Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯಾವ ಅಧಿಕಾರಿಯೂ ನಮ್ಮನ್ನು ಭೇಟಿಯಾಗಿಲ್ಲ:...

ಯಾವ ಅಧಿಕಾರಿಯೂ ನಮ್ಮನ್ನು ಭೇಟಿಯಾಗಿಲ್ಲ: ಪತನಗೊಂಡ ವಾಯುಪಡೆ ವಿಮಾನದಲ್ಲಿದ್ದ ರಾಜೇಶ್ ರ ಕುಟುಂಬದ ಅಳಲು

ವಾರ್ತಾಭಾರತಿವಾರ್ತಾಭಾರತಿ14 Jun 2019 12:57 PM IST
share
ಯಾವ ಅಧಿಕಾರಿಯೂ ನಮ್ಮನ್ನು ಭೇಟಿಯಾಗಿಲ್ಲ: ಪತನಗೊಂಡ ವಾಯುಪಡೆ ವಿಮಾನದಲ್ಲಿದ್ದ ರಾಜೇಶ್ ರ ಕುಟುಂಬದ ಅಳಲು

ಹೊಸದಿಲ್ಲಿ, ಜೂ.14: ಜೂನ್ 3ರಂದು ನಾಪತ್ತೆಯಾಗಿದ್ದ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿ ಅದರಲ್ಲಿದ್ದ 13 ಮಂದಿಯಲ್ಲಿ ಯಾರೊಬ್ಬರೂ ಬದುಕುಳಿದಿಲ್ಲವೆಂಬುದು ದೃಢಪಟ್ಟ ನಂತರ ವಿಮಾನದಲ್ಲಿದ್ದವರಲ್ಲಿ ಒಬ್ಬರಾಗಿದ್ದ  ಹಾಗೂ ಐಎಎಫ್ ಅಡುಗೆಯಾಳಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಕುಟುಂಬವನ್ನು ಸೇನೆಯ ಯಾವೊಬ್ಬ ಅಧಿಕಾರಿಯೂ ಸಂಪರ್ಕಿಸಿಲ್ಲ. ವಾಸ್ತವವಾಗಿ ವಿಮಾನ ನಾಪತ್ತೆಯಾದಂದಿನಿಂದ ಯಾವುದೇ ವಾಯುಸೇನೆ ಅಧಿಕಾರಿ  ನಮ್ಮನ್ನು ಭೇಟಿಯಾಗಿಲ್ಲ ಎಂದು ಕುಟುಂಬ ಆರೋಪಿಸಿದೆ.

ಆದರೆ ವಿಮಾನದಲ್ಲಿದ್ದವರಲ್ಲಿ ಯಾರೂ ಬದುಕುಳಿದಿಲ್ಲ ಎಂದು ತಿಳಿದು ಬಂದ ನಂತರ ರಾಜೇಶ್ ಸೋದರ,  ದಿಲ್ಲಿಯಲ್ಲಿ ಟೀ ಸ್ಟಾಲ್ ನಡೆಸುವ ಸಂತೋಷ್ ಗೆ  ವಿಮಾನದ ಪೈಲಟ್ ನ ಮಾವ  ಕರೆ ಮಾಡಿ ಈ ಸುದ್ದಿ ತಿಳಿಸಿದ್ದರು.

“ನನ್ನ ಸೋದರ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 13 ಮಂದಿ ಮೃತಟ್ಟರೆಂದು ಅವರು ತಿಳಿಸಿದರು'' ಎಂದು ಸಂತೋಷ್ (37) ಹೇಳುತ್ತಾರೆ. ಕುಮಾರ್ (23) ಭಾರತೀಯ ವಾಯುಪಡೆಯನ್ನು ನಾಲ್ಕು ವರ್ಷಗಳ ಹಿಂದೆ ಸೇರಿದ್ದರು.

