Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮೌಂಟ್ ಎವರೆಸ್ಟ್ ದುರಂತ ತಪ್ಪಿಸಲು...

ಮೌಂಟ್ ಎವರೆಸ್ಟ್ ದುರಂತ ತಪ್ಪಿಸಲು ಆರೋಹಿಗಳಿಗೆ ಕಠಿಣ ನಿಯಮಗಳು ಅಗತ್ಯ

‘ಟ್ರಾಫಿಕ್ ಜಾಮ್’ನಿಂದ ಬದುಕುಳಿದ ಭಾರತೀಯ ಆರೋಹಿ

ವಾರ್ತಾಭಾರತಿವಾರ್ತಾಭಾರತಿ28 May 2019 11:13 PM IST
share
ಮೌಂಟ್ ಎವರೆಸ್ಟ್ ದುರಂತ ತಪ್ಪಿಸಲು ಆರೋಹಿಗಳಿಗೆ ಕಠಿಣ ನಿಯಮಗಳು ಅಗತ್ಯ

ಕಠ್ಮಂಡು (ನೇಪಾಳ), ಮೇ 28: ಮೌಂಟ್ ಎವರೆಸ್ಟ್‌ನಲ್ಲಿ ಈ ವರ್ಷ ಸಂಭವಿಸಿರುವ ದುರಂತಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದರೆ, ಪ್ರಾಥಮಿಕ ಕೌಶಲಗಳನ್ನು ಹೊಂದಿರದ ಆರೋಹಿಗಳಿಗೆ ಶಿಖರ ಏರಲು ಅವಕಾಶ ನೀಡಬಾರದು ಎಂಬುದಾಗಿ ಎವರೆಸ್ಟ್ ‘ಟ್ರಾಫಿಕ್ ಜಾಮ್’ ಎಂಬ ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಅಮೀಶಾ ಚೌಹಾನ್ ಹೇಳುತ್ತಾರೆ.

ಚೌಹಾನ್ ಈಗ ಹಿಮಹುಣ್ಣು (ಫ್ರಾಸ್ಟ್ ಬೈಟ್)ವಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎವರೆಸ್ಟ್‌ನಲ್ಲಿ ಎರಡು ವಾರಗಳ ಅವಧಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಅವರ ಪೈಕಿ ಹೆಚ್ಚಿನವರು ಶಿಖರ ತಲುಪಿದ ಬಳಿಕ ಕ್ಷಿಪ್ರವಾಗಿ ಇಳಿಯಲು ಸಾಧ್ಯವಾಗದೆ ಬಳಲಿಕೆ ಮತ್ತು ಕೊರೆಯುವ ಹಿಮ ಹುಣ್ಣುವಿನಿಂದಾಗಿ ಮೃತಪಟ್ಟಿದ್ದಾರೆ.

ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಆರೋಹಣ ಋತುವಿನ ಅವಧಿಯನ್ನು ಕಡಿಮೆ ಮಾಡಿದ ಬಳಿಕ, ಆರೋಹಿಗಳು ಒಮ್ಮೆಲೇ ಹೆಚ್ಚಿನ ಸಂಖ್ಯೆಯಲ್ಲಿ ಆರೋಹಣಕ್ಕೆ ಮುಂದಾದ ಹಿನ್ನೆಲೆಯಲ್ಲಿ ಅಲ್ಲಿ ದೊಡ್ಡ ಸರತಿ ಸಾಲು ಏರ್ಪಟ್ಟಿತ್ತು.

ಪ್ರಸಕ್ತ ಆರೋಹಣ ಋತುವಿನಲ್ಲಿ ನೇಪಾಳವು ದಾಖಲೆಯ 381 ಪರವಾನಿಗೆಗಳನ್ನು ನೀಡಿರುವುದನ್ನು ಸ್ಮರಿಸಬಹುದಾಗಿದೆ. ‘‘ಈ ಪೈಕಿ ಹಲವು ನೂರು ಆರೋಹಿಗಳು ಸರಿಯಾದ ತರಬೇತಿಯನ್ನೇ ಪಡೆದಿಲ್ಲ, ಅವರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಮೂಲಕ ಅವರು ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಈಡು ಮಾಡುವುದರ ಜೊತೆಗೆ ತಮ್ಮ ಶೆರ್ಪಾ ಗೈಡ್‌ಗಳ ಪ್ರಾಣಗಳನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ’’ ಎಂದು ಆಕೆ ಹೇಳಿದರು.

