Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಒಂದೇ ಭಾರತ ಸರಿ, ಒಂದೇ ಜಾತಿ ಏಕಿಲ್ಲ

ಒಂದೇ ಭಾರತ ಸರಿ, ಒಂದೇ ಜಾತಿ ಏಕಿಲ್ಲ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ24 Jun 2019 12:03 AM IST
share
ಒಂದೇ ಭಾರತ ಸರಿ, ಒಂದೇ ಜಾತಿ ಏಕಿಲ್ಲ

ಒಂದು ದೇಶಕ್ಕೆ ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃ ತಿ, ಒಬ್ಬನೇ ನಾಯಕ ಎಲ್ಲ ಸರಿ. ಆದರೆ, ಒಂದೇ ದೇಶ ಒಂದೇ ಜಾತಿ ಏಕೆ ಇಲ್ಲ. ಹಿಂದೂ ಒಂದು ಎನ್ನುವವರಲ್ಲಿ ಇಷ್ಟೊಂದು ಮೇಲು ಕೀಳುಗಳೇಕೆ? ಸ್ವಾಮಿ ವಿವೇಕಾನಂದರು ಹೇಳುವಂತೆ ಮುಟ್ಟಬೇಡ ಎಂಬುದೇ ಇಲ್ಲಿನ ಧರ್ಮವಾಗಿದೆ. ಒಂದೇ ದೇಶ ಒಂದೇ ಜಾತಿ ಎಂಬುದನ್ನು ಒಪ್ಪಿದರೆ ಒಂದೇ ಭಾರತ ಎಂಬುದನ್ನು ಒಪ್ಪಬಹುದು.


ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದೇ ಭಾಷೆ, ಒಂದೇ ಪಕ್ಷ, ಒಬ್ಬನೇ ನಾಯಕ ಎಂಬ ಘೋಷವಾಕ್ಯ ಈಗ ಎಲ್ಲೆಡೆ ಕೇಳುತ್ತಿದೆ. ಇದಕ್ಕೆ ಪೂರಕವಾಗಿ ‘ಒಂದು ದೇಶ ಒಂದೇ ಚುನಾವಣೆ’ ಎಂಬ ಪ್ರಸ್ತಾವನೆ ಈಗ ದೇಶದ ಮುಂದಿದೆ
ಲೋಕಸಭಾ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗ ಲೋಕಸಭೆ ಹಾಗೂ ರಾಜ್ಯಗಳ ವಿಧಾನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಹುಳ ತಲೆಯಲ್ಲಿ ಹೊಕ್ಕಿದೆ. ಇದಕ್ಕಾಗಿ ಸರ್ವಪಕ್ಷಗಳ ಸಭೆಯನ್ನೂ ಕರೆದರು. ಈ ಸಭೆಗೆ ಅನೇಕ ಪ್ರತಿಪಕ್ಷ ನಾಯಕರು ಬರಲಿಲ್ಲ. ಆದರೂ ಈ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ.
 ಒಂದು ದೇಶಕ್ಕೆ ಒಂದೇ ಚುನಾವಣೆ ನಡೆಸಬೇಕೆಂಬುದು ಬಿಜೆಪಿಯ ಬಹುದಿನದ ಬೇಡಿಕೆ. ದೇಶದ ಫೆಡರಲ್ (ಒಕ್ಕೂಟ) ವ್ಯವಸ್ಥೆಯನ್ನು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಬಿಜೆಪಿ ಕೆಲ ಐರೋಪ್ಯ ದೇಶಗಳಂತೆ ಅಂದರೆ ಹಿಟ್ಲರ್‌ನ ಜರ್ಮನಿಯಂತೆ ಭಾರತ ಒಕ್ಕೂಟವನ್ನು ಇಲ್ಲಿನ ಬಹುಮುಖಿ ಬದುಕನ್ನು ನಾಶ ಮಾಡಿ ಏಕಮುಖಿ, ಏಕ ಧರ್ಮದ, ಏಕಸಂಸ್ಕೃತಿಯ ದೇಶವನ್ನಾಗಿ ಬದಲಿಸಲು ಹೊರಟಿದೆ. ಅದರ ಭಾಗವಾಗಿ ಲೋಕಸಭೆ ಹಾಗೂ ರಾಜ್ಯಗಳ ವಿಧಾನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮಸಲತ್ತು ನಡೆದಿದೆ.
