Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಜನಪ್ರಿಯ ಸಾಹಿತ್ಯವೂ ಕನಸು ಬಿತ್ತುವ...

ಜನಪ್ರಿಯ ಸಾಹಿತ್ಯವೂ ಕನಸು ಬಿತ್ತುವ ಪರಿಯೂ

ನವಿರು ಸಾಲು

ಜಯಶ್ರೀ ಬಿ. ಕದ್ರಿಜಯಶ್ರೀ ಬಿ. ಕದ್ರಿ19 May 2019 11:03 AM IST
share
ಜನಪ್ರಿಯ ಸಾಹಿತ್ಯವೂ ಕನಸು ಬಿತ್ತುವ ಪರಿಯೂ

ಹೈ ಸ್ಕೂಲು ಹಂತದ ಯಂಗ್ ಅಡಲ್ಟ್ ಗಳಾಗಿದ್ದಾಗ ನಾವು ಸಾಯಿಸುತೆ, ಎಚ್.ಬಿ.ರಾಧಾದೇವಿ, ಉಷಾ ನವರತ್ನರಾಂ ಹೀಗಿರುವ ಜನಪ್ರಿಯ ಸಾಹಿತಿಗಳ ಕಾದಂಬರಿಗಳನ್ನು ಕದ್ದುಮುಚ್ಚಿ ಓದುತ್ತಿದ್ದೆವು ಹಾಗೂ ಅವು ನಮ್ಮ ಪಾಲಿಗೆ ದೊಡ್ಡವರ ಜಗತ್ತಿನ ಬೆಳಕಿಂಡಿಗಳಾಗಿದ್ದವು.

ನವಿಲು ಬಣ್ಣದ ರೇಶಿಮೆ ಸೀರೆ, ಗೇಣಗಲದ ಬಾರ್ಡರ್ ಸೀರೆ. ಅವರೆಕಾಳು ಉಪ್ಪಿಟ್ಟು, ಅಂಬೊಡೆ ಇತ್ಯಾದಿ ವಿವರಗಳನ್ನೊಳಗೊಂಡ ಆ ಕಾದಂಬರಿಗಳಲ್ಲಿ ಹೀರೋಯಿನ್ ಮದುವೆಯಾಗುವುದರೊಂದಿಗೆ ಕಾದಂಬರಿ ಸುಖಾಂತ್ಯವಾಗುತ್ತಿತ್ತು. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಂ.ಕೆ. ಇಂದಿರಾ, ತ್ರಿವೇಣಿ ಹೀಗೆ ಗಂಭೀರ ಸಾಹಿತಿಗಳನ್ನು ಓದುವವರು ಆಗಿನ ಕಾಲದಲ್ಲೂ ಈಗಲೂ ಬಹುಶಃ ವಿರಳ, ಆಳವಾದ ಜೀವನಾನುಭವ, ಬರಹದ ಸಾಂದ್ರತೆ ಇವನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ ಅವು ಕೂಡ ಜೀವನದ ಫೋಟೊಗ್ರಾಫಿಕ್ ಝಲಕ್‌ಗಳೇ. ಗುಲಾಬಿ ಪಕಳೆಗಳು ಉದುರಿದಂತೆ, ಪಾರಿಜಾತದ ಮೊಲ್ಲೆ ಮೊಗ್ಗುಗಳು ಮಧುರ ಸುವಾಸನೆ ಪಸರಿಸಿದಂತೆ ಮೆಲ್ಲನೆ ಆವರಿಸಿಕೊಳ್ಳುವ ಪ್ರೀತಿ ಪ್ರೇಮದ ಪ್ರಸಂಗಗಳು, ದಾಂಪತ್ಯದ ಬಗೆಗಿನ ರಮ್ಯ ಕಲ್ಪನೆಗಳು ಹೀಗೆ ಝಲ್ಲನೆ ಪುಳಕಗೊಳಿಸುತ್ತ ಹಗಲುಗನಸಿನ ಸಾಮ್ರಾಜ್ಯದಲ್ಲಿ ಮೈಮರೆಸಿ ಬಿಡುವ ಶಕ್ತಿ ಆ ಕಾದಂಬರಿಗಳಿಗಿದ್ದವು.

