ಅಡಿಕೆ, ಕಾಳುಮೆಣಸು ಬೆಳೆಗಳಿಗೆ ವಿಮಾ ಯೋಜನೆ
ಉಡುಪಿ, ಜೂ.3: 2019-20ನೇ ಸಾಲಿನ ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿ ಉಡುಪಿ ಜಿಲ್ಲೆಗೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರಿಗೆ ಐಚ್ಛಿಕವಾಗಿ ವಿಮೆಗೆ ಒಳಪಡಿಸುವ ಸಲುವಾಗಿ, ಜಿಲ್ಲೆಯಲ್ಲಿ ಅಧಿಸೂಚಿಸಲ್ಪಟ್ಟ ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ವಿಮಾ ಮೊತ್ತ ನೀಡುವ ಸಲುವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಅಡಿಕೆ ಬೆಳೆಗೆ 154 ಗ್ರಾಪಂಗಳು ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕಾಳುಮೆಣಸು ಬೆಳೆಗೆ 101 ಗ್ರಾಪಂಗಳು ಹಾಗೂ 3 ನಗರ ಸ್ಥಳೀಯ ಸಂಸ್ಥೆಗಳ ವಿಮಾ ಘಟಕಗಳಿರುತ್ತವೆ. ಅಡಿಕೆಗೆ 1.28 ಲಕ್ಷ ವಿಮಾ ಮೊತ್ತಕ್ಕೆ ಶೇ.5ರಂತೆ ಪ್ರತೀ ಹೆಕ್ಟೇರ್ಗೆ 6400 ರೂ. ಹಾಗೂ ಕಾಳುಮೆಣಸಿಗೆ 0.47 ಲಕ್ಷ ವಿಮಾ ಮೊತ್ತಕ್ಕೆ ಶೇ.5ರಂತೆ ಪ್ರತೀ ಹೆಕ್ಟೇರ್ಗೆ 2350 ರೂ. ವಿಮಾ ಕಂತನ್ನು ಪಾವತಿಸಬೇಕಾಗುತ್ತದೆ.
ಅಡಿಕೆ ಬೆಳೆಗೆ 154 ಗ್ರಾಪಂಗಳು ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕಾಳುಮೆಣಸು ಬೆಳೆಗೆ 101 ಗ್ರಾಪಂಗಳು ಹಾಗೂ 3 ನಗರ ಸ್ಥಳೀಯ ಸಂಸ್ಥೆಗಳ ವಿಮಾ ಘಟಕಗಳಿರುತ್ತವೆ. ಅಡಿಕೆಗೆ 1.28 ಲಕ್ಷ ವಿಮಾ ಮೊತ್ತಕ್ಕೆ ಶೇ.5ರಂತೆ ಪ್ರತೀ ಹೆಕ್ಟೇರ್ಗೆ 6400 ರೂ. ಹಾಗೂ ಕಾಳುಮೆಣಸಿಗೆ 0.47 ಲಕ್ಷ ವಿಮಾ ಮೊತ್ತಕ್ಕೆ ಶೇ.5ರಂತೆ ಪ್ರತೀ ಹೆಕ್ಟೇರ್ಗೆ 2350 ರೂ. ವಿಮಾ ಕಂತನ್ನು ಪಾವತಿಸಬೇಕಾಗುತ್ತದೆ. ವಿಮಾ ಕಂತನ್ನು ಜೂ.30ರೊಳಗೆ ರೈತರು ರಾಷ್ಟ್ರೀಕೃತ /ಸಹಕಾರಿ/ ವಾಣಿಜ್ಯ ಬ್ಯಾಂಕ್ಗಳ ಮೂಲಕ ಪಾವತಿಸಿ ಯೋಜನೆಯ ಪ್ರಯೋಜನ ಪಡೆಯ ಬಹುದು.
ಐಚ್ಚಿಕವಾಗಿ ವಿಮೆಗೆ ಒಳಪಡುವ ರೈತರು ಪ್ರಸ್ತುತ ಸಾಲಿನ ಪಹಣಿ, ಬ್ಯಾಂಕ್ ಪುಸ್ತಕದ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವಯಂ ಘೋಷಿತ ಬೆಳೆ ವಿವರ ಸಲ್ಲಿಸುವಂತೆ ಜಿಪಂ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.







