ಉಪ ಸ್ಪೀಕರ್ ಹುದ್ದೆ ಸಹಜ ಹಕ್ಕು: ಶಿವಸೇನೆ
ಹೊಸದಿಲ್ಲಿ, ಜೂ. 6: ಕೆಳಮನೆಯಲ್ಲಿ ಉಪ ಸ್ಪೀಕರ್ ಹುದ್ದೆಗೆ ನಾವು ಸಹಜ ಹಕ್ಕುದಾರರು ಎಂದು ಬಿಜೆಪಿಯ ಮಿತ್ರ ಪಕ್ಷವಾದ ಶಿವಸೇನೆ ಗುರುವಾರ ಹೇಳಿದೆ. ‘‘ಇದು (ಉಪ ಸ್ಪೀಕರ್ ಹುದ್ದೆ) ನಮ್ಮ ಆಗ್ರಹ ಅಲ್ಲ. ಇದು ನಮ್ಮ ಸಹಜ ಪ್ರತಿಪಾದನೆ ಹಾಗೂ ಹಕ್ಕು. ಈ ಹುದ್ದೆಯನ್ನು ಶಿವಸೇನೆಗೆ ನೀಡಬೇಕು.’’ ಎಂದು ಪಕ್ಷದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಶಿವಸೇನೆಗೆ ಒಂದು ಸಚಿವ ಸ್ಥಾನ ನೀಡಲಾಗಿದೆ. ಭಾರೀ ಕೈಗಾರಿಗೆ ಹಾಗೂ ಸಾರ್ವಜನಿಕ ಉದ್ಯಮ ಖಾತೆಯನ್ನು ಅರವಿಂದ ಗಣಪತ್ ಸಾವಂತ್ ಅವರಿಗೆ ನೀಡಿರುವುದಕ್ಕೆ ಶಿವಸೇನೆ ಅಸಮಾಧಾನಗೊಂಡಿದೆ ಎಂದು ವರದಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಕೂಡ ಶಿವಸೇನೆ ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಂಡಿದೆ.
Next Story