Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸಂವಿಧಾನದ ಕಾಲಾಳು ಕೃತಿ ‘ತೀಸ್ತಾ...

ಸಂವಿಧಾನದ ಕಾಲಾಳು ಕೃತಿ ‘ತೀಸ್ತಾ ಸ್ವಗತ’: ಜಿ. ರಾಜಶೇಖರ್

ವಾರ್ತಾಭಾರತಿವಾರ್ತಾಭಾರತಿ19 May 2019 4:40 PM IST
share
ಸಂವಿಧಾನದ ಕಾಲಾಳು ಕೃತಿ ‘ತೀಸ್ತಾ ಸ್ವಗತ’: ಜಿ. ರಾಜಶೇಖರ್

ಮಂಗಳೂರು, ಮೇ 19: ಗುಜರಾತ್ ಹಿಂಸೆಯ ಬಗ್ಗೆ ತೀಸ್ತಾ ವರ್ಣನೆ, ಅನೇಕ ಕೋಮು ಹಿಂಸೆಯ ಘಟನೆಗಳು ಮಾತಿಗೆ ಮೀರಿದವು. ಅನ್ಯಾಯದ ವಿರುದ್ಧ ನಾವು ವೌನವಾಗಿರದೆ ಧ್ವನಿ ಎತ್ತುವ ಅನಿವಾರ್ಯತೆಯನ್ನು ತೀಸ್ತಾ ಅವರು ಸ್ಪಷ್ಟಪಡಿಸಿದ್ದು, ಕೃತಿಯನ್ನ್ನು ‘ತೀಸ್ತಾ ಸ್ವಗತ’ ಎಂದು ತಾನು ಕರೆಯುವುದಾಗಿ ಹಿರಿಯ ಲೇಖಕ, ಚಿಂಕ ಜಿ. ರಾಜಶೇಖರ್ ಅಭಿಪ್ರಾಯಿಸಿದ್ದಾರೆ.

ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಇಂದು ಪತ್ರಕರ್ತೆ ಸತ್ಯಾ ಎಸ್.ರವರು ಅನುವಾದಿಸಿರುವ ‘ಸಂವಿಧಾನದ ಕಾಲಾಳು’ ತೀಸ್ತಾ ಸೆಟಲ್ವಾದ್‌ರವರ ನೆನಪುಗಳು ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಪರಿಚಯ ನೀಡಿ ಮಾತನಾಡಿದರು.

ತೀಸ್ತಾ ಸೆಟಲ್ವಾದರ ನೆನಪುಗಳನ್ನು ಒಳಗೊಂಡ ಕೃತಿ ಸಂವಿಧಾನದ ಕಾಲಾಳು ಪುಸ್ತಕವು ಅನಂತ ಮೂರ್ತಿಯವರ ಮಾತು ಸೋತ ಭಾರತ ಕೃತಿಯನ್ನು ನೆಪಿಸುತ್ತದೆ ಎಂದವರು ಹೇಳಿದರು.

ತೀಸ್ತಾ ಅವರು ತಮ್ಮ ಆತ್ಮ ಚರಿತ್ರೆಯನ್ನು ತಮ್ಮನ್ನು ಇಲ್ಲವಾಗಿಸಿಕೊಂಡಿದ್ದಾರೆ. ಹಾಗಾಗಿ ಕೃತಿಯಲ್ಲಿ ನಮಗೆ ಕಾಣಿಸುವುದು ಕೋಮುವಾದದ ವಿವಿಧ ಮುಖಗಳೇ ಹೊರತು ತೀಸ್ತಾರಲ್ಲ. ನಾನು ಈ ಕಾಲದ ಒಂದು ಭಾಗ. ನಾನೂ ಜವಾಬ್ಧಾರಿ ಎಂಬುದನ್ನು ತಮ್ಮ ಇಡೀ ಕೃತಿಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಹಾಲಿ ಸರಕಾರ ಅವರನ್ನು ರಾಷ್ಟ್ರ ವಿರೋಧಿ ಎಂಬುದಾಗಿ ಬಿಂಬಿಸಿದೆ. ಆದರೆ ಅವರ ವಂಶಾವಳಿಯನ್ನು ಗಮನಿಸಿದರೆ ಅವರ ಅಜ್ಜ ಭಾರತದ ಪ್ರಥಮ ಅಟಾರ್ನಿ ಜನರಲ್, ತಂದೆಯೂ ಅದೇ ಹಾದಿಯಲ್ಲಿ ಸಾಗಿದವರು. ಹಾಗಾಗಿ ಇಂತಹ ಒಂದು ವಂಶದ ಕುಡಿಯ ಬಗ್ಗೆ ಹಾಲಿ ಸರಕಾರ ಚರಿತ್ರೆಯ ಯಾವುದೇ ಅರಿವಿಲ್ಲದೆ ಅವರನ್ನು ದೇಶದ್ರೋಹಿ, ಅಪರಾಧಿ ಎಂಬ ರೀತಿಯಾಗಿ ಚಿತ್ರಿಸುತ್ತಿರುವುದು ವಿಷಾದದ ಸಂಗತಿ ಎಂದು ರಾಜಶೇಖರ್ ಹೇಳಿದರು.

