Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಗೊತ್ತೇ...? ಮಕ್ಕಳನ್ನೂ ಸಂಧಿವಾತ...

ನಿಮಗೆ ಗೊತ್ತೇ...? ಮಕ್ಕಳನ್ನೂ ಸಂಧಿವಾತ ಕಾಡಬಹುದು...!

ವಾರ್ತಾಭಾರತಿವಾರ್ತಾಭಾರತಿ7 Jun 2019 7:54 PM IST
share
ನಿಮಗೆ ಗೊತ್ತೇ...? ಮಕ್ಕಳನ್ನೂ ಸಂಧಿವಾತ ಕಾಡಬಹುದು...!

ಸಂಧಿವಾತ ಹೆಚ್ಚಾಗಿ ವಯಸ್ಸಾದವರನ್ನು ಕಾಡುವ ಕಾಯಿಲೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮಕ್ಕಳೂ ಸಂಧಿವಾತಕ್ಕೆ ಗುರಿಯಾಗುತ್ತಾರೆ ಎಂದರೆ ಹಲವರು ಹುಬ್ಬೇರಿಸಬಹುದು.ಆದರೆ ಬಾಲ ಸಂಧಿವಾತವು ವಿಶ್ವಾದ್ಯಂತ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲೊಂದಾಗಿದೆ ಎನ್ನುವುದು ವಾಸ್ತವ.

 ಸಂಧಿವಾತವು ಮಕ್ಕಳಲ್ಲಿ ಪ್ರಮುಖವಾಗಿ ಕೀಲುಗಳು,ಸ್ನಾಯುಗಳು ಮತ್ತು ಮೂಳೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಹಾಗೂ ಇದು ಊತ,ನೋವು ಮತ್ತು ಪೀಡಿತ ಭಾಗದಲ್ಲಿ ಕೆಂಪಗಾಗುವಿಕೆಯಂತಹ ಸಾಮಾನ್ಯ ಲಕ್ಷಣಗಳನ್ನೇ ತೋರಿಸುತ್ತದೆಯಾದರೂ ಕೆಲವು ವಿಶಿಷ್ಟ ಲಕ್ಷಣಗಳೂ ಇವೆ.

 ಮಕ್ಕಳಲ್ಲಿ ಸಂಧಿವಾತ ಕಾಣಿಸಿಕೊಂಡಿದೆ ಎಂಬ ಶಂಕೆಯುಂಟಾದರೆ ಚಿಕಿತ್ಸೆಯ ನಿರ್ಧಾರಕ್ಕೆ ಮುನ್ನ ಅದು ಯಾವ ವಿಧದ ಸಂಧಿವಾತ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಸಂಧಿವಾತವು ಮುಂದುವರಿದ ಹಂತದಲ್ಲಿದ್ದರೆ ವ್ಯಕ್ತಿಯ ಪ್ರಾಥಮಿಕ ಚಲನವಲನಗಳಿಗೂ ತೊಂದರೆಯನ್ನುಂಟು ಮಾಡುತ್ತದೆ.

ನಾವು ಕೇವಲ ವಯಸ್ಕರಲ್ಲಿ ಕೇಳಿರುವ ಅನಾರೋಗ್ಯ ಸ್ಥಿತಿಗಳು ಮಕ್ಕಳಲ್ಲಿ ಕಂಡು ಬಂದರೆ ಖಂಡಿತ ಕಡೆಗಣಿಸಕೂಡದು. ಸಕಾಲಕ್ಕೆ ಚಿಕಿತ್ಸೆ ಕೊಡಿಸದಿದ್ದರೆ ಇದು ಗಂಭೀರ ಸ್ಥಿತಿಗೆ ಕಾರಣವಾಗಬಹುದು ಮತ್ತು ಜೀವಮಾನವಿಡೀ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಉಂಟಾಗುವ ಸಂಧಿವಾತದ ವಿಧಗಳು ಮತ್ತು ಅವುಗಳ ಲಕ್ಷಣಗಳ ಕುರಿತು ಮಾಹಿತಿಯಿಲ್ಲಿದೆ.

ಜುವೆಲಿನ್ ಡರ್ಮಟೊಮಯೊಸಿಟಿಸ್: ಪ್ರತಿ ಐವರು ಮಕ್ಕಳಲ್ಲಿ ಒಂದು ಮಗು ಈ ವಿಧದ ಸಂಧಿವಾತಕ್ಕೆ ಗುರಿಯಾಗುವ ಸಾಧ್ಯತೆಯಿರುತ್ತದೆ. ಇಡೀ ಶರೀರವನ್ನೇ ಕಾಡಿಸುವ ಇದು ಪ್ರಮುಖವಾಗಿ ಭುಜಗಳು,ತೊಡೆಗಳು ಮತ್ತು ಕುತ್ತಿಗೆಯಿಂದ ಸೊಂಟದವರೆಗಿನ ಭಾಗವನ್ನು ಪೀಡಿಸುತ್ತದೆ. ಇದರಿಂದಾಗಿ ಮೆಟ್ಟಿಲುಗಳನ್ನು ಹತ್ತುವುದು, ಓಡುವುದು ಹಾಗೂ ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವಂತಹ ಇತರ ಚಲನವಲನಗಳು ಕಷ್ಟವಾಗುತ್ತವೆ.