ಹಾಗಿದ್ದರೂ ಅವು ಒಂದು ರೀತಿಯ ಲೈಟ್ ರೀಡಿಂಗ್, ಜೀವನದ ಸಂಕೀರ್ಣ ಮಜಲುಗಳಾಗಲಿ, ಅನಿಶ್ಚಿತತೆ, ದ್ವಂದ್ವಗಳ ಚಿತ್ರಣಗಳಾಗಲಿ, ಎದೆ ನಡುಗಿಸುವ ದುರಂತಗಳ, ಜೀವನ ದರ್ಶನಗಳ ಗಾಢ, ದಟ್ಟ ಅನುಭವಗಳಾಗಲಿ ಅವುಗಳಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ.
ಇಂಗ್ಲಿಷ್ ವಿದ್ಯಾಭ್ಯಾಸದ ಹೊಡೆತದಿಂದಾಗಿ ಮುಂದಿನ ಜನರೇಶನ್‌ನಲ್ಲಿ ಕನ್ನಡದ ಕಥೆ, ಕಾದಂಬರಿಗಳಿಗೆ ಓದುಗರ ಸಂಖ್ಯೆ ಗಮನಾರ್ಹವಾಗಿ ಕಡಿಮೆ ಆಗಬಹುದು. (ಹಾಗಿದ್ದರೂ ಬ್ಲಾಗ್, ಛ್ಜಿಟ್ಠ್ಟ್ಞಚ್ಝಗಳು ಈ ನಿಟ್ಟಿನಲ್ಲಿ ಸ್ವಾಗತಾರ್ಹ) ಯುವಜನತೆ ಹೆಚ್ಚಾಗಿ ಓದುವುದು ರಿಲ್ಯಾಕ್ಸೇಶನ್ ಗೋಸ್ಕರ, ಮಿಲ್ಸ್ - ಬೂನ್ಸ್ ರೊಮ್ಯಾನ್ಸ್‌ನಿಂದ ಪ್ರಾರಂಭಿಸಿ ಅಗಾಥ ಕ್ರಿಸ್ಟಿ, ಸಿಡ್ನಿ ಶೆಲ್ಡನ್ ಹೀಗೆಲ್ಲ, ಇನ್ನು ಎಳೆಯ ಮಕ್ಕಳಿಗೆ ಎನಿಡ್ ಬ್ಲೈಡನ್, ನ್ಯಾನ್ಸಿಡ್ರೂ, ಹ್ಯಾರಿಪಾಟರ್ ಹೀಗೆ ಅವರ ಪ್ರಪಂಚ.

