ಭಾರೀ ಮಳೆಗೆ ಉಡುಪಿ ನಾಯಕ್ಕೆರೆ ಮಸೀದಿ ಜಲಾವೃತ
ಉಡುಪಿ, ಜೂ.12: ಉಡುಪಿ ನಗರದಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಯಿಂದ ಬ್ರಹ್ಮಗಿರಿಯ ನಾಯಕ್ಕೆರೆ ಮಸೀದಿಯ ಆವರಣದಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಠಿಯಾಯಿತು.
ಮಳೆಯ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಮಸೀದಿಯ ಆವರಣ ನೀರಿನಿಂದ ಆವೃತಗೊಂಡಿತು. ಇದರಿಂದ ಪ್ರಾರ್ಥನೆಗಾಗಿ ಮಸೀದಿಗೆ ಆಗಮಿಸುವವರು ತೊಂದರೆ ಅನುಭವಿಸುವಂತಾಯಿತು. ವಾಹನ ಸವಾರರು ಕೂಡ ಸಮಸ್ಯೆ ಎದುರಿಸುವಂತಾಯಿತು.
ಆದುದರಿಂದ ನಗರಸಭೆ ಕೂಡಲೇ ಈ ಬಗ್ಗೆ ಎಚ್ಚರ ವಹಿಸಿ ನಾಯಕ್ಕೆರೆ ಪರಿಸರದಲ್ಲಿ ಸರಿಯಾಗಿ ನೀರು ಹರಿದು ಹೋಗಲು ಸೂಕ್ತ ಕ್ರಮ ತೆಗೆದುಕೊಳ್ಳ ಬೇಕು ಎಂದು ಸಮಾಜ ಸೇವಕ ಇಕ್ಬಾಲ್ ಮನ್ನಾ ಒತ್ತಾಯಿಸಿದ್ದಾರೆ.