ಜುವೆಲಿನ್ ಐಡೊಪತಿಕ್ ಆರ್ಥ್ರಿಟಿಸ್: ಈ ವಿಧದ ಸಂಧಿವಾತವು ಸಾಮಾನ್ಯವಾಗಿ ಮಕ್ಕಳಲ್ಲಿ 16ರ ವಯಸ್ಸಿಗೆ ಮುನ್ನವೇ ಕಾಣಿಸಿಕೊಳ್ಳತೊಡಗುತ್ತದೆ. ಕನಿಷ್ಠ ಆರು ವಾರಗಳ ಕಾಲ ಕೀಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಸಂಧಿವಾತದ ಗಂಭೀರತೆಯನ್ನು ತಿಳಿದುಕೊಳ್ಳಲು ಪ್ರಮುಖ ಸೂಚಕಗಳಾಗಿವೆ. ಮೂಳೆಗಳ ಸವೆತ, ಕೀಲುಗಳ ಜೋಡಣೆ ತಪ್ಪುವಿಕೆ,ಸ್ನಾಯುಗಳು ಮತ್ತು ಮೃದು ಅಂಗಾಂಶಗಳ ಸೆಡೆತ,ಕ್ರಮ ತಪ್ಪಿದ ಶರೀರದ ಬೆಳವಣಿಗೆ ಇವು ಈ ವಿಧದ ಸಂಧಿವಾತದ ಸಾಮಾನ್ಯ ಲಕ್ಷಣಗಳಾಗಿವೆ.

 ಜುವೆಲಿನ್ ಸ್ಲೆರೊಡರ್ಮಾ: ಈ ವಿಧದ ಸಂಧಿವಾತದಲ್ಲಿ ಚರ್ಮವು ಬಿಗಿಗೊಳ್ಳುತ್ತದೆ ಮತ್ತು ಪೆಡಸಾಗುತ್ತದೆ ಮತ್ತು ಈ ಸ್ಥಿತಿ ಇಡೀ ಶರೀರವನ್ನು ವ್ಯಾಪಿಸುತ್ತದೆ. ಅದು ಮೊದಲು ಮುಖ,ಮುಂದೋಳುಗಳು,ಕೈಗಳು ಮತ್ತು ಬೆರಳುಗಳನ್ನು ಕಾಡುತ್ತದೆ.

  ಜುವೆಲಿನ್ ಲುಪಸ್: ಶರೀರದ ರೋಗ ನಿರೋಧಕ ಶಕ್ತಿಗೆ ಹಾನಿಯನ್ನುಂಟು ಮಾಡುವ ಈ ವಿಧದ ಬಾಲ ಸಂಧಿವಾತವು ಹೆಚ್ಚಾಗಿ ಹೆಣ್ಣುಮಕ್ಕಳನ್ನು ಕಾಡುತ್ತದೆ ಹಾಗೂ ಮೂತ್ರಪಿಂಡ,ಚರ್ಮ,ಕೀಲುಗಳು,ರಕ್ತ ಮತ್ತು ಶರೀರದ ಇತರ ಮುಖ್ಯಭಾಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಶರೀರದಲ್ಲಿ ಯಾವುದೇ ಭಾಗದಲ್ಲಿ ಪಾತರಗಿತ್ತಿ ಆಕಾರದಲ್ಲಿ ದದ್ದುಗಳು,ಮಗುವಿನ ಕುತ್ತಿಗೆ ಮತ್ತು ಮುಖದಲ್ಲಿ ಹಪ್ಪಳೆಗಳಿಂದ ಕೂಡಿದ ದದ್ದುಗಳು,ಸೂರ್ಯನ ಬಿಸಿಲನ್ನು ನೋಡಲು ಮತ್ತು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗದಿರುವುದು,ಎದೆ ಮತ್ತು ಕೀಲುಗಳಲ್ಲಿ ನೋವು ಇವು ಈ ವಿಧದ ಸಂಧಿವಾತದ ಲಕ್ಷಣಗಳಾಗಿವೆ.

 ಫೈಬ್ರೊಮ್ಯಾಲ್ಗಿಯಾ: ಹೆಚ್ಚಾಗಿ ಮಕ್ಕಳು ಪ್ರೌಢಾವಸ್ಥೆಯನ್ನು ತಲುಪುವ ಮುನ್ನ ಕಾಣಿಸಿಕೊಳ್ಳುವ ಫೈಬ್ರೊಮ್ಯಾಲ್ಗಿಯಾವು ಸಂಧಿವಾತ ಸಂಬಂಧಿತ ಸ್ಥಿತಿಯಾಗಿದ್ದು,ಶರೀರದಲ್ಲಿ ನೋವು ಮತ್ತು ಸೆಟೆತಗಳಿಗೆ ಕಾರಣವಾಗುತ್ತದೆ. ಇದು ತೀವ್ರ ಬಳಲಿಕೆ,ನಿದ್ರೆಗೆ ವ್ಯತ್ಯಯ ಮತ್ತು ದೀರ್ಘಕಾಲಿಕ ಶರೀರದ ನೋವಿಗೂ ಕಾರಣವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X