100ಕ್ಕೂ ಹೆಚ್ಚು ಮಕ್ಕಳ ಸಾವು: ಸುದ್ದಿಗೋಷ್ಠಿಯಲ್ಲಿ ನಿದ್ದೆ ಮಾಡಿದ ಕೇಂದ್ರದ ಆರೋಗ್ಯ ರಾಜ್ಯ ಸಚಿವ ಚೌಬೆ?

ಹೊಸದಿಲ್ಲಿ, ಜೂ.17: ಬಿಹಾರದಲ್ಲಿ ಮೆದುಳಿನ ಉರಿಯೂತದಿಂದ 100ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿ ನಡೆಸಲಾದ ಸುದ್ದಿಗೋಷ್ಟಿಯಲ್ಲಿ ಕೇಂದ್ರದ ಆರೋಗ್ಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ನಿದ್ದೆ ಮಾಡಿದ್ದರು ಎಂದು ಆರ್ ಜೆಡಿ ಆರೋಪಿಸಿದ್ದು, ಈ ಬಗ್ಗೆ ಫೋಟೊಗಳನ್ನು ಟ್ವೀಟ್ ಮಾಡಿದೆ.
ಮುಝಫ್ಫರ್ ಪುರದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕೇಂದ್ರ ಸಚಿವ ಚೌಬೆ ನಿದ್ದೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ಮತ್ತು ವಿಡಿಯೋಗಳು ವೈರಲ್ ಆಗಿದ್ದು, ಕೇಂದ್ರ ಸರಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನಿ ಕುಮಾರ್ ಚೌಬೆ, “ನಾನು ಸುದ್ದಿಗೋಷ್ಠಿಯಲ್ಲಿ ನಿದ್ದೆ ಮಾಡಿಲ್ಲ. ನಾನು ಚಿಂತನೆ ನಡೆಸುತ್ತಿದ್ದೆ ಮತ್ತು ಆಲೋಚನೆಯಲ್ಲಿ ಮಗ್ನನಾಗಿದ್ದೆ” ಎಂದು ಹೇಳಿದ್ದಾರೆ.
200 बच्चों की जान जाने के बाद केंद्रीय स्वास्थ्य मंत्री की प्रेस कॉन्फ्रेंस हो रही है।
— Rashtriya Janata Dal (@RJDforIndia) June 16, 2019
केंद्रीय स्वास्थ्य राज्य मंत्री अश्विनी चौबे उसी प्रेस कॉन्फ्रेंस में सो रहे हैं। बिहार सरकार के मंत्री भी जम्हाई ले रहे। जाने इनकी मानवीय संवेदना कहाँ मर गई? सीएम तो गहरी निद्रा में है ही? pic.twitter.com/KlAnED4VKo