ಆರೋಹಿಗಳ ಉದ್ದನೆ ಸಾಲಿನಿಂದಾಗಿ, ಚೌಹಾನ್ ಎವರೆಸ್ಟ್ ತುದಿಯನ್ನು ತಲುಪಿದ ಬಳಿಕ ಕೆಳಗೆ ಬರಲು 20 ನಿಮಿಷಗಳು ಕಾಯಬೇಕಾಯಿತು. ಆದರೆ, ಇತರರು ಗಂಟೆಗಟ್ಟಳೆ ಬಾಕಿಯಾಗಿದ್ದರು.

‘‘ಪ್ರಾಥಮಿಕ ಕೌಶಲಗಳಿಲ್ಲದೆ ಎಲ್ಲದಕ್ಕೂ ತಮ್ಮ ಶೆರ್ಪಾ ಗೈಡ್‌ಗಳನ್ನೇ ಅವಲಂಬಿಸಿರುವ ಕೆಲವು ಆರೋಹಿಗಳನ್ನು ನಾನು ನೋಡಿದ್ದೇನೆ. ಸರಕಾರವು ಅರ್ಹತಾ ಮಾನದಂಡಗಳನ್ನು ವಿಧಿಸಬೇಕು’’ ಎಂದು ಕಠ್ಮಂಡುವಿನ ಸರಕಾರಿ ಆಸ್ಪತ್ರೆಯಲ್ಲಿ ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ 29 ವರ್ಷದ ಭಾರತೀಯ ಮಹಿಳೆ ಹೇಳಿದರು.

ಇಳಿಯುತ್ತಿರುವಾಗ ಅಮೆರಿಕನ್ ಆರೋಹಿ ಸಾವು

ವೌಂಟ್ ಎವರೆಸ್ಟ್‌ನಿಂದ ಇಳಿಯುತ್ತಿರುವ ವೇಳೆ ಸೋಮವಾರ ಅಮೆರಿಕದ ಆರೋಹಿಯೊಬ್ಬರು ಮೃತಪಟ್ಟಿದ್ದಾರೆ ಎಂದು ನೇಪಾಳಿ ಅಧಿಕಾರಿಗಳು ಹೇಳಿದ್ದಾರೆ.

ಇದರೊಂದಿಗೆ ಈ ವರ್ಷದ ಆರೋಹಣ ಋತುವಿನಲ್ಲಿ ನೇಪಾಳದ ಬದಿಯಲ್ಲಿ ಮೃತಪಟ್ಟ ಹಾಗೂ ನಾಪತ್ತೆಯಾದವರ ಸಂಖ್ಯೆ 11ಕ್ಕೇರಿದೆ.

61 ವರ್ಷದ ಕ್ರಿಸ್ಟೋಫರ್ ಜಾನ್ ಕುಲಿಶ್ ಸಾಮಾನ್ಯವಾಗಿರುವ ಆಗ್ನೇಯ ಅಂಚಿನ ಮಾರ್ಗದಿಂದ ಸೋಮವಾರ ಬೆಳಗ್ಗೆ 8,850 ಮೀಟರ್ ಎತ್ತರದ ಶಿಖರವನ್ನು ತಲುಪಿದರು. ಆದರೆ, ಇಳಿದ ಬಳಿಕ, ಸೌತ್ ಕಾಲ್‌ನಲ್ಲಿ ಹಠಾತ್ ಮೃತಪಟ್ಟರು ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಮೀರಾ ಆಚಾರ್ಯ ಹೇಳಿದರು.

ಅವರು ಇಳಿಯುತ್ತಿದ್ದಾಗ ಒಮ್ಮೆಲೆ ಹೃದಯದ ಸಮಸ್ಯೆಯನ್ನು ಎದುರಿಸಿದರು ಹಾಗೂ ತಕ್ಷಣ ಕೊನೆಯುಸಿರೆಳೆದರು ಎಂದು ಅವರು ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X