ದಾಖಲೆ ತಿದ್ದುಪಡಿ ಪ್ರಕರಣ: ನಿವೃತ್ತ ಮೇಜರ್ ಆರೋಪ ಸಾಬೀತು

ಚಂಡಿಗಢ, ಜೂ. 8: ಅಂಗವಿಕಲರ ಪಿಂಚಣಿ ಪಡೆಯಲು ‘ನಕಲಿ ಪ್ರತಿಪಾದನೆ ಹಾಗೂ ಅಧಿಕೃತ ದಾಖಲೆಗಳ ತಿದ್ದುಪಡಿ’ ಮಾಡಿದ ಪ್ರಕರಣದಲ್ಲಿ ಮೇಜರ್ ಜನರಲ್ ಓರ್ವರನ್ನು ಜನರಲ್ ಕೋರ್ಟ್ ಮಾರ್ಷಲ್ ದೋಷಿ ಎಂದು ಪರಿಗಣಿಸಿದೆ ಹಾಗೂ ಶಿಕ್ಷೆಯಾಗಿ ಅವರ 10 ವರ್ಷಗಳ ಸೇವೆುನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಹೊಸದಿಲ್ಲಿಯ ಸೇನಾ ಕೇಂದ್ರ ಕಚೇರಿಯಲ್ಲಿ ನಡೆದ ವಿಚಾರಣೆಯಲ್ಲಿ ಲೆಫ್ಟಿನೆಂಟ್ ಜನರಲ್ ಮಿಲಿಂದ್ ಹೇಮಂತ್ ಠಾಕೂರ್ ಹಾಗೂ ಇತರ ಆರು ಮಂದಿ ಜನರಲ್ಗಳು ಸದಸ್ಯರಾಗಿ ಉಪಸ್ಥಿತರಿದ್ದರು. ಮಾರ್ಚ್ 6ರಂದು ವಿಚಾರಣೆ ಆರಂಭವಾಗಿದ್ದು, ಇಂದು ಪೂರ್ಣಗೊಂಡಿದೆ.
ಸೇನೆಯ ಎಜುಕೇಶನ್ ಕಾರ್ಪ್ಸ್ನ ಮಾಜಿ ಮುಖ್ಯಸ್ಥರಾಗಿದ್ದ ಹಾಗೂ ಹೆಚ್ಚುವರಿ ಪ್ರಧಾನ ನಿರ್ದೇಶಕ (ಎಇಸಿ)ರಾಗಿ ನಿವೃತ್ತರಾದ ಮೇಜರ್ ಜನರಲ್ ದೇಬಾಸಿಶ್ ರಾಯ್ ವಿರುದ್ಧ ವಿವಿಧ ಕಲಂ ಅಡಿಯಲ್ಲಿ ನಾಲ್ಕು ಆರೋಪಗಳನ್ನು ದಾಖಲಿಸಲಾಗಿತ್ತು.
Next Story