ಅಕ್ರಮ ಮರಳು ಸಾಗಾಟ: ಟಿಪ್ಪರ್ ವಶ
ಶಂಕರನಾರಾಯಣ, ಜೂ.9: ಅಕ್ರಮ ಮರಳು ಸಾಗಿಸುತ್ತಿದ್ದ ಮಿನಿ ಟಿಪ್ಪರನ್ನು ಶಂಕರನಾರಾಯಣ ಪೊಲೀಸರು ಸಿದ್ದಾಪುರ ಗ್ರಾಮದ ಒಳಾಲು ಎಂಬಲ್ಲಿ ಜೂ.8ರಂದು ಸಂಜೆ ವೇಳೆ ವಶಪಡಿಸಿಕೊಂಡಿದ್ದಾರೆ.
ಒಳಾಲು ಸಣ್ಣ ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕುರಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು, 7,00,00ರೂ. ಮೌಲ್ಯದ ಮಿನಿ ಟಿಪ್ಪರ್ ಹಾಗೂ 4ಸಾವಿರ ರೂ. ವೌಲ್ಯದ ಮರಳನ್ನು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story