Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಎಚ್ಚರಿಕೆ, ಸಾಮಾಜಿಕ ಮಾಧ್ಯಮಗಳ ನಿರಂತರ...

ಎಚ್ಚರಿಕೆ, ಸಾಮಾಜಿಕ ಮಾಧ್ಯಮಗಳ ನಿರಂತರ ಬಳಕೆ ಈ ಸಮಸ್ಯಗಳಿಗೆ ಕಾರಣವಾಗಬಹುದು…

ವಾರ್ತಾಭಾರತಿವಾರ್ತಾಭಾರತಿ16 Jun 2019 7:22 PM IST
share
ಎಚ್ಚರಿಕೆ, ಸಾಮಾಜಿಕ ಮಾಧ್ಯಮಗಳ ನಿರಂತರ ಬಳಕೆ ಈ ಸಮಸ್ಯಗಳಿಗೆ ಕಾರಣವಾಗಬಹುದು…

ಯುವಜನರು ಗಂಟೆಗಟ್ಟಲೆ ತಮ್ಮ ಸ್ಮಾರ್ಟ್‌ ಫೋನ್‌ಗಳಿಗೆ ಅಂಟಿಕೊಂಡಿರುವುದು ಸಾಮಾಜಿಕ ಕಳವಳವನ್ನು ಹೆಚ್ಚಿಸುತ್ತಿದೆ. ಫೋನ್ ರಿಂಗ್ ಅಥವಾ ವೈಬ್ರೇಟ್ ಆದಾಗ,ನೋಟಿಫಿಕೇಷನ್ ಸಂಕೇತ ಕಾಣಿಸಿಕೊಂಡಾಗ ಇರುವ ಕೆಲಸವನ್ನೆಲ್ಲ ಬಿಟ್ಟು ಫೋನ್ ಕೈಗೆತ್ತಿಕೊಳ್ಳುತ್ತಾರೆ. ಕಾಯುವ ವ್ಯವಧಾನವೂ ಇರುವುದಿಲ್ಲ. ಇದು ಸಾಮಾಜಿಕ ಮಾಧ್ಯಮಗಳು ಮತ್ತು ಸ್ಮಾರ್ಟ್‌ಫೋನ್‌ಗಳು ನಮ್ಮ ಮೇಲೆ ಬೀರಿರುವ ಪ್ರಭಾವ. ಮಾನಸಿಕ ಸ್ಥಿತಿ ಮತ್ತು ಖಿನ್ನತೆ ಸಾಂಕ್ರಾಮಿಕವೆನ್ನಲಾಗಿದ್ದು,ಚಿತ್ರಗಳು ಅಥವಾ ಇತರರ ಸಂದೇಶಗಳನ್ನೂ ನೋಡಿದರೂ ವರ್ಗಾವಣೆಗೊಳ್ಳುತ್ತವೆ. ಸಾಮಾಜಿಕ ಮಾಧ್ಯಮಗಳು ಇಂತಹ ಮಾನಸಿಕ ಸ್ಥಿತಿಗಳನ್ನು ಹರಡುವುದರಲ್ಲಿ ಪ್ರಭಾವಿಯಾಗಿವೆ ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಸಿದೆ.

ಸಾಮಾಜಿಕ ಮಾಧ್ಯಮ ಮತ್ತು ಅದರ ಪರಿಣಾಮಗಳು

ನಿಮ್ಮ ಸಾಮಾಜಿಕ ಮಾಧ್ಯಮ ಪಟ್ಟಿಯಲ್ಲಿರುವ ಭಾವೋದ್ವೇಗದ ಅನುಭವಗಳು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಲ್ಲವು. ನಾವು ಕೆಲವೊಮ್ಮೆ ಸೆಲೆಬ್ರಿಟಿಗಳ ಪೋಟೊಗಳನ್ನು ನೋಡಿದರೂ ಪ್ರಭಾವಕ್ಕೊಳಗಾಗುತ್ತೇವೆ. ಈ ವಿಧದಲ್ಲಿ ಭಾವೋದ್ವೇಗಗಳು ಮತ್ತು ಚಿಂತನಾ ಪ್ರಕ್ರಿಯೆಗಳು ಸಾಮಾಜಿಕ ಮಾಧ್ಯಮಗಳ ವೇದಿಕೆಯ ಮೂಲಕ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ರವಾನಿಸಲ್ಪಡುತ್ತವೆ. ‘ಸ್ನೇಹಿತರ ಸ್ನೇಹಿತರನ್ನು’ ಹೊಂದುವ ಪರಿಕಲ್ಪನೆಯು ಹಲವಾರು ಮನಸ್ಸುಗಳಿಗೆ ಹಾನಿಯನ್ನುಂಟು ಮಾಡಬಲ್ಲದು. ನಿಮ್ಮ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಮಯವನ್ನು ಕಳೆಯುವುದು ನಿಮ್ಮನ್ನು ಪ್ರತ್ಯೇಕವಾಗಿಸುತ್ತವೆ ಮತ್ತು ಖಿನ್ನತೆಯನ್ನು ಹೆಚ್ಚಿಸುತ್ತವೆ.

