Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ10 Jun 2019 12:00 AM IST
share
ಓ ಮೆಣಸೇ…

ಮೋದಿ ಸಂಪುಟದಲ್ಲಿ ಕೆಲಸ ಮಾಡುವುದೇ ಒಂದು ದೊಡ್ಡ ಸಾಧನೆ -ಸುರೇಶ್ ಅಂಗಡಿ, ಕೇಂದ್ರ ಸಚಿವ   
ಅಲ್ಲಿ ಕೆಲಸ ಮಾಡುವವರನ್ನು ಉಳಿಸಿಕೊಳ್ಳುವ ಪದ್ಧತಿಯಿಲ್ಲ. ಭೋಪರಾಕ್ ಹೇಳುತ್ತಾ ಒಟ್ಟಿಗಿದ್ದರೆ ಸಾಕು.

---------------------

ಸಿಂಹ ಹುಲಿಗಳಿಗಿಂತಲೂ ಗೋವಿನ ಸಂತತಿ ಕಡಿಮೆಯಾಗಿದೆ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಸಿಂಹ, ಹುಲಿಗಳ ಸಂತತಿ ಕಡಿಮೆಯಾಗಿರುವುದು ಮುಸ್ಲಿಮರು ಅದನ್ನು ಭಕ್ಷಿಸಿದ ಕಾರಣಕ್ಕೆ ಎಂದು ಇನ್ನೂ ಆರೋಪಿಸಿಲ್ಲವೇ?

---------------------
ರಾಜ್ಯದಲ್ಲಿ 35 ಲಕ್ಷಕ್ಕೂ ಅಧಿಕ ಬಿಲ್ಲವರಿದ್ದರೂ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ಪ್ರತಿಪಕ್ಷನಾಯಕ
ಬಿಜೆಪಿಯೂ ಬೇಕು, ಸ್ಥಾನಮಾನವೂ ಬೇಕು ಎಂದರೆ ಆಗುತ್ತದೆಯೇ? ಮೋದಿ ಪ್ರಧಾನಿಯಾದರೆ ಸಾಕಾಗುವುದಿಲ್ಲವೇ?

---------------------

ನಾನು ಬೆಟ್ ಕಟ್ಟುತ್ತೇನೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ - ರೇಣುಕಾಚಾರ್ಯ, ಶಾಸಕ
ಬೆಟ್ಟಿಂಗ್ ಮಾಫಿಯಾದ ರಾಜ ಎನ್ನುವುದನ್ನು ಅಧಿಕೃತವಾಗಿ ಘೋಷಿಸಿದಂತಾಗಿದೆ.

---------------------

ಒಳ್ಳೆಯ ನೆನಪುಗಳು ನಮ್ಮಲ್ಲಿರುವ ಉತ್ಸಾಹವನ್ನು ಮತ್ತಷ್ಟ್ಟು ಹೆಚ್ಚಿಸುವ ಟಾನಿಕ್ ಇದ್ದ ಹಾಗೆ - ಸಂಜಯ್‌ದತ್, ನಟ
ಕೆಲವು ಟಾನಿಕ್‌ಗಳು ಕೆಟ್ಟ ನೆನಪುಗಳನ್ನಷ್ಟೇ ಕೆದಕುತ್ತವೆ.

---------------------

ಮಹಾದಾಯಿ ಸಮಸ್ಯೆಗೆ ಒಗ್ಗಟ್ಟೇ ಮದ್ದು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಈ ಕುರಿತಂತೆ ಮೊದಲು ಬಿಜೆಪಿ ಸಂಸದರು ಒಗ್ಗಟ್ಟಾಗಬೇಕಾಗಿದೆ.

---------------------

ಬಿಜೆಪಿ ರಾಜಕೀಯದೊಂದಿಗೆ ಧರ್ಮ ಬೆರೆಸುತ್ತಿದೆ - ಮಮತಾ ಬ್ಯಾನರ್ಜಿ, ಪ.ಬಂಗಾಳ ಮುಖ್ಯಮಂತ್ರಿ
ಎಡಪಂಥೀಯರು ಚಿಯರ್ಸ್‌ ಎಂದು ಅದನ್ನು ಕುಡಿಯ ಹೊರಟಿದ್ದಾರೆ.

