Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಚ್‍ಐವಿ ಪೀಡಿತ ಮಕ್ಕಳ ಪ್ರೀತಿಯ ಅಪ್ಪ...

ಎಚ್‍ಐವಿ ಪೀಡಿತ ಮಕ್ಕಳ ಪ್ರೀತಿಯ ಅಪ್ಪ ‘ಸೋಲೊಮನ್ ರಾಜಾ’

ಮನೆಯವರಿಂದ ತ್ಯಜಿಸಲ್ಪಟ್ಟ 47 ಪುಟಾಣಿಗಳನ್ನು ದತ್ತು ಪಡೆದರು...

ವಾರ್ತಾಭಾರತಿವಾರ್ತಾಭಾರತಿ13 Jun 2019 4:06 PM IST
share
ಎಚ್‍ಐವಿ ಪೀಡಿತ ಮಕ್ಕಳ ಪ್ರೀತಿಯ ಅಪ್ಪ ‘ಸೋಲೊಮನ್ ರಾಜಾ’

ಚೆನ್ನೈ, ಜೂ.13: ಚೆನ್ನೈ ನಿವಾಸಿ ಸೋಲೊಮನ್ ರಾಜಾ ಅವರನ್ನು 47 ಮಂದಿ ಎಚ್‍ಐವಿ ಪೀಡಿತ ಮಕ್ಕಳು ಪ್ರೀತಿಯಿಂದ ‘ಅಪ್ಪ’ ಎಂದೇ ಕರೆಯುತ್ತಾರೆ. ಈ ಎಲ್ಲಾ ಮಕ್ಕಳನ್ನು ಸೋಲೊಮನ್ ದತ್ತು ಪಡೆದುಕೊಂಡಿದ್ದಾರೆ.  

ಅವರ ಆರೈಕೆಯಲ್ಲಿರುವ ಮಕ್ಕಳು ಎಚ್‍ಐವಿ ಪೀಡಿತರೆಂಬ ಕಾರಣಕ್ಕೆ ತಮ್ಮ ಕುಟುಂಬದಿಂದ ತ್ಯಜಿಸಲ್ಪಟ್ಟವರಾಗಿದ್ದಾರೆ. ಸೋಲೊಮನ್ ತಮ್ಮ ಶೆಲ್ಟರ್ ಟ್ರಸ್ಟ್ ಮೂಲಕ ಈ ಮಕ್ಕಳನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಅವರ ಟ್ರಸ್ಟ್ ನಲ್ಲಿ 11 ಮಂದಿ ಸಿಬ್ಬಂದಿ ಅವರ ಈ ಉದಾತ್ತ ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸಿದ್ದಾರೆ.

ಮದುವೆಯಾಗಿ ಎಂಟು ವರ್ಷಗಳಾದ ನಂತರವೂ ತಮಗೆ ಮಕ್ಕಳಾಗದೇ ಇದ್ದಾಗ ಎಚ್‍ಐವಿ ಪೀಡಿತ ಮಗುವೊಂದನ್ನು ದತ್ತು ಪಡೆಯುವ ಬಗ್ಗೆ ಸೋಲೊಮನ್ ಯೋಚಿಸಿದ್ದರು. ಹೀಗೆ ಮಗುವನ್ನು ದತ್ತು ಪಡೆಯಲು ಸಿದ್ಧತೆ ನಡೆಸುತ್ತಿರುವಾಗಲೇ ಅವರ ಪತ್ನಿ ಗರ್ಭವತಿಯಾಗಿದ್ದರು. ಮುಂದೆ ತಮ್ಮದೇ ಮಗುವನ್ನು ಸೋಲೊಮನ್ ಪಡೆದರೂ ತಾವು ತಮ್ಮ ಈ ಹಿಂದಿನ ಯೋಚನೆಯಂತೆ ಎಚ್‍ಐವಿ ಪೀಡಿತ ಮಗುವನ್ನು ದತ್ತು ಪಡೆದಿಲ್ಲ ಎಂಬ ಕೊರಗು ಅವರ ಮನಸ್ಸಿನಲ್ಲಿತ್ತು. ಕೊನೆಗೆ 2005ರಲ್ಲಿ ಅವರು ಎಚ್‍ಐವಿ ಪೀಡಿತ ಏಳು ವರ್ಷದ ಬಾಲಕನನ್ನು ದತ್ತು ಪಡೆದುಕೊಂಡರು.

