Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮಾನವೀಯ ಆಶಯಗಳನ್ನು ಹೊಂದಿದ ಕವಿತೆಗಳು

ಮಾನವೀಯ ಆಶಯಗಳನ್ನು ಹೊಂದಿದ ಕವಿತೆಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ20 May 2019 12:01 AM IST
share
ಮಾನವೀಯ ಆಶಯಗಳನ್ನು ಹೊಂದಿದ ಕವಿತೆಗಳು

‘ಮಾನವರಾಗುವ’ ಹೊರೆಯಾಲ ದೊರೆ ಸ್ವಾಮಿಯವರ ಒಂಬತ್ತನೆಯ ಕವನ ಸಂಕಲನ. ‘ಮಾನವರಾಗೋಣ...’ ಎನ್ನುವ ಕವಿಯ ಆಶಯ ಇಂದು ನಿನ್ನೆಯದಲ್ಲ. ಪಂಪನಿಂದ ಹಿಡಿದು ಕುವೆಂಪುವರೆಗೆ ಎಲ್ಲ ಕವಿಗಳೂ ಮಾನವರಾಗುವ, ವಿಶ್ವಮಾನವರಾಗುವ ಆಶಯಗಳನ್ನು ಇಟ್ಟು ಹಾಡಿದ್ದಾರೆ. ಇಂತಹ ಮಾನವೀಯ ಸಂವೇದನೆಗಳುಳ್ಳ ಸುಮಾರು 70 ಕವಿತೆಗಳು ಇಲ್ಲಿವೆ. ಇಲ್ಲಿರುವ ಕವನಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದಂಥವುಗಳು. ಹೆಚ್ಚಿನವುಗಳು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಈ ಹಿನ್ನೆಲೆಯಲ್ಲಿ ವಿಷಯ ವೈವಿಧ್ಯತೆಗಳಿರುವುದು ಸಹಜ.
  ‘ಅಂದಂದಿನ ಕಾಲಕ್ಕೆ ನಾನು ನೀನೆಂಬುದಷ್ಟೇ ಸತ್ಯ, ಉಳಿದುದೆಲ್ಲ ಸುಳ್ಳು....’ ಎನ್ನುವುದನ್ನು ಅವರು ‘ಸತ್ಯ-ನಿತ್ಯ’ ಕವಿತೆಯಲ್ಲಿ ಹೇಳುತ್ತಾರೆ. ನಮ್ಮ ನಡೆಯುವ ದಾರಿಯಲ್ಲಿ ಎಡರು ತೊಡರುಗಳಾಗಿ ಸಿಲುಕುವ ಒಳಗಿನ ಹಾಗೂ ಹೊರಗಿನ ಕೆಡುಕುಗಳನ್ನು ‘ಹೆಬ್ಬಾವುಗಳು’ ಕವಿತೆಯಲ್ಲಿ ನಿರೂಪಿಸುತ್ತಾರೆ. ‘ಒಂದು ಅಕ್ಕಿ ಕಾಳಿನ ಕತೆ’ ಕಥನ ರೂಪದ ಕವಿತೆ. ನವೋದಯದ ಗೇಯತೆಯನ್ನು ಇದರಲ್ಲಿ ಕಾಣಬಹುದು. ಸಾಹುಕಾರರ ಸ್ವಾರ್ಥ, ಲೋಭಗಳನ್ನು ಹೇಳುತ್ತಾ, ಬದುಕಿನ ಹಸಿ ವಾಸ್ತವವನ್ನು ಹೇಳುವ ಕವಿತೆ ಇದು. ‘ಮನುಷ್ಯರೋ ಅವರು ಮನುಷ್ಯರು’ ಕವಿತೆ ಧರ್ಮಗಳಿಗೆ ಕ್ರೌರ್ಯಗಳನ್ನು ಅಂಟಿಸದೇ ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲು ಕಲಿಸುತ್ತದೆ. ಈ ಸಂಕಲನಗಳಲ್ಲಿ ಹಲವು ಗೇಯ ಗೀತೆಗಳಿವೆ. ನಾಡಭಕ್ತಿ, ದೈವಭಕ್ತಿ ಮೊದಲಾದ ಜನಪ್ರಿಯ ದಾಟಿಯ ಪದ್ಯಗಳನ್ನೂ ಒಳಗೊಂಡಿವೆ. ‘ಹೊರೆಯಾಲ ದೊರೆಸ್ವಾಮಿಯವರ ಕವನಗಳು ಹೆಚ್ಚಿನ ಅಧ್ಯಯನಕ್ಕೆ ಒಳಗಾದರೆ ನವ್ಯದ ಭರಾಟೆಯಲ್ಲಿ ನಾವು ಮರೆತಿರುವ ಜನಪದೀಯ ಲಯ, ಮಟ್ಟುಗಳನ್ನು, ನವೋದಯದ ಹೊಸ ಛಂದೋಪಪೂರಗಳನ್ನು ಪುನರುಜ್ಜೀವಿಸಿ, ಅವುಗಳ ಮೂಲಕ ವರ್ತಮಾನದ ಬಗೆ ಬಗೆಯ ವಿದ್ಯಮಾನಗಳನ್ನು ಎಲ್ಲರಿಗೂ ರುಚಿಸುವಂತೆ, ಎಲ್ಲ ಸ್ತರದ ಮನಸ್ಸುಗಳಿಗೂ ತಲುಪುವಂತೆ ಮಾಡಬಹುದು ....’ ಎಂದು ಪ್ರೊ. ಡಿ. ಎ. ಶಂಕರ್ ತಮ್ಮ ವುುನ್ನುಡಿಯಲ್ಲಿ ಅಭಿಪ್ರಾಯ ಪಡುತ್ತಾರೆ.
ಸಮಾನತಾ ಪ್ರಕಾಶನ ಮೈಸೂರು ಹೊರ ತಂದಿರುವ ಈ ಕೃತಿಯ ಒಟ್ಟು ಪುಟಗಳು 140. ಮುಖಬೆಲೆ 100 ರೂ. ಆಸಕ್ತರು 94828 08474 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X