ಏಕಕಾಲದಲ್ಲಿ ಚುನಾವಣೆ ಸೇರಿದಂತೆ ಚುನಾವಣಾ ಪದ್ಧತಿಯಲ್ಲಿ ಮೂಲಭೂತ ಬದಲಾವಣೆ ತರಬೇಕೆಂದರೆ ಸರ್ವಪಕ್ಷಗಳ ಸಹಮತ ಬೇಕು. ಇಂಥ ಒಮ್ಮತ ಮೂಡಿದಾಗಲೇ ಬದಲಾವಣೆ ಸಾಧ್ಯ. ಅಂತಲೇ ಅದಕ್ಕಾಗಿ ಪ್ರಧಾನಿ ಸರ್ವಪಕ್ಷಗಳ ಸಭೆ ಕರೆದಿದ್ದರು. ರಾಷ್ಟ್ರಪತಿಗಳೂ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತಾಡುವಾಗ ಈ ವಿಷಯ ಪ್ರಸ್ತಾಪಿಸಿದರು.
ಭಾರತ ಎಂಬುದು ಒಂದು ದೇಶ ಎನ್ನುವುದಕಿಂತ ರಾಜ್ಯಗಳ ಒಕ್ಕೂಟ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಧಾನ ಮಂತ್ರಿ ಈಗ ಮಾಡಲು ಹೊರಟಿರುವ ಸುಧಾರಣೆ ನಮ್ಮ ಫೆಡರಲ್ ವ್ಯವಸ್ಥೆಗೆ ಅಂದರೆ ಒಕ್ಕೂಟ ವ್ಯವಸ್ಥೆಗೆ ವ್ಯತಿರಿಕ್ತವಾದದ್ದು. ಈಗಿರುವ ಸಂಸದೀಯ ಜನತಂತ್ರ ವ್ಯವಸ್ಥೆಯನ್ನು ನಿಧಾನವಾಗಿ ಅಧ್ಯಕ್ಷ ಮಾದರಿ ವ್ಯವಸ್ಥೆಯನ್ನಾಗಿ ಮಾರ್ಪಡಿಸುವ ಒಳ ಮಸಲತ್ತು ಈ ಪ್ರಸ್ತಾವನೆಯಲ್ಲಿದೆ.
