Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯುಪಿಎ-ಎನ್‍ಡಿಎ ಆಡಳಿತದಲ್ಲಿ...

ಯುಪಿಎ-ಎನ್‍ಡಿಎ ಆಡಳಿತದಲ್ಲಿ ಜಿಡಿಪಿಯನ್ನು ಹೆಚ್ಚು ತೋರಿಸಲಾಗಿತ್ತು

ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್

ವಾರ್ತಾಭಾರತಿವಾರ್ತಾಭಾರತಿ11 Jun 2019 1:49 PM IST
share
ಯುಪಿಎ-ಎನ್‍ಡಿಎ ಆಡಳಿತದಲ್ಲಿ ಜಿಡಿಪಿಯನ್ನು ಹೆಚ್ಚು ತೋರಿಸಲಾಗಿತ್ತು

ಹೊಸದಿಲ್ಲಿ,ಜೂ.11: ಸರಕಾರದ ಅಂಕಿಅಂಶಗಳು ಭಾರತದ ಆರ್ಥಿಕ ಬೆಳವಣಿಗೆಯ ಕುರಿತು ಕಳೆದೊಂದು ದಶಕದಲ್ಲಿಯ ವಾಸ್ತವತೆಗಿಂತ ಭಿನ್ನವಾದ ಸುಂದರ ಚಿತ್ರಣವನ್ನು ಮುಂದಿರಿಸಿವೆ ಎಂಬ ಕಟುಸತ್ಯವನ್ನು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು ನಡೆಸಿರುವ ಅಧ್ಯಯನವು ಬೆಟ್ಟು ಮಾಡಿದೆ.

ತೀರ ಇತ್ತೀಚಿನವರೆಗೂ ಭಾರತವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಮುಕುಟವನ್ನು ಧರಿಸಿತ್ತು. ಆದರೆ ಸುಬ್ರಮಣಿಯನ್ ಅವರ ಅಧ್ಯಯನವು 2011 ಮತ್ತು 2017ರ ನಡುವಿನ ಅವಧಿಯಲ್ಲಿನ ಆರ್ಥಿಕ ಬೆಳವಣಿಗೆಯನ್ನು ಅತಿಯಾಗಿ ಅಂದಾಜಿಸಲಾಗಿತ್ತು ಮತ್ತು ಆ ಅವಧಿಯಲ್ಲಿ ಬೆಳವಣಿಗೆಯ ದರವು ವಾರ್ಷಿಕ ಸುಮಾರು ಶೇ.7ರ ಬದಲು ಸುಮಾರು ಶೇ.4.5ರಷ್ಟು ಮಾತ್ರವೇ ಇತ್ತು ಎನ್ನುವುದನ್ನು ಬಹಿರಂಗಗೊಳಿಸಿದೆ. ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಈ ವರದಿಯನ್ನು ಪ್ರಕಟಿಸಿದೆ.

 2012ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಒಟ್ಟು ದೇಶಿಯ ಉತ್ಪನ್ನ(ಜಿಡಿಪಿ)ವನ್ನು ಲೆಕ್ಕ ಹಾಕುವ ಪದ್ಧತಿಯನ್ನು ಬದಲಿಸಿದ ಬಳಿಕ ಈ ಅತಿಯಾದ ಅಂದಾಜನ್ನು ಮಾಡಲಾಗಿತ್ತು. ಮೊದಲಿನ ಪ್ರಮಾಣಾಧರಿತ ದತ್ತಾಂಶಗಳ ಬದಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಸಂಕಲಿಸಿದ್ದ ವಿತ್ತೀಯ ಲೆಕ್ಕಪತ್ರ ಆಧರಿತ ದತ್ತಾಂಶಗಳನ್ನು ನೆಚ್ಚಿಕೊಂಡಿದ್ದು, ಪ್ರಮುಖ ಹೊಂದಾಣಿಕೆಗಳಲ್ಲೊಂದಾಗಿತ್ತು. ಇದು ಜಿಡಿಪಿ ಅಂದಾಜುಗಳನ್ನು ಬೆಲೆ ಬದಲಾವಣೆಗಳಿಗೆ ಹೆಚ್ಚು ಸಂವೇದನಾಶೀಲವಾಗಿಸಿತ್ತು ಮತ್ತು ಇದು ತಯಾರಿಕೆ ಬೆಳವಣಿಗೆಯನ್ನು ಅತಿಯಾಗಿ ಅಂದಾಜಿಸಿರಬಹುದು ಎಂದು ವರದಿಯು ಹೇಳಿದೆ.

