Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಪಿತ್ತಕೋಶದ ನೋವಿನ ಶಮನಕ್ಕೆ ನೈಸರ್ಗಿಕ...

ಪಿತ್ತಕೋಶದ ನೋವಿನ ಶಮನಕ್ಕೆ ನೈಸರ್ಗಿಕ ಉಪಾಯಗಳು ಇಲ್ಲಿವೆ…

ವಾರ್ತಾಭಾರತಿವಾರ್ತಾಭಾರತಿ15 May 2019 10:15 PM IST
share
ಪಿತ್ತಕೋಶದ ನೋವಿನ ಶಮನಕ್ಕೆ ನೈಸರ್ಗಿಕ ಉಪಾಯಗಳು ಇಲ್ಲಿವೆ…

ಪಿತ್ತಕೋಶವು ಯಕೃತ್ತು ಉತ್ಪಾದಿಸುವ ಪಿತ್ತರಸವನ್ನು ಸಂಗ್ರಹಿಸುವ ಅಂಗವಾಗಿದೆ. ರಕ್ತವು ವಿಟಾಮಿನ್‌ಗಳು ಮತ್ತು ಇತರ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುವ ಪ್ರಕ್ರಿಯೆಗೆ ನೆರವಾಗಲು ಪಿತ್ತಕೋಶವು ಸಣ್ಣಕರುಳಿಗೂ ಪಿತ್ತರಸವನ್ನು ರವಾನಿಸುತ್ತದೆ. ಪಿತ್ತರಸವು ಕೊಬ್ಬುಗಳನ್ನು ಜೀರ್ಣಗೊಳಿಸಲು ನೆರವಾಗುತ್ತದೆ. ಈ ಯಾವುದೇ ಪ್ರಕ್ರಿಯೆಗೆ ವ್ಯತ್ಯಯವುಂಟಾದಾಗ ಪಿತ್ತಕೋಶ ರೋಗದಿಂದಾಗಿ ವಿವಿಧ ಸಮಸ್ಯೆಗಳು ಮತ್ತು ಸೋಂಕುಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಉರಿಯೂತದಿಂದಾಗಿ ನೋವು ಪಿತ್ತಕೋಶ ರೋಗದ ಲಕ್ಷಣವಾಗಿದೆ. ಉದರದ ಬಲ ಮೇಲ್ಭಾಗದಲ್ಲಿ ತೀವ್ರನೋವು ಕಾಣಿಸಿಕೊಳ್ಳುತ್ತದೆ. ಗಾಢವರ್ಣದ ಮೂತ್ರ,ವಾಂತಿ,ವಾಕರಿಕೆ,ಅತಿಸಾರ ಮತ್ತು ಜ್ವರದಂತಹ ಇತರ ಲಕ್ಷಣಗಳೂ ಕಂಡುಬರಬಹುದು.

ವೈದ್ಯರು ಪಿತ್ತಕೋಶದ ನೋವಿನ ಚಿಕಿತ್ಸೆಯಲ್ಲಿ ಹೆಚ್ಚಾಗಿ ಉರಿಯೂತ ನಿರೋಧಕ ಔಷಧಿಗಳನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಈ ಔಷಧಿಗಳು ಅಪಾಯಕಾರಿ ಅಡ್ಡ ಪರಿಣಾಮಗಳನ್ನುಂಟು ಮಾಡಬಹುದು ಮತ್ತು ಅವುಗಳ ಮೇಲೆ ಅವಲಂಬನೆಯ ಅಪಾಯವನ್ನು ಹೆಚ್ಚಿಸಬಹುದು. ಹೀಗಾಗಿ ನೈಸರ್ಗಿಕ ಮತ್ತು ಮನೆಮದ್ದುಗಳ ಬಳಕೆ ಪಿತ್ತಕೋಶ ನೋವನ್ನು ಶಮನಿಸಲು ಉತ್ತಮ ಮಾರ್ಗವಾಗಿದೆ. ಅಂತಹ ಕೆಲವು ನೈಸರ್ಗಿಕ ವಿಧಾನಗಳಿಲ್ಲಿವೆ.........

