ಸುವರ್ಣ ತ್ರಿಭುಜ ಅವಘಡದ ಬಗ್ಗೆ ತಜ್ಞರಿಂದ ವರದಿ: ಎಸ್ಪಿ ನಿಶಾ ಜೇಮ್ಸ್
ಉಡುಪಿ, ಮೇ 31: ಏಳು ಮಂದಿ ಮೀನುಗಾರರ ನಾಪತ್ತೆ ಹಾಗೂ ಸುವರ್ಣ ತ್ರಿಭುಜ ಬೋಟು ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರಿಂದ ಕೂಲಂಕಷ ವರದಿ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ನೌಕಪಡೆಯವರು ನಮ್ಮಂದಿಗೆ ಸಂಪರ್ಕದಲ್ಲಿದ್ದು, ಬೋಟಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇಲಾಖೆಗೆ ನೀಡಿದ್ದಾರೆ. ಬೋಟು ಯಾವ ವೇಗದಲ್ಲಿ ಚಲಿಸಿರಬಹುದು, ಅವಘಡ ಸಂಭವಿಸಲು ಕಾರಣ ಏನು, ಬೋಟಿನಲ್ಲಿದ್ದವರು ಎಲ್ಲಿ ಹೋದರು ಎಂಬುದರ ಬಗ್ಗೆ ತಜ್ಞರಿಂದ ಅಭಿಪ್ರಾಯ ಪಡೆದುಕೊಳ್ಳ ಲಾಗುವುದು. ಈ ಮೂಲಕ ಅವಘಡಕ್ಕೆ ಕಾರಣವನ್ನು ಸಹ ತಿಳಿದುಕೊಳ್ಳಲಾ ಗುವುದು ಎಂದರು.
20 ದಿನಗಳ ಹಿಂದೆ ಉಡುಪಿಯ ಪೊಲೀಸ್ ತಂಡ ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳ ಕರಾವಳಿಯಲ್ಲಿರುವ ಪೊಲೀಸ್ ಠಾಣೆಗಳಿಗೆ ತೆರಳಿಬೋಟು ನಾಪತ್ತೆಯಾದ ದಿನದಿಂದ ಈವರೆಗೆ ತೀರದಲ್ಲಿ ಯಾವುದಾದರು ಮೃತದೇಹ ಪತ್ತೆಯಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ತಂಡಕ್ಕೆ ೊರೆತಿಲ್ಲ ಎಂದು ಅವರು ಹೇಳಿದರು.
ಅವಘಡದಿಂದ 60 ಅಡಿ ಆಳದ ಸಮುದ್ರದಲ್ಲಿ ಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿನ ಅವಶೇಷವನ್ನು ಖಾಸಗಿ ಏಜೆನ್ಸಿ ಮೂಲಕ ಸರಕಾರದ ಸಹಾಯದೊಂದಿಗೆ ಮೇಲಕ್ಕೆತ್ತಲು ಪ್ರಯತ್ನಿಸಲಾಗುವುದು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.







