ಕೋಟೇಶ್ವರ: ಜೂ.25ರಂದು ಉದ್ಯೋಗ ಮೇಳ
ಉಡುಪಿ, ಜೂ.20: ಮಣಿಪಾಲದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯುವ ಉದ್ಯೋಗಾಕಾಂಕ್ಷಿಗಳ ಸೇವಾ ಕೇಂದ್ರ(ಯಸ್ ಕೇಂದ್ರ) ಹಾಗೂ ಕೋಟೇಶ್ವರದ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ವತಿಯಿಂದ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ.24ರಂದು ‘ಉದ್ಯಮಶೀಲತಾ ಕೌಶಲ್ಯ ತರಬೇತಿ ಮತ್ತು ಮಾರ್ಗದರ್ಶನ ’ಕಾರ್ಯಕ್ರಮದಲ್ಲಿ ಸಂದರ್ಶನ ಮತ್ತು ಸಂವಹನ ಕಲೆ ವ್ಯಕ್ತಿತ್ವ ಬೆಳವಣಿಗೆ ಬಗ್ಗೆ ಪೂರಕ ಮಾಹಿತಿ ಮಾರ್ಗದರ್ಶನ ಹಾಗೂ ಜೂ.25ರಂದು ‘ಉದ್ಯೋಗ ಮೇಳ’ವನ್ನು ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಮುತ್ತೂಟ್ ಗ್ರೂಪ್, ರೋಹಿಣಿ ಕನ್ಸಲ್ಟೆಂಟ್ ಬೆಂಗಳೂರು, ಐಡಿಬಿಐ ಇಂಡಸ್ಟ್ರೀಸ್, ವಿನ್ಮನ್ ಸಾಫ್ಟ್ವೇರ್, ಬ್ರೈಟ್ ಎಚ್ಆರ್ ಸೊಲ್ಯೂಶನ್ ಮುಂತಾದ ವಿವಿಧ ಖಾಸಗಿ ವಲಯದ ತಾಂತ್ರಿಕ ಮತ್ತು ತಾಂತ್ರಿಕೇತರ ಕಂಪೆನಿ/ಸಂಸ್ಥೆಗಳು ಭಾಗವಹಿಸಿ ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಜಿಲ್ಲೆಯ ಉದ್ಯೋಗಾಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳಲಿರುವುದರಿಂದ ಖಾಸಗಿ ವಲಯದಲ್ಲಿ ಉದ್ಯೋಗಕ್ಕೆ ಆಸಕ್ತಿ ಇರುವ ಎಸೆಸೆಲ್ಸಿ/ಪಿಯುಸಿ/ಯಾವುದೇ ಪದವಿ/ಡಿಪ್ಲೋಮ ಹಾಗೂ ಐಟಿಐ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ಅ್ಯರ್ಥಿಗಳು, ವಿದ್ಯಾರ್ಹತೆ ಅಂಕಪಟ್ಟಿ/ರೆಸ್ಯೂಮ್(ಬಯೊಡೇಟಾ) ಇತ್ಯಾದಿ ದಾಖಲೆಗಳೊಂದಿಗೆ ಜೂ.25ರಂದು ಬೆಳಗ್ಗೆ 9:30ಕ್ಕೆ ಕೋಟೇಶ್ವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಹಾಜರಾಗುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.