►ಆಹಾರದಲ್ಲಿ ಬದಲಾವಣೆ

 ಕಡಿಮೆ ಕೊಬ್ಬು ಮತ್ತು ಹೆಚ್ಚು ನಾರು ಇರುವ ಆಹಾರವನ್ನು ಸೇವಿಸುವುದು ಪಿತ್ತಕೋಶ ನೋವನ್ನು ನಿವಾರಿಸುವಲ್ಲಿ ಮುಖ್ಯವಾಗಿದೆ. ಸಕ್ಕರೆ ಮತ್ತು ಕೊಬ್ಬುಗಳು ಹೆಚ್ಚಾಗಿರುವ ಆಹಾರವನ್ನು ಸೇವಿಸುವುದರಿಂದ ನೋವು ಇನ್ನಷ್ಟು ಹೆಚ್ಚುತ್ತದೆ. ತರಕಾರಿಗಳು ಮತ್ತು ಹಣ್ಣುಗಳಂತಹ ಪೋಷಕಾಂಶಭರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಕರಿದ ಮತ್ತು ಕೊಬ್ಬುಗಳಿರುವ ಆಹಾರಗಳು ಜೀರ್ಣಗೊಳ್ಳಲು ಹೆಚ್ಚು ಕಷ್ಟ ಮತ್ತು ನೋವಿಗೆ ಕಾರಣವಾಗುತ್ತವೆ. ಆರೋಗ್ಯಕರ ಆಹಾರವು ಪಿತ್ತಕೋಶದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ ಮತ್ತು ಸಮಸ್ಯೆಗಳನ್ನು ತಡೆಯುತ್ತದೆ. ಕಡಿಮೆ ಕೊಬ್ಬು ಇರುವ ಡೇರಿ ಉತ್ಪನ್ನಗಳು, ಆಲಿವ್ ಎಣ್ಣೆ,ಸಿಟ್ರಸ್ ವರ್ಗಕ್ಕೆ ಸೇರಿದ ಹಣ್ಣುಗಳು, ಸೊಪ್ಪು, ಬಾದಾಮ್‌ನಂತಹ ಪೌಷ್ಟಿಕ ಬೀಜಗಳು, ಬೀನ್ಸ್, ಕಂದು ಅಕ್ಕಿ, ಇಡಿಯ ಧಾನ್ಯಗಳು ಇತ್ಯಾದಿ ಆಹಾರಗಳು ನಿಮ್ಮ ಊಟದಲ್ಲಿರಲಿ.

►ಬಿಸಿ ಚಿಕಿತ್ಸೆ

ಬಿಸಿ ನೀರಿನಲ್ಲಿ ಟವೆಲ್ ಅದ್ದಿ ಅದನ್ನು 10-15 ನಿಮಿಷಗಳ ಕಾಲ ಪೀಡಿತ ಜಾಗದ ಮೇಲಿರಿಸಿ. ಇದರಿಂದ ಪಿತ್ತಕೋಶದ ನೋವು ಕಡಿಮೆಯಾಗುತ್ತದೆ. ಹೀಟಿಂಗ್ ಪ್ಯಾಡ್ ಅಥವಾ ಬಿಸಿನೀರಿನ ಚೀಲವನ್ನು ಬಳಸಿ ಶಾಖವನ್ನೂ ನೀಡಬಹುದು. ನೋವು ಸಂಪೂರ್ಣವಾಗಿ ನಿವಾರಣೆಯಾಗುವವರೆಗೂ ಈ ಚಿಕಿತ್ಸೆಯನ್ನು ಮುಂದುವರಿಸಿ.