ಸುಬ್ರಮಣಿಯನ್ ಅವರ ಅಧ್ಯಯನವು ಭಾರತದ ಆರ್ಥಿಕ ಅಂಕಿಸಂಖ್ಯೆಗಳ ಬಗ್ಗೆ ಹೆಚ್ಚಿನ ಶಂಕೆಯನ್ನು ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರಕಾರದಡಿ ಭಾರತದ ಅತಿಯಾದ ಬೆಳವಣಿಗೆ ಅಂದಾಜುಗಳನ್ನು ಹೆಚ್ಚುತ್ತಿರುವ ಟೀಕಾಕಾರರು ಪ್ರಶ್ನಿಸಿದ್ದಾರೆ. ವಿಳಂಬಿತ ನಿರುದ್ಯೋಗ ವರದಿಯು ಈ ವರ್ಷದ ಆರಂಭದಲ್ಲಿ ವಿವಾದಕ್ಕೆ ಸಿಲುಕಿತ್ತು,ಇಬ್ಬರು ಅಂಕಿಅಂಶ ಅಧಿಕಾರಿಗಳು ದತ್ತಾಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಹುದ್ದೆಗಳನ್ನು ತೊರೆದಿದ್ದರು. ರಾಜಕಾರಣಿಗಳು ಅಂಕಿಸಂಖ್ಯೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ವಿಶ್ವಾದ್ಯಂತದ 108 ಆರ್ಥಿಕ ತಜ್ಞರ ಗುಂಪೊಂದು ಪ್ರಶ್ನಿಸಿತ್ತು.

ಜಿಡಿಪಿಯಿಂದ ಹಿಡಿದು ಉದ್ಯೋಗ ಮತ್ತು ಸರಕಾರಿ ಲೆಕ್ಕಗಳವರೆಗೆ ಅಂಕಿಅಂಶಗಳನ್ನು ಕಂಡುಕೊಳ್ಳುವ ಕಾರ್ಯಪ್ರಣಾಲಿಯ ವರ್ಚಸ್ಸಿಗೆ ಉಂಟಾಗಿರುವ ಹಾನಿಯನ್ನು ಭಾರತವು ನಿವಾರಿಸುವ ಅಗತ್ಯವಿದೆ. ಇದೇ ವೇಳೆ ಜಿಡಿಪಿ ಅಂದಾಜಿಗಾಗಿ ಇಡೀ ಕಾರ್ಯವಿಧಾನ ಮತ್ತು ಅನುಷ್ಠಾನವನ್ನು ಸ್ವತಂತ್ರ ಕಾರ್ಯಪಡೆಯೊಂದು ಪುನರ್‌ಪರಿಶೀಲಿಸಬೇಕಿದೆ ಎಂದು ಸುಬ್ರಮಣಿಯನ್ ಹೇಳಿದ್ದಾರೆ. ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಭಾರತದ ಬೆಳವಣಿಗೆಯು ಐದು ವರ್ಷಗಳ ಕನಿಷ್ಠ ಮಟ್ಟಕ್ಕೆ ನಿಧಾನಗೊಂಡಿದೆ ಎಂದು ತೀರ ಇತ್ತೀಚಿನ ದತ್ತಾಂಶಗಳು ತೋರಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X