ಸಹಕಾರಿ ಕೃಷಿಗೆ ಕೇಂದ್ರ ಕಾನೂನು

ಹೊಸದಿಲ್ಲಿ,ಜೂ.21: ದೇಶದ ರೈತರು ಇದೀಗ ಗುಂಪುಗಳನ್ನು ರಚಿಸಿಕೊಂಡು ಸಹಕಾರಿ ಕೃಷಿ ಬೇಸಾಯವನ್ನು ಕೈಗೊಳ್ಳಬಹುದಾಗಿದೆ ಹಾಗೂ ಸಹಕಾರಿ ಕೃಷಿಯನ್ನು ಪ್ರೋತ್ಸಾಹಿಸಲು ಕೇಂದ್ರ ಸರಕಾರವು ಕಾನೂನೊಂದನ್ನು ರೂಪಿಸಿದೆಯೆಂದು ಕೇಂದ್ರ ಸರಕಾರವು ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಸಹಕಾರಿ ಕೃಷಿಯನ್ನು ಕೈಗೊಳ್ಳುವುದಕ್ಕಾಗಿ ಕೇಂದ್ರ ಸರಕಾರವು ಕಾನೂನನ್ನು ರೂಪಿಸಿದ್ದು, ಅದನ್ನು ರಾಜ್ಯಗಳಿಗೆ ಕಳುಹಿಸಿಕೊಟ್ಟಿದೆ ಹಾಗೂ ರೈತರು ಇನ್ನು ಮುಂದೆ ಸಹಕಾರಿ ಕೃಷಿಯನ್ನು ನಡೆಸಲು ಸಹಕಾರಿ ಸಂಘಗಳನ್ನು ಸ್ಥಾಪಿಸಬಹುದಾಗಿದೆ ಅಥವಾ ತಿಳುವಳಿಕಾ ಒಪ್ಪಂದಕ್ಕೆ ಸಹಿಹಾಕಬಹುದಾಗಿದೆಯೆಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಪುರುಷೋತ್ತಮ್ ರೂಪಾಲಾ ತಿಳಿಸಿದ್ದಾರೆ.
ನೂತನ ಕಾನೂನಿನ ಪ್ರಕಾರ ರೈತರು ಸಹಕಾರಿ ಕೃಷಿಗಾಗಿ ಅಧಿಕೃತವಾಗಿ ಒಟ್ಟುಗೂಡಬಹುದಾಗಿದೆ ಹಾಗೂ ತಿಳುವಳಿಕಾ ಒಪ್ಪಂದವನ್ನು ಏರ್ಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಪ್ರಶ್ನೋತ್ತರ ವೇಳೆಯಲ್ಲಿ ಸದನಕ್ಕೆ ತಿಳಿಸಿದರು.
ಸಹಕಾರಿ ಸಂಘಕ್ಕೆ ಉತ್ತೇಜನ ನೀಡಲು ಸರಕಾರವು ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆಯೆಂದು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ನೂತನ ಕಾನೂನಿನ ಪ್ರಕಾರ ಸಹಕಾರಿ ಕೃಷಿಯಲ್ಲಿ ತೊಡಗುವ ರೈತರಿ ಕೇಂದ್ರ ಹಾಗೂ ರಾಜ್ಯಗಳು ೆ ಎಲ್ಲಾ ವಿಧದ ನೆರವು ನೀಡಲಿವೆ ಎಂದು ರೂಪಾಲಾ ತಿಳಿಸಿದರು.