►ಆ್ಯಪಲ್ ಸಿಡರ್ ವಿನೆಗರ್

ಕಚ್ಚಾ ಆ್ಯಪಲ್ ಸಿಡರ್ ವಿನೆಗರ್‌ನಲ್ಲಿ ಸಮೃದ್ಧವಾಗಿರುವ ಉರಿಯೂತ ನಿರೋಧಕ ಗುಣಗಳು ಪಿತ್ತಕೋಶದ ನೋವಿನಿಂದ ಮುಕ್ತಿ ಪಡೆಯಲು ನೆರವಾಗುತ್ತವೆ. ಎರಡು ಟೇಬಲ್ ಸ್ಪೂನ್ ಆ್ಯಪಲ್ ಸಿಡರ್ ವಿನೆಗರ್ ಅನ್ನು ಬಿಸಿ ನೀರಿನಲ್ಲಿ ಸೇರಿಸಿ ನೋವು ಕಡಿಮೆಯಾಗುವವರೆಗೂ ಈ ದ್ರಾವಣವನ್ನು ಗುಟುಕರಿಸುತ್ತಿರಬೇಕು. ಆ್ಯಪಲ್ ಸಿಡರ್ ವಿನೆಗರ್‌ನ್ನು ನೇರವಾಗಿ ಸೇವಿಸಬಾರದು ಎನ್ನುವುದು ನೆನಪಿರಲಿ,ಹಾಗೆ ಮಾಡುವುದರಿಂದ ಆಮ್ಲವು ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತದೆ.

►ಅರಿಷಿಣ

 ಬ್ಯಾಕ್ಟೀರಿಯಾ ನಿರೋಧಕ ಗುಣಗಳಿಂದ ಸಮೃದ್ಧವಾಗಿರುವ ಅರಿಷಿಣವನ್ನು ಹಲವಾರು ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅದರಲ್ಲಿರುವ ಕರ್ಕುಮಿನ್ ತನ್ನ ಉರಿಯೂತ ನಿರೋಧಕ ಮತ್ತು ಚಿಕಿತ್ಸಾ ಗುಣಕ್ಕಾಗಿ ಹೆಸರಾಗಿದೆ. ನೋವಿನಿಂದ ಮುಕ್ತಿ ಪಡೆಯಲು ಅರಿಷಿಣದ ಕಷಾಯವನ್ನು ದಿನವೂ ಸೇವಿಸಬಹುದು. ಅದು ಪಿತ್ತವನ್ನು ಉತ್ಪಾದಿಸಲು ಪಿತ್ತಕೋಶಕ್ಕೆ ಪ್ರಚೋದನೆ ನೀಡುತ್ತದೆ ಮತು ಪಿತ್ತಕೋಶವನ್ನು ಖಾಲಿಯಾಗಿಸಲು ನೆರವಾಗುತ್ತದೆ. ಆಹಾರದಲ್ಲಿ ಅರಿಷಿಣವನ್ನು ಸೇರಿಸಿಕೊಳ್ಳುವುದರಿಂದ ಉರಿಯೂತ ಮತ್ತು ಪಿತ್ತಕೋಶ ನೋವು ಕಡಿಮೆಯಾಗುತ್ತದೆ.

►ಪುದೀನಾ ಕಷಾಯ

ಪುದೀನಾದಲ್ಲಿರುವ ಮೆಂಥಾಲ್ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಮತ್ತು ನೋವಿನಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ಹೊಟ್ಟೆನೋವಿಗೆ ಮೆಂಥಾಲ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ವಾಕರಿಕೆಯಿಂದ ಮುಕ್ತಿ ನೀಡುತ್ತದೆ. ಪಿತ್ತಕೋಶದ ನೋವನ್ನು ನಿವಾರಿಸಲು ಮತ್ತು ಅದರ ಆರೋಗ್ಯವನ್ನು ಹೆಚ್ಚಿಸಲು ಪುದೀನಾ ಕಷಾಯವು ನೆರವಾಗುತ್ತದೆ. ನೋವು ನಿವಾರಣೆಯಾಗುವವರೆಗೂ ಈ ಕಷಾಯವನ್ನು ಸೇವಿಸಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X