ಮನಸ್ಥಿತಿಯಲ್ಲಿ ಬದಲಾವಣೆಗಳು ಮತ್ತು ಒಂಟಿಯಾಗಿರುವ ನಿರಂತರ ಅಗತ್ಯ,ಹೊಸ ಗೆಳೆಯರನ್ನು ಮಾಡಿಕೊಳ್ಳಲು ಅಸಾಮರ್ಥ್ಯ,ಇತರರೊಡನೆ ಸಂವಾದಿಸುವುದಲ್ಲಿ ಕಷ್ಟ,ಹೃದ್ರೋಗಗಳಿಗೆ ಕಾರಣವಾಗುವ ಒತ್ತಡ, ಹಾರ್ಮೋನ್‌ಗಳ ಮಟ್ಟದಲ್ಲಿ ಏರಿಕೆ, ಸಾರ್ವಜನಿಕ ಸಮಾವೇಶಗಳಲ್ಲಿ ಸಾಮಾಜಿಕ ಗಮನದಿಂದ ಅಹಿತಕರ ಭಾವನೆ ಇತ್ಯಾದಿಗಳು ವ್ಯಕ್ತಿಯ ಮೇಲೆ ಒಂಟಿತನ ಮತ್ತು ಖಿನ್ನತೆಗಳು ಬೀರುವ ಪರಿಣಾಮಗಳಾಗಿವೆ.

ತಂತ್ರಜ್ಞಾನಕ್ಕೆ ದಾಸರಾಗುವುದು ಒಂದು ಅಮಲು

ನಾವು ಮಹತ್ವದ ಸಭೆಗಳು ಅಥವಾ ಸಮಾವೇಶಗಳಲ್ಲಿ ಭಾಗವಹಿಸಿದ್ದಾಗ ನಮ್ಮ ಗಮನವನ್ನು ನಮ್ಮ ಫೋನ್‌ಗಳತ್ತ ಹರಿಸಲು ವೈಬ್ರೇಷನ್‌ಗಳು,ನೋಟಿಫಿಕೇಷನ್‌ಗಳು,ಇತರ ಅಲರ್ಟ್‌ಗಳು ಸಾಕು. ಫೋನ್‌ಗಳ ಸಮೀಪವೇ ಇರಬೇಕು ಎಂಬ ನಿರಂತರ ಅಗತ್ಯವು ಜನರಲ್ಲಿ ಖಿನ್ನತೆಗೆ ಕಾರಣವಾಗಬಲ್ಲದು. ನಮ್ಮ ಮೆದುಳು ಸದಾ ಕ್ರಿಯಾಶೀಲವಾಗಿರುತ್ತದೆ ಮತ್ತು ಒಂದು ಸಣ್ಣ ಸಂಚಲನೆಯೂ ಕೂಡಲೇ ಗಮನವನ್ನು ಪಡೆದುಕೊಳ್ಳುತ್ತದೆ. ಇದು ಸ್ಮಾರ್ಟ್‌ಫೋನ್‌ಗಳ ಮೇಲೆ ನಮ್ಮ ಅವಲಂಬನೆಗೆ ಒಂದು ಕಾರಣವಾಗಬಹುದು.

ನಾವು ಅಗತ್ಯ ಕರೆಗಳಿಗಾಗಿ ಕಾಯುತ್ತಿದ್ದಾಗ ರಿಂಗ್ ಆಗುವ ಬಗ್ಗೆ ಉದ್ವೇಗದಲ್ಲಿರುತ್ತೇವೆ. ನಿರೀಕ್ಷಿಸಿದ್ದ ಮುಖ್ಯವಾದ ಕರೆ ಬರದಿದ್ದಾಗ ಶರೀರವು ಹಲವಾರು ರೀತಿಗಳಲ್ಲಿ ಪ್ರತಿಕ್ರಿಯಿಸಲು ಆರಂಭಿಸುತ್ತದೆ. ಮನಸ್ಸು ಯೋಚನೆಯಲ್ಲಿ ತೊಡಗುತ್ತದೆ ಮತ್ತು ಅತಿಯಾದ ಯೋಚನೆಗೆ ಶಕ್ತಿಯು ವ್ಯಯವಾಗುತ್ತದೆ. ಇದು ನಮ್ಮ ಮನಸ್ಸು ಹಾಗೂ ಶರೀರದ ದಣಿವಿಗೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.