---------------------

ಸಂಸದನಾಗಿ ಜಿಲ್ಲೆಯ ಜನರಿಗೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ - ನಳಿನ್‌ಕುಮಾರ್ ಕಟೀಲು, ಸಂಸದ
ಈವರೆಗೆ ಅಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡಿರುವುದನ್ನು ಒಪ್ಪಿಕೊಂಡಂತಾಯಿತು.

---------------------

ದಿ ಹೇರಿಕೆಗೆ ಅಡ್ಡಿ ಮಾಡುವವರು ಮೊದಲು ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡಲಿ - ಶೋಭಾ ಕರಂದ್ಲಾಜೆ, ಸಂಸದೆ
 ಕನ್ನಡ ಕಡ್ಡಾಯ ಕಲಿಯುವುದಕ್ಕೆ ಹಿಂದಿ ಹೇರಿಕೆ ಅಡ್ಡಿಯಾಗಿದೆ ತಾಯಿ.

---------------------

ನಾನೆಂದೂ ಹಿಂಬಾಗಿಲಿನ ರಾಜಕಾರಣ ಮಾಡಿಲ್ಲ - ಬಸವರಾಜ ಹೊರಟ್ಟಿ, ವಿ.ಪ.ಸದಸ್ಯ

ಬಹುಶಃ ಗೋಡೆಗೆ ಕನ್ನ ಕೊರೆದಿರಬೇಕು.

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಇವಿಎಂ ಬಗ್ಗೆ ಅನುಮಾನ ಪಡುವಷ್ಟು ದಡ್ಡತನ ಇದೆ ಎಂದು ನನಗೆ ಈ ತನಕ ಗೊತ್ತಿರಲಿಲ್ಲ - ಸಿ.ಟಿ.ರವಿ, ಶಾಸಕ
ಅಂದರೆ ಅನುಮಾನದ ಅಗತ್ಯವಿಲ್ಲ, ನೇರವಾಗಿ ಆರೋಪ ಮಾಡಬೇಕಿತ್ತು ಎನ್ನುವ ಸಲಹೆಯೇ?

---------------------

ನಾನು ಕಾಂಗ್ರೆಸ್‌ನ ನಿಷ್ಠಾವಂತ ಸಿಪಾಯಿ - ರೋಷನ್‌ ಬೇಗ್, ಮಾಜಿ ಸಚಿವ
ಆದರೆ ಶತ್ರುಗಳಿಗೆಂದು ಬಿಟ್ಟ ಬಾಣ ಇರಿದದ್ದು ಕಾಂಗ್ರೆಸನ್ನು.

---------------------

ಪುರಾವೆ ಇಲ್ಲದೆ ಇವಿಎಂ ದೂಷಿಸುವುದು ಸರಿಯಲ್ಲ - ಶಶಿತರೂರು, ಸಂಸದ
  ಪುರಾವೆಗಳ ನಾಶವನ್ನಾದರೂ ಪ್ರಶ್ನಿಸಬೇಕಲ್ಲ?

---------------------

ಸಿನೆಮಾದಲ್ಲಿ ಡ್ಯೂಪ್‌ಗಿಂತ ರಿಯಲ್ ಸ್ಟಂಟ್ ಮಾಡುವುದು ನನಗೆ ಇಷ್ಟ - ಅಕ್ಷಯ್‌ಕುಮಾರ್, ನಟ
ಮೋದಿ ಸಂದರ್ಶನದಲ್ಲಿ ಡ್ಯೂಪ್ ಬಳಸದೆ ನಟಿಸಿರುವುದು ಅದ್ಭುತವಾಗಿತ್ತು.