ಬ್ರಿಟಿಷ್ ಆಡಳಿತದಿಂದ ಸ್ವತಂತ್ರವಾಗುವ ಮೊದಲು ಭಾರತವು ರಾಷ್ಟ್ರವಾಗಿರಲಿಲ್ಲ. ಇಲ್ಲಿ 550ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಪ್ರತಿ ಸಂಸ್ಥಾನಕ್ಕೆ ಒಬ್ಬ ರಾಜನಿದ್ದ. ಸ್ವಾತಂತ್ರಾನಂತರ ಅಂದಿನ ಗೃಹಮಂತ್ರಿ ವಲ್ಲಭಬಾಯ್ ಪಟೇಲ್ ಅವರು ಎಲ್ಲ ರಾಜ ಮಹಾರಾಜರ ಸಭೆ ಕರೆದು ಸ್ವತಂತ್ರ ಭಾರತದಲ್ಲಿ ತಮ್ಮ ಸಂಸ್ಥಾನಗಳನ್ನು ವಿಲೀನಗೊಳಿಸಲು ಮನವೊಲಿಸಿದರು. ಒಪ್ಪದವರ ಮೇಲೆ ಒತ್ತಡ ತಂದರು. ಹೀಗೆ ಮೊದಲು ವಿಲೀನೀಕರಣಕ್ಕೆ ಒಪ್ಪಿಸಹಿ ಹಾಕಿದವರು ನಮ್ಮ ರಾಜ್ಯದ ಜಮಖಂಡಿಯ ರಾಜ ಪಟವರ್ಧನ ಅವರು. ಹೀಗೆ ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂತು. ವಿಭಿನ್ನ ಧರ್ಮ, ಸಂಸ್ಕೃತಿ, ರಾಷ್ಟ್ರೀಯತೆ ಭಾಷೆಗಳ ಜನ ಈ ಒಕ್ಕೂಟದಲ್ಲಿ ಸಮಾನ ಸ್ಥಾನಮಾನ ಪಡೆದು ಸೇರಿಕೊಂಡರು. ಇದು ಯಾವುದೇ ಧರ್ಮಕ್ಕೆ ಸೇರಿದ ದೇಶವಲ್ಲ, ಇದು ಜಾತ್ಯತೀತ ಭಾರತ. ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಇಲ್ಲಿನ ಜನರಾಡುವ ಎಲ್ಲ 22 ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ. ಇದನ್ನು ಒಪ್ಪದಿದ್ದರೆ ಈ ದೇಶ ಒಂದಾಗಿ ಉಳಿಯುವುದಿಲ್ಲ.
ಇಂಥ ಭಾರತದಲ್ಲಿ ಲೋಕಸಭೆ ಹಾಗೂ ರಾಜ್ಯಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಮೋದಿಯವರ ಪ್ರಸ್ತಾವನೆ ದೇಶದ ಫೆಡರಲ್ ಸ್ವರೂಪಕ್ಕೆ ಧಕ್ಕೆ ತರುತ್ತದೆ ಎಂದು ಕಮ್ಯುನಿಸ್ಟ್ ಮತ್ತು ಇತರ ಸಮಾನ ಮನಸ್ಕ ಪಕ್ಷಗಳ ಅಭಿಪ್ರಾಯವಾಗಿದೆ.
 ಲೋಕಸಭೆ ಮತ್ತು ರಾಜ್ಯಗಳ ವಿಧಾನ ಸಭೆಗಳಿಗೆ ಪ್ರತ್ಯೇಕವಾಗಿ ಆಗಾಗ ನಡೆಯುವ ಚುನಾವಣೆಗಳಿಂದ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಆದ್ದರಿಂದ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಮೋದಿಯವರ ವಾದ ಮೇಲ್ನೋಟಕ್ಕೆ ಸರಿಯೆನಿಸಿದರೂ ಇದು ಕಾರ್ಯಸಾಧ್ಯವಲ್ಲ ಮತ್ತು ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಗೆ ವ್ಯತಿರಿಕ್ತ ಎಂಬುದು ಅನೇಕರ ಅಭಿಪ್ರಾಯವಾಗಿದೆ.