ಟಿವಿ, ಕಂಪ್ಯೂಟರ್, ವೀಡಿಯೊ ಗೇಮ್ ಎಲ್ಲ ಇದ್ದರೂ ಓದಿನ ಆನಂದವೇ ಬೇರೆ. ಅದು ನಮ್ಮ ವೈಯಕ್ತಿಕ ವಲಯ ನಮ್ಮ ಆಲೋಚನೆಗಳು, ಭಾವ ಪ್ರಪಂಚವನ್ನು ನಾವೇ ಸೃಷ್ಟಿಸಿಕೊಳ್ಳುವ ಪ್ರಕ್ರಿಯೆ ದೈನಂದಿನ ಒತ್ತಡ, ಸಂಕಷ್ಟಗಳನ್ನು ಕೊಂಚಕಾಲ ಮರೆಯಲೂ ಓದು ಸಹಕಾರಿ. ಜನಪ್ರಿಯ ಸಾಹಿತ್ಯದಲ್ಲೂ ಬೇರೆಬೇರೆ ಪ್ರಕಾರಗಳು ಬೆಳೆದು ಬರುವುದನ್ನು ಗಮನಿಸಬಹುದು. ಒಂದು ಕಾಲಕ್ಕೆ ಯಂಡಮೂರಿಯವರ ಸಾಹಿತ್ಯವನ್ನು ಓದುತ್ತಿದ್ದ ಹಾಗೆಯೇ ಯುವ ಸಮುದಾಯ ಚೇತನ್ ಭಗತ್‌ರನ್ನು, ತಪ್ಪಿದರೆ ಪೂರ್ಣಚಂದ್ರ ತೇಜಸ್ವಿಯವರನ್ನು ಓದುತ್ತಿರುತ್ತಿದೆ. (ವಿಕ್ರಮ್ ಸೇಠ್, ಅರವಿಂದ ಅಡಿಗ, ಝಂಪಾಲಹಿರಿ ಇವರ ಹೆಸರುಗಳು ಕ್ವಿಜ್‌ನಲ್ಲಿನ ಪ್ರಶ್ನೋತ್ತರಗಳಿಗೆ ಮಾತ್ರ ಸೀಮಿತವಾಗಿರುತ್ತದೆ.) ಇನ್ನು ಯುವತಿಯರಿಗೋಸ್ಕರವೇ ಬರೆಯಲ್ಪಡುವ ್ಚಜ್ಚಿ ್ಝಜಿಠಿಛ್ಟಿಠ್ಠ್ಟಿಛಿ ಬರೆಯುವ ಕವಿತಾ ದಾಸಾನ್ವಿ, ಸ್ವಾತಿ ಕೌಶಲ್ ಹೀಗಿರುವ ಬರಹಗಾರ್ತಿಯರು ಬೇರೆ.

ತಾಜ್, ಒಬೆರಾಯ್‌ನಂತಹ ಹೊಟೇಲ್‌ಗಳಲ್ಲಿ ಲಂಚ್ ಮಾಡುವ, ಪ್ಲೇನ್‌ಗಳಲ್ಲಿ ಲಂಡನ್, ಸ್ವಿಝರ್ಲೆಂಡ್‌ಗಳಿಗೆ ಹೋಗುವ ಇವರ ಕಥೆಗಳಲ್ಲಿನ ಹೀರೋಯಿನ್ ಕೂಡ ನಮ್ಮಂತೆ ಭಾವನೆಗಳನ್ನು ಅನುಭವಿಸುತ್ತಾಳೆ (ಪ್ರೀತಿ, ಪ್ರೇಮ, ಅಂತಃಕರಣ, ದುಃಖ ಇತ್ಯಾದಿ) ಎನ್ನುವುದೇ ಆಶ್ಚರ್ಯ. ಈ ಕಥೆಗಳನ್ನು ಓದುತ್ತಾ ಮಧ್ಯಮ ವರ್ಗದ ಯುವತಿ ಕೆಲ ಕ್ಷಣಗಳಾದರೂ ನಲ್ಲಿಯ ಬಳಿ ಕ್ಯೂ ನಿಂತು ನೀರು ತುಂಬಬೇಕಾದ, ನೆಲ ಒರಸಬೇಕಾದ, ಬಸ್ಸಿನಲ್ಲಿ ಒದ್ದಾಡಿಕೊಂಡು ಕೆಲಸಕ್ಕೆ ಹೋಗಬೇಕಾದ, ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕಾದ ಅನಿವಾರ್ಯತೆಗಳನ್ನು ಮರೆಯುತ್ತಾಳೆ.

