Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಸ್ವಚ್ಛ ಭಾರತ್' ಪರಿಣಾಮ ಕುರಿತ...

'ಸ್ವಚ್ಛ ಭಾರತ್' ಪರಿಣಾಮ ಕುರಿತ ರಿಯಾಲಿಟಿ ಚೆಕ್: ಬೆಳಕಿಗೆ ಬಂದ ಬೆಚ್ಚಿ ಬೀಳಿಸುವ ಅಂಶಗಳು

'ಬಯಲು ಶೌಚಮುಕ್ತ ರಾಜ್ಯ' ಹೆಗ್ಗಳಿಕೆಯ ಕರ್ನಾಟಕದ ಸ್ಥಿತಿಯೂ ಬೆಳಕಿಗೆ

ವಾರ್ತಾಭಾರತಿವಾರ್ತಾಭಾರತಿ18 May 2019 9:28 AM IST
share
ಸ್ವಚ್ಛ ಭಾರತ್ ಪರಿಣಾಮ ಕುರಿತ ರಿಯಾಲಿಟಿ ಚೆಕ್: ಬೆಳಕಿಗೆ ಬಂದ ಬೆಚ್ಚಿ ಬೀಳಿಸುವ ಅಂಶಗಳು

ಶಿಕ್ವಾರಾ, ಮೇ 18: ಹೊಸದಿಲ್ಲಿಯ ದಕ್ಷಿಣಕ್ಕೆ ಎರಡು ಗಂಟೆ ಪ್ರಯಾಣಿಸಿದರೆ ಶಿಕ್ವಾರಾ ಗ್ರಾಮ ಸಿಗುತ್ತದೆ. ನಸುಕಿನಲ್ಲೇ ಹಲವಾರು ಮಂದಿ ಇಲ್ಲಿ ಗುಂಪು ಸೇರುತ್ತಾರೆ. ಗ್ರಾಮದ ಮೂಲಕ ಹರಿಯುವ ತೊರೆಯ ದಂಡೆಯತ್ತ ಸಾಗುತ್ತಾರೆ. ಏಕೆ ಗೊತ್ತೇ? ಬಯಲುಶೌಚಕ್ಕೆ!

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ್ ಯೋಜನೆ ಎಷ್ಟು ಫಲ ನೀಡಿದೆ ಎಂಬ ರಿಯಾಲಿಟಿ ಚೆಕ್ ವೇಳೆ ಈ ಅಂಶ ಬೆಳಕಿಗೆ ಬಂದಿದೆ. "ಶಿಕ್ವಾರಾ ಗ್ರಾಮದಲ್ಲಿ ಸುಮಾರು 1,600 ಮನೆಗಳಿವೆ. ಈ ಪೈಕಿ 400ಕ್ಕೂ ಹೆಚ್ಚು ಮನೆಗಳಿಗೆ ಇಂದಿಗೂ ಶೌಚಾಲಯ ಇಲ್ಲ" ಎಂದು ಉತ್ತರ ಹರ್ಯಾಣದ ಗ್ರಾಮ ಮಂಡಳಿ ಅಧಿಕಾರಿ ಖುರ್ಷಿದ್ ಅಹ್ಮದ್ ಹೇಳುತ್ತಾರೆ.

ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ, ಎರಡೂವರೆ ಕೋಟಿ ಜನಸಂಖ್ಯೆ ಹೊಂದಿರುವ ಹರ್ಯಾಣ ಬಯಲುಶೌಚ ಮುಕ್ತ ರಾಜ್ಯ. ವಿಶ್ವಬ್ಯಾಂಕ್ ನೆರವಿನ ರಾಷ್ಟ್ರವ್ಯಾಪಿ ಸಮೀಕ್ಷೆ ಪ್ರಕಾರ, ಶೇಕಡ 0.3ರಷ್ಟು ಮಂದಿ ಮಾತ್ರ ಹರ್ಯಾಣದ ಗ್ರಾಮೀಣ ಜನರು ಬಯಲುಶೌಚ ಮಾಡುತ್ತಾರೆ. ಆದರೆ ರಾಷ್ಟ್ರವ್ಯಾಪಿ ಸಮೀಕ್ಷೆ ಕೈಗೊಂಡ ಸಮೀಕ್ಷಾ ಅಧಿಕಾರಿಗಳನ್ನು ಮತ್ತು ಪಾಲ್ಗೊಂಡಿದ್ದ ಇಬ್ಬರು ಸಂಶೋಧಕರನ್ನು ಸಂದರ್ಶಿಸಿದಾಗ, ಸಮೀಕ್ಷೆಯ ವಿಧಾನ ಹಾಗೂ ಫಲಿತಾಂಶ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದರು.