  ದೇಶದಲ್ಲಿ 1967 ಕ್ಕಿಂತ ಮುಂಚೆ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿತ್ತು. ಆಗ ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಏಕಸ್ವಾಮ್ಯವಿತ್ತು. ಹೀಗಾಗಿ ಐದು ವರ್ಷಗಳ ಕಾಲ ಸರಕಾರಗಳು ಸ್ಥಿರವಾಗಿ ಇರುತ್ತಿದ್ದವು. ಆದರೆ 1967ರ ನಂತರ ಮೊದಲ ಬಾರಿ ದೇಶದ ಕೆಲ ರಾಜ್ಯಗಳಲ್ಲಿ ಕಾಂಗ್ರೆಸೇತರ ಪಕ್ಷಗಳು ಅಧಿಕಾರಕ್ಕೆ ಬಂದವು. 1977ರ ನಂತರ ಕೇಂದ್ರದಲ್ಲೂ ಕಾಂಗ್ರೆಸೇತರ ಸರಕಾರ ಬಂತು. ಇದರ ಪರಿಣಾಮವಾಗಿ ರಾಜ್ಯಗಳಲ್ಲಿ ಪಕ್ಷಾಂತರದಂಥ ಪಿಡುಗು ಹಬ್ಬಿ ಚುನಾಯಿತ ಸರಕಾರಗಳು ಉರುಳಿ ವಿಧಾನ ಸಭೆಗಳಿಗೆ ಮಧ್ಯಂತರ ಚುನಾವಣೆ ನಡೆಸುವುದು ಅನಿವಾರ್ಯವಾಯಿತು. ಇದು ಜನತಂತ್ರದ ಸಹಜ ಪ್ರಕ್ರಿಯೆ.
   ಹೀಗೆ ಬೆಳೆದು ಬಂದ ಭಾರತೀಯ ಜನತಂತ್ರ ವ್ಯವಸ್ಥೆ ಈಗ ಪಕ್ವವಾಗಿದೆ. ಇಂಥ ಸನ್ನಿವೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಿದರೂ ರಾಜಕೀಯ ಅಸ್ಥಿರತೆ ಉಂಟಾದರೆ ಮಧ್ಯಂತರ ಚುನಾವಣೆ ಅನಿವಾರ್ಯವಾಗುತ್ತದೆ. ಖರ್ಚು ವೆಚ್ಚ ಹೆಚ್ಚಾಗುತ್ತದೆ ಎಂದು ವಿಧಾನ ಸಭೆಗಳನ್ನು ಇಲ್ಲವೇ ಲೋಕಸಭೆಯನ್ನು ಅವಧಿಪೂರ್ಣ ಅಮಾನತ್ತಿನಲ್ಲಿಡಲು ಆಗುವುದಿಲ್ಲ. ಯಾವುದೇ ಸದನ ವಿಸರ್ಜನೆಗೊಂಡರೆ ಸಂವಿಧಾನ ಪ್ರಕಾರ, ಆರು ತಿಂಗಳಲ್ಲಿ ಚುನಾವಣೆ ನಡೆಸಲೇಬೇಕು. ಆಗ ಏಕಕಾಲದಲ್ಲಿ ಚುನಾವಣೆ ಎಂಬುದು ಅಸಾಧ್ಯವಾಗುತ್ತದೆ.
ಮುಂಚೆ ಹೇಳಿದಂತೆ ಭಾರತ ಎಂಬುದು ಏಕಧರ್ಮದ ಏಕ ಸಂಸ್ಕೃತಿಯ, ಏಕ ಭಾಷೆ ರಾಷ್ಟ್ರವಲ್ಲ. ಇಲ್ಲಿ ಆರು ಪ್ರಮುಖ ಮತಗಳಿವೆ. 6,452 ಜಾತಿಗಳಿವೆ. 52 ಬುಡಕಟ್ಟುಗಳಿವೆ. 1,618 ಭಾಷೆಗಳಿವೆ. 5,68,000 ಹಳ್ಳಿಗಳಿವೆ ಮತ್ತು 600 ಜಿಲ್ಲೆಗಳಿವೆ. ಇಂಥ ಬೃಹತ್ ಒಕ್ಕೂಟದಲ್ಲಿ ಏಕಕಾಲದಲ್ಲಿ ಚುನಾವಣೆ ಎಂಬುದು ಕಾರ್ಯ ಸಾಧ್ಯವಲ್ಲ.
