ಶ್ರೀನಿವಾಸ್ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ
ಮಂಗಳೂರು: ಶ್ರೀನಿವಾಸ್ ಯುನಿವರ್ಸಿಟಿಯ ಶ್ರೀನಿವಾಸ್ ಫಿಸಿಯೋಥೆರಪಿ ಕಾಲೇಜ್ ಆಶ್ರಯದಲ್ಲಿ ಪಾಂಡೇಶ್ವರದ ಶ್ರೀನಿವಾಸ್ ವಿ.ವಿ ಕ್ಯಾಂಪಸ್ ನಲ್ಲಿ ಅಂತಾರಾಪ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪ್ರಕೃತಿ ಯೋಗ ಕುಟೀರದ ಸ್ಥಾಪಕರಾದ ಯೋಗ ಶಿಕ್ಷಕ ಡಾ. ರಾಧಾಕೃಷ್ಣ ಶೆಟ್ಟಿ ಮತ್ತು ಅವರ ಪತ್ನಿ ಭಾಗವಹಿಸಿದ್ದರು.
ಅತಿಥಿಗಳಾಗಿ ಮುಸ್ತಫಾ ಎಸ್.ಎಮ್ ಹಾಗೂ ಐಶ್ವರ್ಯ ಶೆಟ್ಟಿ ಪಾಲ್ಗೊಂಡು ಯೋಗದ ಮಹತ್ವ, ಯೋಗದಿಂದಾಗುವ ಮಾನಸಿಕ ದೈಹಿಕ ಪರಿಣಾಮಗಳನ್ನ ವಿವರಿಸಿದ್ದಲ್ಲದೇ ನೆರೆದ ಪ್ರೇಕ್ಷಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಸುಲಭ ಯೋಗಾಸನಗಳನ್ನು ಕಲಿಸಿದರು. ಫಿಸಿಯೋಥೆರಪಿ ಕಾಲೇಜಿನ ಅಸೋಸಿಯೆಟ್ ಪ್ರೊ. ಡಾ. ಮಗೇಸ್ವರನ್ ಸ್ವಾಗತಿಸಿದರು.
ಫಿಸಿಯೋಥೆರಪಿ ಕಾಲೇಜಿನ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಉಪನ್ಯಾಸಕಿ ಡಾ. ಇಲೋನ ಡಿಸೋಜಾ ವಂದಿಸಿದರು.