ಬಟ್ರಕೆರೆ : ಪಿಎಫ್ಐ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಮಂಗಳೂರು: ಪಿಎಫ್ಐ ಬಟ್ರಕೆರೆ ಯೂನಿಟ್ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಉರ್ದು ಸ್ಕೂಲ್ ಭಟ್ರಕೆರೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಪ್ಐ ಸುಂಕದಕಟ್ಟೆ ವಲಯಾಧ್ಯಕ್ಷ ಬಶೀರ್ ವಹಿಸಿದರು.
ಮುಖ್ಯ ಅತಿಥಿಗಳಾಗಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಪ್ ಮಾಚಾರ್, ಪಯಾಝ್ (ಅಧ್ಯಕ್ಷರು ಜಾಮಿಯಾ ಮಸೀದಿ ಭಟ್ರಕೆರೆ), ಊರ ಹಿರಿಯ ವ್ಯಕ್ತಿಗಳಾದ ಶಬೀರ್ ಭಾಯ್, ಮುಹಮ್ಮದ್ ಆಲಿ ಹಾಗೂ ಮುಖ್ತಾರ್ ಉಪಸ್ಥಿತರಿದ್ದರು. ರಹ್ಮತುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯ ಕ್ರಮದಲ್ಲಿ 58 ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕವನ್ನು ವಿತರಿಸಲಾಯಿತು.
Next Story





