ಮಣಿಪಾಲ ಕೆಎಂಸಿ ಉದ್ಯೋಗಿಯ ಸಂಶಯಾಸ್ಪದ ಸಾವು: ದೂರು
ಹಿರಿಯಡ್ಕ, ಜೂ.8: ಮಣಿಪಾಲ ಕೆಎಂಸಿಯ ಮಹಿಳಾ ಉದ್ಯೋಗಿ ಯೊಬ್ಬರು ಅನುಮಾನಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ಪಟ್ಟ ಘಟನೆ ಜೂ.7ರಂದು ಮಧ್ಯಾಹ್ನ ವೇಳೆ ಕುಕ್ಕೆಹಳ್ಳಿಯ ಚೋಳಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಸಂತೋಷ್ ಎಂಬವರ ಪತ್ನಿ ಶಾಂತಿ(27) ಎಂದು ಗುರುತಿಸ ಲಾಗಿದೆ. ಅಲೆವೂರು ಗುಡ್ಡೆಯಂಗಡಿಯ ಸಾಧು ಪಾಣಾರ ಎಂಬವರ ಕಿರಿಯ ಮಗಳಾದ ಶಾಂತಿಗೆ 2011ರಲ್ಲಿ ಸಂತೋಷ್ ಜೊತೆ ಮದುವೆಯಾಗಿದ್ದು, ಆಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದರು.
ಕೆಲಸ ಮುಗಿಸಿ ಮನೆಗೆ ಬಂದ ಶಾಂತಿ ಮನೆಯ ಹಾಲಿನ ಸೀಟು ಮಾಡಿಗೆ ಹಾಕಿದ ಕಬ್ಬಿಣದ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ದೂರಲಾಗಿದೆ. ಅಂಬಲಪಾಡಿ ದೇವಳಕ್ಕೆ ತೆರಳಿದ್ದ ಸಂತೋಷ್ ಮನೆಗೆ ಬರು ವಾಗ ಶಾಂತಿ ಆತ್ಮತ್ಯೆ ಮಾಡಿರುವುದು ಕಂಡುಬಂದಿದೆ.
‘ತಲೆನೋವು ಹಾಗೂ ಮಕ್ಕಳಾಗದ ಬಗ್ಗೆ ಜೀವನದಲ್ಲಿ ಜಿಗುಪ್ಸೆ ಗೊಂಡ ಶಾಂತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡ ಹೆಂಡತಿ ಮಧ್ಯೆ ಯಾವುದೇ ಮನಸ್ತಾಪ ಇಲ್ಲ. ಆದರೆ ನೇಣು ಹಾಕಿಕೊಂಡ ಶಾಂತಿಯ ಕಾಲುಗಳು ನೆಲಕ್ಕೆ ತಾಗಿಕೊಂಡಿರುವುದರಿಂದ ಸಂಶಯ ಇದ್ದು ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಸಾಧು ಪಾಣಾರ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.