``ನಾನು ಹೊಟೇಲ್ ಅಶೋಕ್ ಸಮೀಪ ಟೀ ಸ್ಟಾಲ್ ನಡೆಸುತ್ತಿದ್ದೇನೆ.  ವಿಮಾನ ನಾಪತ್ತೆಯಾದ ಮರುದಿನ ಯಾರೋ ನನಗೆ  ಸೋಳಂಕಿ ಸಾಬ್ (ರಾಜ್ ಕುಮಾರ್ ಸೋಳಂಕಿ, ಪೈಲಟ್ ಮಾವ) ಅವರ ನಂಬರ್ ಕೊಟ್ಟರು. ಅವರು ಇಲ್ಲೇ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂದಿನಿಂದ ಅವರೇ ನಮಗೆ ಏನಾದರೂ ಮಾಹಿತಿ ನೀಡುತ್ತಲಿದ್ದಾರೆ'' ಎಂದು ಸಂತೋಷ್ ವಿವರಿಸುತ್ತಾನೆ.

ವಿಮಾನದಲ್ಲಿದ್ದ ಯಾರೂ ಉಳಿದಿಲ್ಲ ಎಂದು ವಾಯುಸೇನೆ ಘೋಷಿಸಿದ ಮೂರು ಗಂಟೆಗಳ ನಂತರವೂ ಸಂತೋಷ್ ಹೆತ್ತವರು, ಸೋದರರು ಹಾಗೂ ರೇಸ್ ಕೋರ್ಸ್ ಕ್ಲಬ್ ರಸ್ತೆಯಲ್ಲಿರುವ  ಕೊಳೆಗೇರಿ ನಿವಾಸಿಗಳಿಗೆ ಆತನ ಮೃತದೇಹ ಎಲ್ಲಿದೆಯೆಂಬ ಬಗ್ಗೆ ತಿಳಿದಿರಲಿಲ್ಲ.

``ನಮ್ಮ ಗೊಡವೆ ಯಾರಿಗೂ ಇಲ್ಲ. ನಮ್ಮ ಸುತ್ತ ವಾಯುಪಡೆಯ ಕಟ್ಟಡಗಳಿವೆ ಆದರೆ ಯಾರೂ ನಮ್ಮ ಬಳಿ ಬಂದಿಲ್ಲ. ನನ್ನ ತಂದೆ ಕೂಡ ವಾಯು ಸೇನೆಯಲ್ಲಿದ್ದರು'' ಎಂದು ಸಂತೋಷ್ ಹೇಳುತ್ತಾರೆ.

ತನ್ನ ತಂದೆಯ ಕೆಲಸದಿಂದ ಪ್ರೇರಿತನಾಗಿ ಕುಮಾರ್ ವಾಯುಸೇನೆ ಸೇರಿದ್ದ. ಕಳೆದ ನವೆಂಬರ್ ತಿಂಗಳಿನಲ್ಲಿ ವಿವಾಹವಾಗಿದ್ದ ಆತ ಅಸ್ಸಾಂನ ಜೋರ್ಹಟ್ ಎಂಬಲ್ಲಿ ಕರ್ತವ್ಯದಲ್ಲಿದ್ದ. ಜೂನ್ 3ರಂದು ಆ ವಿಮಾನವೇರುವ ಕೆಲವೇ ನಿಮಿಷಗಳ ಮೊದಲು ತಂದೆ ಜತೆ ಮಾತನಾಡಿದ್ದ. ವಿಮಾನದಿಂದಿಳಿದ ಬಳಿಕ ಮತ್ತೆ ಕರೆ ಮಾಡುವುದಾಗಿ ತಿಳಿಸಿದ್ದ'' ಎಂದು ಆತ ನೆನಪಿಸಿಕೊಳ್ಳುತ್ತಾರೆ.

“ಎರಡು ತಿಂಗಳ ಹಿಂದೆ ಆತ ಮನೆಗೆ ರಜೆ ಮೇಲೆ ಬಂದಿದ್ದ. ಆತನನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಹೋಗಿದ್ದೆ. ಅದೇ ಕೊನೆಯ ಭೇಟಿಯೆಂದು ಯಾರಿಗೆ ಗೊತ್ತಿತ್ತು?'' ಎಂದು ಅವರು ನೋವಿನಿಂದ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X