“ಆ ಬಾಲಕನ ತಂದೆ ತಾಯಿ ಹಾಗೂ ಸೋದರರು ಎಚ್‍ಐವಿಗೆ ಬಲಿಯಾಗಿದ್ದರು ಹಾಗೂ ಆತ ಕೂಡ ಕೆಲವೇ ದಿನಗಳ ಕಾಲ ಬದುಕುಳಿಯುವ ಸಾಧ್ಯತೆಯಿತ್ತು'' ಎಂದು ಸೋಲೊಮನ್ ನೆನಪಿಸುತ್ತಾರೆ. ಆದರೆ ಸೋಲೊಮನ್  ತಾವು ದತ್ತು ತೆಗೆದುಕೊಂಡ ಬಾಲಕನನ್ನು ಕಚೇರಿಗೆ ಕರೆದುಕೊಂಡು ಹೋದಾಗ ಅವರ ಜತೆ ಯಾವತ್ತೂ ಊಟ ಮಾಡುತ್ತಿದ್ದ ಸಹೋದ್ಯೋಗಿಗಳು ಅವರಿಂದ ದೂರ ಸರಿದು ನಿಂತರು. ಅವರ ಅಜ್ಞಾನವನ್ನು ಕಂಡು ಅವರಿಗೆ ನೋವುಂಟಾಗಿತ್ತು. ಎಚ್‍ಐವಿ ಪೀಡಿತ ಮಕ್ಕಳಿಂದ ನಮಗೇನೂ ತೊಂದರೆಯಾಗದು ಎಂದು ತೋರಿಸಿ ಕೊಡಲು ಅವರು ಮುಂದೆ ಅಂತಹ ಹಲವು ಮಕ್ಕಳನ್ನು ದತ್ತು ಪಡೆದರು.

ಆದರೆ ಈ ಮಕ್ಕಳ ಆಶ್ರಯ ತಾಣದಲ್ಲಿ ಕೆಲಸ ಮಾಡಿದರೆ ತಮಗೂ ಎಚ್‍ಐವಿ ತಗಲಬಹುದೆಂಬ ಭಯದಿಂದ ಯಾರೂ ಮುಂದೆ ಬಾರದೇ ಇದ್ದಾಗ ಅವರು ಎಚ್‍ಐವಿ ಪೀಡಿತ ವಿಧವೆಯರು ಹಾಗೂ ಲೈಂಗಿಕ  ಕಾರ್ಯಕರ್ತೆಯರನ್ನು ಈ ಮಕ್ಕಳ ಆರೈಕೆಗೆ ನೇಮಿಸಿದರು.

ತಾವು ದತ್ತು ಪಡೆದ ಎಲ್ಲಾ ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚಗಳನ್ನು ಭರಿಸುವ ಜವಾಬ್ದಾರಿ ಸೋಲೊಮನ್ ರಾಜ್ ಅವರ ಮೇಲಿದೆ. ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ಸೋಲೊಮನ್ ಮೂರು ಉದ್ಯೋಗಗಳನ್ನೂ ಮಾಡುತ್ತಾರೆ.

ಕೆಲವೊಮ್ಮೆ ಮಕ್ಕಳನ್ನು ಚಿಕಿತ್ಸೆಗೆ ದಾಖಲಿಸಲು ಆಸ್ಪತ್ರೆಗಳು ನಿರಾಕರಿಸಿದ್ದೂ ಉಂಟು, ಇನ್ನು ಕೆಲವೊಮ್ಮೆ ಚಿಕಿತ್ಸೆಗೆ ದುಬಾರಿ ಶುಲ್ಕ ವಿಧಿಸಿದ್ದೂ ಉಂಟು ಎಂದು ಅವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X