ಪ್ರಧಾನಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿದ್ದರೆ ಗುಂಪು ಹತ್ಯೆಗೈಯುವ ಗೋರಕ್ಷಕರನ್ನು ತಡೆಯಲಿ: ಒವೈಸಿ

ಹೈದರಾಬಾದ್, ಮೇ 26: ‘ಅಲ್ಪಸಂಖ್ಯಾತರನ್ನು ಭಯದ ಭ್ರಮೆಯಲ್ಲಿರಿಸಲಾಗಿದೆ” ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ, “ಮೋದಿ ನಿಜವಾಗಿಯೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದಾದರೆ ಗೋರಕ್ಷಕರು ಮುಸ್ಲಿಮರನ್ನು ಥಳಿಸಿ ಕೊಲ್ಲುವುದಿಲ್ಲ ಎನ್ನುವುದನ್ನು ಖಚಿತಪಡಿಸಬೇಕು” ಎಂದಿ ಹೇಳಿದರು.
“ನಮ್ಮ ಸಂವಿಧಾನವು ಮನುಷ್ಯರಿಗೆ ಜೀವನದ ಹಕ್ಕನ್ನು ನೀಡಿದೆ ಹೊರತು ಪ್ರಾಣಿಗಳಿಗಲ್ಲ. ಇದನ್ನು ಪ್ರಧಾನಿಯವರು ಅರ್ಥ ಮಾಡಿಕೊಂಡರೆ ಅಲ್ಪಸಂಖ್ಯಾತರಲ್ಲಿರುವ ಭಯ ಹೋಗಬಹುದು” ಎಂದವರು ಹೇಳಿದರು.
“ಅಲ್ಪಸಂಖ್ಯಾತರು ಭಯದಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರಧಾನಿಯವರು ನಿಜವಾಗಿಯೂ ಭಾವಿಸುವುದಿದ್ದರೆ ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರನ್ನು ಕೊಲ್ಲುವ, ಥಳಿಸುವ, ವಿಡಿಯೋ ಮಾಡುವ ಮತ್ತು ಅವಮಾನಿಸುವ ಎಲ್ಲಾ ಗುಂಪುಗಳನ್ನು ಅವರು ತಡೆಯಲಿ. ಮಧ್ಯಪ್ರದೇಶದಲ್ಲಿ ಏನು ನಡೆದಿದೆಯೋ ಅದು ಉದಾಹರಣೆ” ಎಂದು ಒವೈಸಿ ಹೇಳಿದರು.
Next Story