Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಜ್ಯದ ಮಹಾನಗರವೂ ಅಪಾಯದಲ್ಲಿ:...

ರಾಜ್ಯದ ಮಹಾನಗರವೂ ಅಪಾಯದಲ್ಲಿ: ಬತ್ತಿಹೋಗಲಿದೆ ಅಂತರ್ಜಲ

ನೀರು ಸಂರಕ್ಷಿಸದಿದ್ದರೆ…

ವಾರ್ತಾಭಾರತಿವಾರ್ತಾಭಾರತಿ20 Jun 2019 9:48 PM IST
share
ರಾಜ್ಯದ ಮಹಾನಗರವೂ ಅಪಾಯದಲ್ಲಿ: ಬತ್ತಿಹೋಗಲಿದೆ ಅಂತರ್ಜಲ

ಹೊಸದಿಲ್ಲಿ, ಜೂ.20: ಬೆಂಗಳೂರು ಸಹಿತ ಭಾರತದ 21 ನಗರಗಳಲ್ಲಿ 2020ರ ವೇಳೆಗೆ ಅಂತರ್ಜಲ ಮಟ್ಟ ಸಂಪೂರ್ಣ ಬರಿದಾಗಲಿದ್ದು, ಇದರಿಂದ ಸುಮಾರು 100 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ಅಂತರ್ಜಲ ಮಟ್ಟದ ಕುರಿತು ನೀತಿ ಆಯೋಗದ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರ ಸೇರಿದಂತೆ ದೇಶದ 21 ನಗರಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಈಗಲೇ ಮುನ್ನೆಚ್ಚರಿಕೆ ವಹಿಸಿ ನೀರನ್ನು ಸಂರಕ್ಷಿಸದಿದ್ದರೆ 2020ರಲ್ಲಿ ಸಂಪೂರ್ಣ ಬತ್ತಿಹೋಗಲಿದೆ. 2020ರ ಆಗಮನಕ್ಕೆ ಇನ್ನು ಹೆಚ್ಚಿನ ಸಮಯವಿಲ್ಲ ಎಂಬುದು ಇನ್ನಷ್ಟು ಆತಂಕಕಾರಿಯಾಗಿದೆ. 2030ರ ವೇಳೆಗೆ ದೇಶದ ಜನಸಂಖ್ಯೆಯ ಶೇ.40ರಷ್ಟು ಜನತೆಗೆ ಕುಡಿಯಲು ನೀರೇ ದೊರಕದ ಪರಿಸ್ಥಿತಿ ಬರಲಿದೆ. ಚೆನ್ನೈಯಲ್ಲಿ ಇತರ ಮೆಟ್ರೋ ನಗರಗಳಿಗಿಂತ ಹೆಚ್ಚಿನ ಮಳೆಯಾಗಿದ್ದರೂ ಮೂರು ನದಿಗಳು, ನಾಲ್ಕು ಜಲಸಂಪನ್ಮೂಲಗಳು, ಐದು ಜಲಮಯ ಪ್ರದೇಶಗಳು ಹಾಗೂ ಆರು ಅರಣ್ಯ್ರಪ್ರದೇಶಗಳು ಸಂಪೂರ್ಣ ಬತ್ತಿ ಹೋಗಿವೆ ಎಂದು ವರದಿ ತಿಳಿಸಿದೆ.

ಚೆನ್ನೈಯಲ್ಲಿ ಸರಕಾರ ಕುಡಿಯುವ ನೀರಿಗಾಗಿ ಸಮುದ್ರದ ನೀರಿನ ಉಪ್ಪು ಇಂಗಿಸುವಿಕೆಯನ್ನು ಅವಲಂಬಿಸಿದ್ದು ಇದು ಅತ್ಯಂತ ದುಬಾರಿಯಾಗಿದೆ. ಭೂಮಿ ಎಂಬ ಗ್ರಹಕ್ಕೂ ಮಿತಿಯಿದೆ ಮತ್ತು ಸಾಗರಗಳೂ ಬತ್ತಿ ಹೋಗುತ್ತವೆ ಎಂಬುದನ್ನು ಸರಕಾರ ಮರೆತಿರಬಹುದು. ಹೀಗಾದರೆ ನಾವು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಏನನ್ನು ಉಳಿಸಿದಂತಾಗುತ್ತದೆ. ನಮ್ಮಲ್ಲಿ ಬಹಳ ಹಣ ಇರಬಹುದು. ಆದರೆ ನೀರಿನ ಬದಲು ಹಣವನ್ನು ಕುಡಿಯುವಂತೆ ಮಕ್ಕಳಿಗೆ ಹೇಳಲಾದೀತೇ. ಸಮುದ್ರದ ನೀರಿನ ಉಪ್ಪನ್ನು ಇಂಗಿಸಿ ಬಳಸುವುದು ಸಮಸ್ಯೆಗೆ ಪರಿಹಾರವಲ್ಲ. ಜಲಕೊಯ್ಲು ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ರಾಷ್ಟ್ರೀಯ ಜಲ ಮಂಡಳಿಯ ಮಾಜಿ ನಿರ್ದೇಶಕ ಪ್ರೊ ಮನೋಹರ್ ಖುಶಾಲಿನಿ ಹೇಳಿದ್ದಾರೆ.

