ಬಾವಿಗೆ ಬಿದ್ದು ಮೃತ್ಯು
ಶಂಕರನಾರಾಯಣ, ಜೂ.2: ಕೆಸರು ತೆಗೆಯಲು ಬಾವಿಗೆ ಇಳಿದ ವ್ಯಕ್ತಿ ಯೊಬ್ಬರು ಮೇಲೆ ಹತ್ತುತ್ತಿದ್ದಾಗ ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಜೂ.1 ರಂದು ಬೆಳಗ್ಗೆ ಹಿಲಿಯಾಣ ಗ್ರಾಮದ ಗೋಳಿಯಂಗಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಹಿಲಿಯಾನ ಗ್ರಾಮದ ಕಾರಿಕೊಡ್ಲು ನಿವಾಸಿ ಪುಟ್ಟಯ್ಯ ನಾಯ್ಕ (47) ಎಂದು ಗುರುತಿಸಲಾಗಿದೆ.
ಇವರು ಬಾಲಕೃಷ್ಣ ಭಟ್ ಎಂಬವರ ಮನೆಯ ಬಾವಿಯ ಕೆಸರನ್ನು ತೆಗೆಯಲು ಇಳಿದಿದ್ದು, ನಂತರ ಕೆಸರು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿ ಬಾವಿಯಿಂದ ಮೇಲೆ ಹತ್ತುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರು.
ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story