ರಾಯ್ಟರ್ಸ್‌ನಲ್ಲಿ ಪ್ರಕಟವಾದ ಲೇಖನಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಶುಕ್ರವಾರ ಹೇಳಿಕೆ ನೀಡಿ, "ಕೇವಲ ಐದು ವರ್ಷಗಳಲ್ಲಿ 55 ಕೋಟಿ ಮಂದಿಯನ್ನು ಬಯಲುಶೌಚದಿಂದ ಮುಕ್ತಗೊಳಿಸಲಾಗಿದೆ" ಎಂದು ಪ್ರತಿಪಾದಿಸಿದೆ.

ಶಿಕ್ವಾರದಲ್ಲಿ 27 ಮಂದಿಯನ್ನು ಸಂಪರ್ಕಿಸಿದಾಗ, 330 ಮನೆಗಳಿಗೆ ಇನ್ನೂ ಶೌಚಾಲಯ ಇಲ್ಲ ಎಂಬ ಅಂಶ ದೃಢಪಟ್ಟಿದೆ. ನೀರಿನ ಲಭ್ಯತೆ ಕೊರತೆ ಅಥವಾ ತಮ್ಮ ಹವ್ಯಾಸ ಬದಲಿಸಲು ಜನ ನಿರಾಕರಿಸಿರುವುದು ಇದಕ್ಕೆ ಕಾರಣ. ಒಂದು ಗಂಟೆ ಮತ್ತೆ ಪ್ರಯಾಣ ಕೈಗೊಂಡು ನಾಂಗ್ಲಾ ಕಾನ್ಪುರ ಗ್ರಾಮ ತಲುಪಿದಾಗ, ಅಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಂಥ ಪ್ರತ್ಯೇಕ ಘಟನೆಗಳಿಗೆ ಸ್ಪಂದಿಸುವುದು ಕಷ್ಟ ಎನ್ನುವುದು ಸಚಿವಾಲಯ ನೀಡುವ ಸಬೂಬು.

100 ಕೋಟಿ ಶೌಚಾಲಯ ನಿರ್ಮಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ಘೋಷಿಸಿದ್ದರು. ಫೆಬ್ರವರಿಯಲ್ಲಿ ಬಿಡುಗಡೆಯಾದ ದೇಶದ ವಾರ್ಷಿಕ ನೈರ್ಮಲ್ಯ ಸಮೀಕ್ಷೆ ವರದಿ ಪ್ರಕಾರ ಕೇವಲ 10ರಷ್ಟು ಗ್ರಾಮೀಣರು ಮಾತ್ರ ಬಯಲಲ್ಲಿ ಶೌಚಕಾರ್ಯ ಮಾಡುತ್ತಿದ್ದಾರೆ. ಆದರೆ ಸಮೀಕ್ಷಾ ವಿಧಾನದಲ್ಲೇ ಲೋಪಗಳಿವೆ ಎಂದು ಸಮೀಕ್ಷೆ ಕಾರ್ಯಯೋಜನೆ ರೂಪಿಸುವ ಸಭೆಗಳಲ್ಲಿ ಪಾಲ್ಗೊಂಡಿದ್ದ ಸಂಶೋಧಕ ನಿಖಿಲ್ ಶ್ರೀವಾಸ್ತವ ಹೇಳುತ್ತಾರೆ.

ರಾಯ್ಟರ್ಸ್‌ ರಿಯಾಲಿಟಿ ಚೆಕ್ ತಂಡ ಕರ್ನಾಟಕದ ಕೊಪ್ಪಳ ಜಿಲ್ಲೆಗೂ ಭೇಟಿ ನೀಡಿದೆ. 50 ಮಂದಿಯನ್ನು ಸಂದರ್ಶಿಸಿದಾಗ ಕನಿಷ್ಠ 150 ಮಂದಿ ಬಯಲು ಶೌಚದಲ್ಲಿ ತೊಡಗಿರುವ ಅಂಶ ಕಂಡುಬಂದಿದೆ. ಕರ್ನಾಟಕ ಕೂಡಾ ಕೇಂದ್ರದ ದಾಖಲೆಗಳ ಪ್ರಕಾರ ಬಯಲುಶೌಚ ಮುಕ್ತ ರಾಜ್ಯ. ತಾವು ಕೆಲಸ ಮಾಡುವ ಹೊಲಗಳ ಪಕ್ಕದಲ್ಲಿ ಶೌಚಾಲಯಗಳು ಇಲ್ಲದಿರುವುದು, ಕಳಪೆ ನಿರ್ಮಾಣ ಮತ್ತಿತರ ಕಾರಣದಿಂದ ಬಯಲು ಶೌಚಾಲಯವೇ ಮಿಗಿಲು ಎನ್ನುವುದು ಬಹುತೇಕ ಗ್ರಾಮೀಣರ ಅಭಿಪ್ರಾಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X