ಚೂರಿಯಿಂದ ಇರಿದು ಚಾಲಕನ ಹತ್ಯೆ
ಬೆಂಗಳೂರು, ಜೂ.20: ಚಾಲಕನೋರ್ವನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಾಸಿಪಾಳ್ಯದ ಜೆ.ಸಿ.ರೋಡ್ ನಿವಾಸಿ ಆನಂದ್(32) ಕೊಲೆಯಾದ ಚಾಲಕ. ಈತ ರಾತ್ರಿ 10.15ರಲ್ಲಿ ಹೊಸ ಬಡಾವಣೆಯ 4ನೇ ಕ್ರಾಸ್ನಲ್ಲಿರುವ ಟೆಂಪೊ ನಿಲ್ದಾಣದ ಬಳಿ ಟೀ ಅಂಗಡಿಯಲ್ಲಿ ಸ್ನೇಹಿತರೊಂದಿಗೆ ಟೀ ಕುಡಿಯುತ್ತಿದ್ದಾಗ, ಅಲ್ಲಿಯೆ ಇದ್ದ ಕೆಲವರೊಂದಿಗೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ದುಷ್ಕರ್ಮಿಗಳ ಗುಂಪಿನಲ್ಲಿದ್ದ ಓರ್ವ ಚಾಕುವಿನಿಂದ ಚಾಲಕ ಆನಂದ್ ಎದೆಗೆ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕಲಾಸಿಪಾಳ್ಯ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.
Next Story