ಕಾನೂನು ಮತ್ತು ಸಂವಿಧಾನದ ವೌಲ್ಯಗಳನ್ನು ತಮ್ಮ ಜೀವನದ ಉಸಿರು ಮಾಡಿಕೊಂಡ ಕುಟುಂಬ ನನ್ನದು. ತುರ್ತು ಪರಿಸ್ಥಿತಿ ಸಂದರ್ಭ ತಮ್ಮ ಮನೆ ಪ್ರತಿಭಟನೆಯ ಕೇಂದ್ರವಾಗಿತ್ತು ಎಂಬುದನ್ನು ತಮ್ಮ ಕೃತಿಯಲ್ಲಿ ನಿರೂಪಿಸಿದ್ದಾರೆ ಎಂದು ಕೃತಿ ಬಗ್ಗೆ ರಾಜಶೇಖರ್ ವಿವರಿಸಿದರು.

ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆ. ಇಂದು ನಾವು ಕಾಣುತ್ತಿರುವ ಕೋಮುವಾದ ಕೇವಲ ರಾಷ್ಟ್ರ ಪ್ರಭುತ್ವದ ಹಿಂಸೆ, ದಬ್ಬಾಳಿಕೆ ಮಾತ್ರವಲ್ಲದೆ, ನಾಗರಿಕ ಸಮಾಜದ ಪ್ರಮುಖ ಸಂಸ್ಥೆಗಳ ದಬ್ಬಾಳಿಕೆ ಹಾಗೂ ಹಿಂಸೆಯಾಗಿದೆ. ರಾಷ್ಟ್ರ ಪ್ರಭುತ್ವದ ಹಿಂಸೆ ಹಾಗೂ ನಾಗರಿಕ ಸಮಾಜದ ಹಿಂಸೆ ಇವೆರಡೂ ಏಕೀಗೂಡಿಸುವುದು ಆರೆಸ್ಸೆಸ್‌ನಲ್ಲಿ. ಹಾಗಾಗಿ ಹಿಂದುತ್ವವಾದ ಮತ್ತು ಪ್ರತಿನಿಧಿಸುವ ಆರೆಸ್ಸೆಸ್ ಇಡೀ ದೇಶದ ಪ್ರಜಾಪ್ರಭುತ್ವ, ಸ್ವಾತಂತ್ರಕ್ಕೆ, ಸಂವಿಧಾನಕ್ಕೆ ತರಬಹುದಾದ ಅಪಾಯವನ್ನು ಗ್ರಹಿಸದಿದ್ದರೆ, ಮುಂದೆ ಅತೀ ದೊಡ್ಡ ಅಪಾಯ ಕಾದಿದೆ ಎಂದು ಅವರು ಹೇಳಿದರು.

2002ರ ಗುಜರಾತ್ ಗಲಭೆಯನ್ನು ವಿರೋಧಿಸುವವರು 1984ರ ಸಿಖ್ ನರಮೇಧವನ್ನು ವಿರೋಧಿಸಿದ್ದರು. ಆದರೆ ಹಿಂದುತ್ವವಾದಿಗಳು ಆ ಸತ್ಯವನ್ನು ಮರೆಮಾಚುತ್ತಿದ್ದಾರೆ. ನಾವು ಅವರ ಈ ಕುತಂತ್ರವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಿಖ್ ನರಮೇಧವನ್ನು ಗುಜರಾತ್ ಹಿಂಸೆಗೆ ಉತ್ತರವಾಗಿ, ಪ್ರತಿಯಾಗಿ ಮಾತನಾಡುವವರು ಅಸ್ಸಾಂನ ನೆಲ್ಲಿಯಲ್ಲಿ ನಡೆದ ಘಟನೆಯನ್ನು ಯಾಕೆ ಪ್ರಸ್ತಾಪಿಸುವುದಿಲ್ಲ ಎಂಬುನ್ನು ತೀಸ್ತಾ ಅವರು ಪ್ರಶ್ನಿಸಿದ್ದಾರೆ.

1992ರ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಅದರ ರುವಾರಿ ಎಲ್.ಕೆ. ಅಡ್ವಾಣಿಗಾಗಲಿ, ಪಾಲ್ಗೊಂಡ ಪ್ರಮುಖರಿಗಾಗಲಿ ಯಾವುದೇ ಶಿಕ್ಷೆ ಆಗಿಲ್ಲ. ಇದು ನಮ್ಮ ಕಾಲದ ವಿಪರ್ಯಾಸ. ಸಾರ್ವಜನಿಕರ ಸಮ್ಮುಖದಲ್ಲೇ ಈ ಹಿಂಸೆ ನಡೆದರೂ ಉತ್ತರ ದಾಯಿತ್ವವೇ ಇಲ್ಲದ, ಜವಾಬ್ದಾರಿ ಹೊರದ, ಶಿಕ್ಷೆಯೂ ಆಗದ ಹಿಂಸೆಗೆ ಭಾರತ ಸಾಕ್ಷಿಯಾಗಿದೆ. ಬಾಬರಿ ಮಸೀದಿ ಉರುಳಿದ ದಿನ ಸಂಜೆ ಮುಂಬೈನಲ್ಲಿ ಆರಂಭವಾದ ಗಲಭೆ 1993ರ ಜನವರಿಗೂ ಹಬ್ಬಿದ ಕೋಮು ಹಿಂಸಾಚಾರವನ್ನೂ ಪುಸ್ತಕದಲ್ಲಿ ತೀಸ್ತಾರವರು ಉಲ್ಲೇಖಿಸಿದ್ದಾರೆ ಎಂದು ರಾಜಶೇಖರ್ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X