳನ್ನು ಅವರು ಸೆರೆಹಿಡಿದಿದ್ದಾರೆ. ಮಳೆಯ ಹಿಂದಿರುವ ನಂಬಿಕೆ, ಭರವಸೆ, ಬದುಕು, ಬಾಲ್ಯ ಎಲ್ಲವನ್ನು ಬೇರೆ ಬೇರೆ ಕೋನಗಳಲ್ಲಿ ನೋಡಿ ಬರೆದ ಪ್ರಬಂಧ ಇದು. ಸಂಗೀತದ ಜೊತೆಗೆ ಬೆರೆತುಕೊಂಡ ಮಳೆಯ ಸದ್ದನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ. ಹೊಟೇಲ್ ಎನ್ನುವ ಸಮಾನತೆಯ ಕೇಂದ್ರದ ಕುರಿತಂತೆ ‘ಉಂಡು ತಿಂದ ಪ್ರಬಂಧ’ದಲ್ಲಿ ದಾಖಲಿಸಿದ್ದಾರೆ. ಹೊಟೇಲ್‌ನ ವೈವಿಧ್ಯತೆ, ಸೊಗಡು, ರುಚಿ, ಅಲ್ಲಿನ ಜನರು ಇವೆಲ್ಲವುಗಳನ್ನು ವಿವರಿಸುತ್ತಾ ಅದರ ಸಾಮಾಜಿಕ, ಆರ್ಥಿಕ ಮುಖಗಳ ಆಳಕ್ಕಿಳಿಯುತ್ತಾರೆ. ಕುನ್ನಕುಡಿ ಅವರ ವೈಲಿನ್ ನಾದನ, ಟೀಂ ಗು ಂಜಿಗನೂ ಕ್ರಿಕೆಟ್ ತಂಡ, ನಮ್ಮ ಬದುಕಿನ ವ್ಯವಹಾರಗಳಲ್ಲಿ ಅವಿನಾಭಾವವಾಗಿ ಬೆರೆತಿರುವ ಚುಕ್ಕಿ, ಭಾಷೆಯೊಂದಿಗೆ ನಡೆಸುವ ಕಸರತ್ತು, ತುಂಟಾಟ ಹೀಗೆ ವಿವಿಧ ವಸ್ತುಗಳು ಅವರ ಪ್ರಬಂಧದಲ್ಲಿ ವಿಸ್ತಾರವಾಗುತ್ತಾ ಬದುಕಿನ ಹಲವು ದರ್ಶನಗಳನ್ನು ನೀಡುತ್ತವೆ. ‘ಪ್ರಬಂಧಕಾರನ ಅಪಾರ ಓದು, ಸೂಕ್ಷ್ಮ ನೋಟ, ಸಂಗೀತದ ನಾದ ಲಯ, ಇವೆಲ್ಲವೂ ಇಲ್ಲಿನ ಪ್ರಬಂಧಗಳ ಹೊಳಪು ಹೆಚ್ಚಿಸಿರುವ ಗುಣಗಳು’ ಎಂದು ಬರಹಗಾರ ರಘುನಾಥ ಚ.ಹ. ಅವರು ಬೆನ್ನುಡಿಯಲ್ಲಿ ಅಭಿಪ್ರಾಯ ಪಡುತ್ತಾರೆ. ಖ್ಯಾತ ಕವಿ ಅಬ್ದುಲ್ ರಶೀದ್ ಈ ಕೃತಿಗೆ ಮುನ್ನುಡಿ ಬರೆಯುತ್ತಾ ‘‘....ಗಂಭೀರ ಸ್ವಭಾವದವರೂ, ಅಷ್ಟೇ ಗಂಭೀರ ಧ್ವನಿಯ ಕವಿತೆಗಳನ್ನೂ ಬರೆದಿರುವ ರವೀಂದ್ರ ಕುಮಾರರು ಇಲ್ಲಿ ಅದು ಹೇಗೆ ಸಡಿಲಾಗಿ, ಸಲೀಸಾಗಿ ಬಯಲಲ್ಲಿ ಕ್ರಿಕೆಟ್ ಚೆಂಡೊಂದರ ಹಿಂದೆ ಲಂಗುಲಗಾಮಿಲ್ಲದೆ ಓಡುವ ಬಾಲಕನ ಹಾಗೆ, ಹಿಡಿಯಬೇಕಿದ್ದ ಬಾಲನ್ನೂ ಮರೆತು ಬದುಕಿನ ಬಿಡಿ ಬಿಡಿ ವಿವರಗಳನ್ನು ವಿವರಿಸುವುದೇ ಇಲ್ಲಿನ ಅಚ್ಚರಿ...’’ ಅಭಿಪ್ರಾಯಪಡುತ್ತಾರೆ.
ಅನನ್ಯ ಪ್ರಕಾಶನ ಮೈಸೂರು ಹೊರತಂದಿರುವ ಕೃತಿಯ ಪುಟಗಳು 120. ಮುಖಬೆಲೆ 110. ಆಸಕ್ತರು 94484 64201 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X