ಕುಟುಂಬಗಳಲ್ಲಿ ಸಂಘರ್ಷ

ಹೆತ್ತವರು ಮತ್ತು ಮಕ್ಕಳ ನಡುವಿನ ಸಂಘರ್ಷಗಳ ಪೈಕಿ ಸುಮಾರು ಶೇ.30ರಷ್ಟು ಸ್ಮಾರ್ಟ್‌ಫೋನ್‌ಗಳ ಕಾರಣದಿಂದ ಸಂಭವಿಸುತ್ತವೆ ಎಂದು ಇತ್ತೀಚಿನ ಅಧ್ಯಯನವೊಂದು ಬೆಟ್ಟು ಮಾಡಿದೆ. ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಅತಿಯಾಗಿ ತಲ್ಲೀನರಾಗಿದ್ದಾಗ ತಮ್ಮದೇ ಆದ ಕೆಲಸವನ್ನು ಮಾಡುತ್ತಿರುತ್ತಾರೆ. ಇದು ಅವರ ಎಲ್ಲ ಪ್ರಯತ್ನಗಳನ್ನು ಮತ್ತು ಬಿಡುವಿನ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ತಮ್ಮ ಕುಟುಂಬಗಳು ಹಾಗೂ ಹೆತ್ತವರೊಡನೆ ಬೆರೆಯಲು ಸಮಯಾವಕಾಶವನ್ನು ನೀಡುವುದಿಲ್ಲ. ಎಲ್ಲವನ್ನೂ ಗ್ಯಾಜೆಟ್‌ಗಳ ಮೂಲಕ ಮಾಡುವ ಈ ಕಾಲದಲ್ಲಿ ಇಂತಹ ಸಾಧನಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಒಂದು ಮಿತಿಗೊಳಪಡಿಸಿಕೊಂಡು ಬಾಹ್ಯ ಚಟುವಟಿಕೆಗಳಿಗಾಗಿ ಸಮಯವನ್ನು ಮೀಸಲಿಡುವುದು ಮುಖ್ಯವಾಗುತ್ತದೆ.

ಸಂಯಮ ಪ್ರಮುಖ ಪಾತ್ರ ವಹಿಸುತ್ತದೆ

ಸಾಮಾಜಿಕ ಮಾಧ್ಯಮಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ದಿನಗಳಲ್ಲಿ ಮುಂದಿನ ತಲೆಮಾರನ್ನು ಉದ್ವೇಗ ಮತ್ತು ಸಾಮಾಜಿಕ ಖಿನ್ನತೆಯಿಂದ ರಕ್ಷಿಸಲು ಸಂಯಮವು ಏಕೈಕ ಅಸ್ತ್ರವಾಗಿದೆ.

ಸಾಮಾಜಿಕ ಮಾಧ್ಯಮಗಳ ಗೊಂದಲಗಳಿಂದ ನಿಮ್ಮ ಮನಸ್ಸನ್ನು ಮುಕ್ತಗೊಳಿಸಲು ಇಲ್ಲಿವೆ ಕೆಲವು ಮಾರ್ಗಗಳು.

-ನಿಮ್ಮ ಸ್ನೇಹಿತರನ್ನು ಮುಖತಃ ಭೇಟಿಯಾಗಿ ಅವರೊಡನೆ ಸಮಯ ಕಳೆಯಿರಿ

-ಸಾಮಾಜಿಕ ಮಾಧ್ಯಮಗಳಲ್ಲಿಯ ವಿಷಯಗಳ ಅಂಧಾನುಕರಣೆ ಮತ್ತು ಅವುಗಳನ್ನು ಶೇರ್ ಮಾಡಿಕೊಳ್ಳುವುದರಿಂದ ದೂರವಿರಿ

-ನಿಮಗೆ ಯಾವುದು ಅತ್ಯುತ್ತಮ ಫಲ ನೀಡುತ್ತದೆಯೋ ಅದನ್ನೇ ಅನುಸರಿಸಿ

-ಇನ್ನೊಬ್ಬರ ಬದುಕುಗಳು,ಅವು ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ...ನಿಮ್ಮ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಿ

-ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿಧಾನವಾಗಿ ಸೀಮಿತಗೊಳಿಸಿ ಮತ್ತು ವಿಶ್ರಾಂತಿ ಹಾಗೂ ಸ್ವಯಂ ಮನರಂಜನೆಗಾಗಿ ಸಮಯವನ್ನು ತೆಗೆದುಕೊಳ್ಳಿ

-ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್‌ಗಳನ್ನು ಆಡುವ ಬದಲು ವಾಸ್ತವದಲ್ಲಿ ಕ್ರೀಡೆಗಳು,ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X