 ನೀರನ್ನು ಸಂರಕ್ಷಿಸುವುದು ಹಾಗೂ ಅಂತರ್ಜಲ ಮಟ್ಟ ವೃದ್ಧಿ ಕಾರ್ಯದಲ್ಲಿ ಕೈಜೋಡಿಸುವುದು ಸರಕಾರ ಹಾಗೂ ಜನತೆಯ ಸಾಮೂಹಿಕ ಜವಾಬ್ದಾರಿಯಾಗಿದೆ. ಮಳೆನೀರಿನ ಕೊಯ್ಲು ಪ್ರಕ್ರಿಯೆ ಅತ್ಯಂತ ಸುಲಭ, ಸರಳ ಹಾಗೂ ಕಡಿಮೆ ವೆಚ್ಚದ ಮಾರ್ಗವಾಗಿದೆ. ಮುಂದಿನ ಜನಾಂಗದ ಒಳಿತಿಗಾಗಿ ವೈಯಕ್ತಿಕವಾಗಿ ಅಥವಾ ವಸತಿ ಕಾಲೊನಿಗಳಲ್ಲಿ ಸಾಮೂಹಿಕವಾಗಿ ಮಳೆನೀರು ಕೊಯ್ಲು ನಡೆಸಬಹುದಾಗಿದೆ ಎಂದು ಮನೋಹರ್ ಹೇಳಿದ್ದಾರೆ.

ತಮ್ಮ ಮನೆಯೊಳಗೆ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸ್ಥಾಪಿಸಿರುವ ಮನೋಹರ್, 2003ರಿಂದ ಮಳೆನೀರಿನ ಕೊಯ್ಲು ನಡೆಸಿ ಈ ಪ್ರದೇಶದ ಅಂತರ್ಜಲ ವೃದ್ಧಿಗೆ ತಮ್ಮ ಕೊಡುಗೆ ನೀಡಿದ್ದಾರೆ.

 “ನಾನು ಕೊರೆಸಿದ್ದ 60 ಅಡಿ ಆಳದ ಬೋರ್‌ವೆಲ್ 2003ರಲ್ಲಿ ಬರಿದಾಯಿತು. ಆಗ ಮನೆಯ ಛಾವಣಿಗೆ ಜೋಡಿಸಿದ ಪೈಪ್‌ನಿಂದ ಮಳೆನೀರನ್ನು ಬೋರ್‌ವೆಲ್‌ನ ಒಳಗೆ ಹರಿಯಲು ವ್ಯವಸ್ಥೆ ಮಾಡಿದೆ. ನನ್ನ ಮನೆಯ ಛಾವಣಿಯಲ್ಲಿ ಸಂಗ್ರಹಿತವಾದ ಮಳೆ ನೀರು ಪೈಪ್‌ನ ಮೂಲಕ ಸಾಗಿ ಬೋರ್‌ವೆಲ್‌ಗೆ ಇಳಿಯುತ್ತದೆ. ಭೂಮಿಯೊಳಗೆ 60 ಅಡಿ ಆಳಕ್ಕೆ ನೀರು ಇಳಿದರೆ ಬಳಿಕ ನೆಲದಲ್ಲಿರುವ ಮರಳಿನ ಅಂಶ ನೀರನ್ನು ಸ್ವಯಂ ಶುದ್ಧೀಕರಿಸುತ್ತದೆ. ರಸ್ತೆ ಮೇಲೆ ಹರಿಯುವ ಮಳೆ ನೀರನ್ನು ನೇರವಾಗಿ ಭೂಮಿಯೊಳಗೆ ಇಂಗಿಸದೆ, ಶುದ್ಧೀಕರಿಸಿದ ನೀರು ಮಾತ್ರ ಭೂಮಿಗೆ ಸೇರುವಂತೆ ಮಾಡಬೇಕು. ಇಲ್ಲದಿದ್ದರೆ ನೀರು ಕಲುಶಿತವಾಗುತ್ತದೆ” ಎಂದವರು ಹೇಳುತ್ತಾರೆ.

ಬರದ ನಾಡಿನಲ್ಲಿ ಕಬ್ಬು ಬೇಡ

ಬರದ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಕಬ್ಬು ಬೆಳೆಯಬಾರದು ಎಂದು ಪ್ರೊಫೆಸರ್ ಮನೋಹರ್ ಖುಶಾಲಿನಿ ಸಲಹೆ ನೀಡುತ್ತಾರೆ. ಕಬ್ಬು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯಿಂದ ನೀರನ್ನು ಹೀರಿಕೊಳ್ಳುತ್ತದೆ. ಇಂದಿನ ಪರಿಸ್ಥಿತಿಯ ಬಗ್ಗೆ ನಮಗೆ ಅರಿವಿದ್ದರೆ ನಾಳೆ ಎದುರಾಗುವ ಅಪಾಯವನ್ನು ದೂರವಾಗಿಸಬಹುದು ಎಂದವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X