ಹೆಚ್ಚು ಕಡಿಮೆ ಇದನ್ನೇ ನಮ್ಮ ಸೀರಿಯಲ್‌ಗಳೂ ಕೊಡುತ್ತದೆ. ಮನೆಯಲ್ಲಿರುವಾಗ ಕೂಡ ಬಾರ್ಡರ್ ಸೀರೆ, ಬ್ರೊಕೇಡ್ ಟಿಶ್ಯೂ ಡ್ರೆಸ್‌ಗಳನ್ನು ಹಾಕಿಕೊಂಡಿರುವ ಆ ಮಹಿಳಾ ಮಣಿಗಳು ಕುಕ್ಕರ್ ಸೀದು ಹೋಯಿತೆಂದೋ, ತೊಗರಿಬೇಳೆಗೆ ಬೆಲೆ ಜಾಸ್ತಿಯಾಯಿತೆಂದೋ ವರಿ ಮಾಡುವುದನ್ನು ನಾನು ನೋಡಿಲ್ಲ. (ಯಾರದೋ ಗಂಡನನ್ನು ಬಲೆಗೆ ಬೀಳಿಸುವ, ಇನ್ಯಾವಳದೋ ಪರ್ಸನಲ್ ಲೈಫಿನ ಬಗ್ಗೆ ಕುತೂಹಲ ಹೀಗೆಲ್ಲ ಅವರ ಜಗತ್ತು) ಹಾಗಿದ್ದರೂ ನನ್ನನ್ನೂ ಸೇರಿಸಿದಂತೆ ವಿರಾಮವಿದ್ದಾಗಲೆಲ್ಲಾ ಹೆಂಗಳೆಯರು ಅವುಗಳನ್ನು ನೋಡುತ್ತಾರೆ. ಭಾರತೀಯ ಸಂಸ್ಕೃತಿಯ ವೌಲ್ಯಗಳಾದ ತಾಳ್ಮೆ, ಸಹನೆ, ಸ್ತ್ರೀತನ (ಹಾಗಂದರೇನು?) ಇತ್ಯಾದಿ ವೌಲ್ಯಗಳನ್ನು ಪ್ರತಿವಾದಿಸುತ್ತಲೇ ಅಳುಮುಂಜಿತನವನ್ನು ಒಳ್ಳೆಯತನವೆಂದೂ, ವಾಚಾಮಗೋಚರವಾಗಿ ತನ್ನನ್ನು ಬಯ್ಯುತ್ತಿದ್ದರೂ ವೌನವಾಗಿ ಸಹಿಸಿಕೊಳ್ಳುವುದು (ಕಣ್ಣಿನಿಂದ ಎರಡೇ ಎರಡು ಒಂದು ಹನಿ ನೀರು, ಸಿಶ್ಶಬ್ದದೊಂದಿಗೆ) ಗುಣವಂತೆಯ ಲಕ್ಷಣವೆಂದೂ ಇವು ಚಿತ್ರಿಸುತ್ತವೆ.

ಬದುಕು ಸೀರಿಯಲ್ಲುಗಳಲ್ಲಿರುವಂತೆ ಭ್ರಾಮಕ ಜಗತ್ತು ಅಲ್ಲ, ಟಾಲ್‌ಸ್ಟಾಯ್‌ನ ‘ಅನ್ನಾ ಕರೆನಿನಾ’ದಂತೆ ಸಂಕೀರ್ಣ ಭಾವನಾತ್ಮಕ ಸಂಬಂಧಗಳ ವ್ಯೆಹವೂ ಅಲ್ಲ. ‘ಕಾಮನ್‌ಸೆನ್ಸ್’ ( ಅದು ಈಗೀಗ ಬಹಳ ಅನ್‌ಕಾಮನ್) ಹಾಗೂ ಆತ್ಮಸಾಕ್ಷಿಯಂತೆ ನಡೆದರೆ ಬದುಕು ಇಬ್ಬನಿಯ ಹನಿಯಂತೆ ಕರಗಿಹೋಗಲಾರದು ಹಾಗೂ ನಾವೂ ಹೆಜ್ಜೆ ಗುರುತನ್ನು ಮೂಡಿಸಬಹುದೇನೋ

share
ಜಯಶ್ರೀ ಬಿ. ಕದ್ರಿ
ಜಯಶ್ರೀ ಬಿ. ಕದ್ರಿ
Next Story
X