---------------------

ಯಡಿಯೂರಪ್ಪ ಕಾಂಗ್ರೆಸ್‌ಗೆ ಬಂದರೆ ಮುಖ್ಯಮಂತ್ರಿಯಾಗಲು ಸಹಾಯ ಮಾಡುತ್ತೇನೆ - ಎಂ.ಬಿ.ಪಾಟೀಲ್, ಸಚಿವ
ಈಗಾಗಲೇ ಇರುವ ಮುಖ್ಯಮಂತ್ರಿ ಅಭ್ಯರ್ಥಿಗಳೇ ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ.

---------------------

ನರೇಂದ್ರ ಮೋದಿ ಜೀವಂತ ಇರುವವರೆಗೆ ಪ್ರಧಾನಿಯಾಗಿರುತ್ತಾರೆ - ಕೆ.ಎಸ್.ಈಶ್ವರಪ್ಪ, ಶಾಸಕ
ಅಲ್ಲಿಯವರೆಗೆ ಬಿಜೆಪಿ ಜೀವಂತವಿರುವುದು ಮಾತ್ರ ಅನುಮಾನ.

---------------------

ಪರಿಸರ ಮಾಲಿನ್ಯಕ್ಕೆ ದುರಾಸೆ ಮತ್ತು ಸಂವೇದನಾರಹಿತ ಮನೋಭಾವವೇ ಮೂಲ ಕಾರಣ - ರವಿಶಂಕರ್ ಗುರೂಜಿ, ಆರ್ಟ್ಸ್ ಆಫ್ ಲಿವಿಂಗ್ ಸಂಸ್ಥಾಪಕ
ಯಮುನಾ ನದಿ ದಂಡೆಯಲ್ಲಿ ತಾವು ಮಾಡಿದ ಪರಿಸರ ಮಾಲಿನ್ಯಕ್ಕೆ ಪಶ್ಚಾತ್ತಾಪವೇ?

---------------------

ಮಹಾಘಟಬಂಧನ್ ಒಂದು ಪ್ರಯೋಗವಾಗಿತ್ತು - ಅಖಿಲೇಶ್‌ಯಾದವ್, ಎಸ್ಪಿ ನಾಯಕ
ಅಪರೇಷನ್ ಯಶಸ್ವಿಯಾಗಿದೆ. ರೋಗಿ ಸತ್ತಿದ್ದಾನೆ.

---------------------

ಕಾಂಗ್ರೆಸ್‌ಗೆ ತಾಕತ್ತಿದ್ದರೆ ದಲಿತರನ್ನು ಮುಖ್ಯಮಂತ್ರಿ ಮಾಡಿ - ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
ನೀವೇಕೆ ದಲಿತ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬಾರದು?

---------------------

ಮೈತ್ರಿ ಇರದಿದ್ದರೆ ಕಾಂಗ್ರೆಸ್ 10 ಸೀಟು ಗೆಲ್ಲುತ್ತಿತ್ತು - ಸುಮಲತಾ ಅಂಬರೀಷ್, ಸಂಸದೆ
ಆದರೆ ಇವಿಎಂ ಮೈತ್ರಿ ಅದಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂಬ ಆರೋಪಗಳಿವೆ.

---------------------

ಅಮೆರಿಕದಲ್ಲಿ ಶುದ್ಧ ನೀರು, ಗಾಳಿ ಸಿಗುತ್ತದೆ, ಭಾರತದಲ್ಲಿ ಸಿಗುವುದಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಹೌದು, ನಿಮ್ಮ ಹಿತಾಸಕ್ತಿಗಾಗಿ ಅವುಗಳೆಲ್ಲ ನಾಶವಾಗುತ್ತಿವೆ.

---------------------

ಬಡವರು, ದಲಿತರ ಪರ ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನೂ ಟಾರ್ಗೆಟ್ ಮಾಡಲಾಗುತ್ತಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಇತಿಹಾಸದುದ್ದಕ್ಕೂ ಹಲವು ನಾಯಕರು ಅದಕ್ಕಾಗಿ ಟಾರ್ಗೆಟ್ ಆಗಿದ್ದಾರೆ 

share
ಪಿ.ಎ.ರೈ
ಪಿ.ಎ.ರೈ
Next Story
X