Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕಳೆದು ಹೋದ ಸಾಲುಗಳನ್ನು ಹುಡುಕುವ ‘ಕಡೇ...

ಕಳೆದು ಹೋದ ಸಾಲುಗಳನ್ನು ಹುಡುಕುವ ‘ಕಡೇ ನಾಲ್ಕು ಸಾಲು’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ17 May 2019 12:02 AM IST
share
ಕಳೆದು ಹೋದ ಸಾಲುಗಳನ್ನು ಹುಡುಕುವ ‘ಕಡೇ ನಾಲ್ಕು ಸಾಲು’

ಉಮಾ ಮುಕುಂದ ಅವರ ಮೊತ್ತ ಮೊದಲ ಕವನ ಸಂಕಲನ ‘ಕಡೇ ನಾಲ್ಕು ಸಾಲು’. ಸುಮಾರು 35 ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಸಾಮಾಜಿಕ ತಾಣಗಳಲ್ಲಿ ತಮ್ಮ ಕವಿತೆ, ಬರಹಗಳ ಮೂಲಕ ಸಕ್ರಿಯರಾಗಿರುವ ಉಮಾ ಅವರು ಇಲ್ಲಿ ಬದುಕಿನ ಸ್ವಾರಸ್ಯಗಳನ್ನು ಮೊಗೆದು ಕವಿತೆಗಳನ್ನಾಗಿಸಿದ್ದಾರೆ. ತಾಜಾತನ, ಲವಲವಿಕೆಯ ಮೂಲಕ ಇವರ ಕವಿತೆಗಳು ಓದುಗರ ಮನವನ್ನು ತಟ್ಟುತ್ತವೆ. ಫೇಸ್‌ಬುಕ್ ಬರಹಗಾರರ ಕುರಿತಂತೆ ಕೆಲವು ನಿರ್ದಿಷ್ಟ ಹಿರಿಯರು ಅಸಮಾಧಾನಗಳನ್ನು ಹೊಂದಿರುವ ಈ ಸಂದರ್ಭದಲ್ಲಿ ‘ತಾನು ಫೇಸ್‌ಬುಕ್ ಕವಿ ಎಂದು ಗುರುತಿಸಿಕೊಳ್ಳಲು ಹಿಂಜರಿಕೆಯಿಲ್ಲ’ ಎಂದು ಹೇಳುತ್ತಾರೆ. ‘ಬರಹಗಳು ಯಾವ ಮಾಧ್ಯಮದಲ್ಲಿ ಪ್ರಕಟವಾಗಿವೆ ಎನ್ನುವುದಕ್ಕಿಂದ ಅವು ಓದುಗರ ಮೇಲೆ ಏನು ಪರಿಣಾಮವನ್ನು ಉಂಟು ಮಾಡುತ್ತವೆ ಎನ್ನುವುದು ಮುಖ್ಯ’ ಇದು ಕವಯಿತ್ರಿಯ ಅಭಿಮತ.
 ಇಲ್ಲಿರುವ ಎಲ್ಲ ಕವಿತೆಗಳಿಗೂ ಪರಸ್ಪರ ಅಂತರ್ ಸಂಬಂಧವಿದೆ. ಹಿತ್ತಲನ್ನು ರೂಪಕವಾಗಿಸುತ್ತಾ, ಕಳೆಗಳನ್ನು ಕೀಳುತ್ತಾ ಹೇಗೆ ಬೆರಳುಗಳು ಪರಸ್ಪರ ಸಂಧಿಸಿ ಸಂಬಂಧವನ್ನು ಬಿಗಿ ಗೊಳಿಸುತ್ತವೆ ಎನ್ನುವುದನ್ನು ಹೇಳುತ್ತಾರೆ. ಸಂಬಂಧ ಗಟ್ಟಿಯಾಗುವುದು ಅಂಗಳದಲ್ಲಲ್ಲ, ಹಿತ್ತಲಲ್ಲಿ ಎನ್ನುವ ಭಾವ ಇಲ್ಲಿದೆ. ಕಥೆ ಮುಗಿಯುವುದಕ್ಕೆ ನಾಲ್ಕೇ ನಾಲ್ಕು ಸಾಲುಗಳಿತ್ತು. ಅಷ್ಟರಲ್ಲಿ ಬಾಗಿಲು ಬಡಿದ ಸದ್ದು. ಆ ನಾಲ್ಕು ಸಾಲುಗಳನ್ನು ಮುಗಿಸಿ ಬಾಗಿಲು ತೆರೆಯಲು ಹೋದರೆ, ಬಂದವರು ಮರಳಿಯಾಗಿತ್ತು. ಇದೀಗ ಬಾಗಿಲು ಬಡಿದವರು ಯಾರು? ಎನ್ನುವುದು ಲೇಖಕಿಯನ್ನು ಕಾಡತೊಡಗುತ್ತದೆ. ಮರಳಿ ಬಂದು ನೋಡಿದರೆ ಪೂರ್ತಿಗೊಳಿಸಿದ ನಾಲ್ಕು ಸಾಲು ಕಾಣೆಯಾಗಿತ್ತು. ಕಥನದ ರೂಪದ ಈ ಕವಿತೆಯನ್ನು ಸರಳವಾಗಿ ಹರಡುತ್ತಾ ನಮ್ಮಾಳಗೆ ಗಾಢವಾದ ಖೇದವೊಂದನ್ನು ಬಿತ್ತುತ್ತಾರೆ. ಪ್ರೇಮ ಸಂಬಂಧಗಳು, ದಾಂಪತ್ಯ, ಹೆಣ್ಣಿನ ತೊಳಲಾಟ, ಇಬ್ಬಂದಿತನ, ಅಸಹಾಯಕತೆ ಇವೆಲ್ಲವುಗಳನ್ನು ಬೇರೆ ಬೇರೆ ದಾರಿಗಳ ಮೂಲಕ ಕವಯಿತ್ರಿ ಹೇಳಲು ಪ್ರಯತ್ನಿಸುತ್ತಾರೆ. ಲೇಖಕಿಯ ಅಂತರಂಗದ ಮಾತುಗಳ ಒಂದು ಕವಿತೆಯಿಂದ ಇನ್ನೊಂದು ಕವಿತೆಗೆ ಖೋ ಕೊಡುತ್ತಾ ಹೋಗುವುದು ಇಲ್ಲಿನ ವಿಶೇಷತೆ. ಎಚ್. ಎಸ್. ರಾಘವೇಂದ್ರರಾವ್ ಮುನ್ನುಡಿಯಲ್ಲಿ ಹೇಳುವಂತೆ ‘‘....ದಾಂಪತ್ಯ ಇವರ ಕವಿತೆಯ ಮೂಲ ನೆಲೆಗಳಲ್ಲಿ ಒಂದು. ಇಲ್ಲಿ ‘ನಾವು’ ಎಂಬ ಒಂದುತನ ಇರುವಂತೆಯೇ ‘ನಾನು’ ‘ಅವನು’ ಎಂಬ ಭಿನ್ನತೆಯೂ ಅರಿವಿಗೆ ಬರುತ್ತಿರುತ್ತವೆ. ಹಳೆಯ ನೆನಪುಗಳು ಸಂಬಂಧವನ್ನು ಪೊರೆಯುವ ಜೀವದ್ರವ್ಯವೆಂಬ ತಿಳುವಳಿಕೆ ಇರುವುದರಿಂದಲೇ ‘ಕಾಫಿ-ಗೀಫಿ’ಗಳ ‘ಬಾದಾಮು ಹಲ್ವಗಳ’ ಲಾಲ್‌ಬಾಗಿನಲ್ಲಿ ತೆಗೆದ ಪೋಟೋಗಳ ಮಾತು ಬರುತ್ತದೆ....’’
 

share
-ಕಾರುಣ್ಯಾ
-ಕಾರುಣ್ಯಾ
Next Story
X