 ನಮ್ಮದು ಬಹುತ್ವದ ದೇಶ. ಅನೇಕತೆಯಲ್ಲಿ ಏಕತೆ ಈ ಒಕ್ಕೂಟ ವ್ಯವಸ್ಥೆಯ ಜೀವಾಳ. ಪ್ರಾದೇಶಿಕ ಅಸ್ಮಿತೆಗೆ ಬೆಲೆ ಕೊಡದಿದ್ದರೆ ಇದು ಒಂದಾಗಿ ಉಳಿಯುವುದಿಲ್ಲ ಈಗಲೂ ಜನರು ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡುವಾಗ ನೀಡುವ ಜನಾದೇಶವನ್ನು ವಿಧಾನಸಭೆ ಚುನಾವಣೆ ನಡೆಯುವಾಗ ನೀಡುವುದಿಲ್ಲ. ಎರಡೂ ವಿಭಿನ್ನ ವಾಗಿರುತ್ತವೆ.
ಪ್ರಭುತ್ವದ ಮೇಲೆ ಬಿಗಿ ಹಿಡಿತ ಸಾಧಿಸಲು ಆಳುವ ವರ್ಗಗಳು ಈಗ ಏಕಕಾಲದಲ್ಲಿ ಚುನಾವಣೆ ಎಂಬ ಹೊಸ ಮಸಲತ್ತು ನಡೆಸಿವೆ. ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಕೋಮುವಾದಿ ಶಕ್ತಿಗಳು ಉಳಿದೆಲ್ಲ ಧ್ವನಿಗಳನ್ನು ಹತ್ತಿಕ್ಕಿ ಏಕ ಪಕ್ಷದ, ಏಕ ವ್ಯಕ್ತಿಯ ನಾಯಕತ್ವವನ್ನು ದೇಶದ ಮೇಲೆ ಹೇರಲು ಹೊರಟಿವೆ.
ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿಯವರು ಕಾರ್ಪೊರೇಟ್ ಬಂಡವಾಳಶಾಹಿಯ ಹಿತರಕ್ಷಕ. ದೇಶದ ಸಂಪತ್ತನ್ನು ದೋಚಲು ಮೋದಿಯಂಥ ನಾಯಕರು ಕಾರ್ಪೊರೇಟ್ ಶಕ್ತಿಗಳಿಗೆ ಬೇಕು. ಈ ಬಾರಿ ಮೋದಿ ಅಧಿಕಾರಕ್ಕೆ ಬಂದ ನಂತರ ಛತ್ತೀಸ್‌ಗಡದಲ್ಲಿ 1.70 ಲಕ್ಷ ಎಕರೆ ಕಾಡನ್ನು ಅದಾನಿ ಕಂಪೆನಿಗೆ ಅಗ್ಗದ ಬೆಲೆಗೆ ನೀಡಿದರು. ಈಗ ರೈಲ್ವೆ ಖಾಸಗೀಕರಣದ ಪ್ರಸ್ತಾವನೆಯೂ ಇದೆ. ಇಂಥ ಸನ್ನಿವೇಶದಲ್ಲಿ ಈಗ ಅನಗತ್ಯವಾಗಿರುವ ಏಕಕಾಲದಲ್ಲಿ ಚುನಾವಣೆ ಎಂಬ ಗಾಳಿಪಟವನ್ನು ಆಕಾಶಕ್ಕೆ ಹಾರಿಸಿ ಜನರ ಗಮನ ಬೇರೆಡೆ ಸೆಳೆವ ಹುನ್ನಾರವೂ ಇದರಲ್ಲಿದೆ.
ದೇಶದ ಮೇಲೆ ಅಮೆರಿಕದ ಮಾದರಿಯ ಅಧ್ಯಕ್ಷೆಯ ಪದ್ಧತಿಯನ್ನು ಹೇರಿದರೆ ಕಾರ್ಪೊರೇಟ್ ಲೂಟಿಗೆ ಅನುಕೂಲವಾಗುತ್ತದೆ. ಆಗ ಸಂಸತ್ತು ಹೆಸರಿಗೆ ಮಾತ್ರವಿರುತ್ತದೆ. ಅಧ್ಯಕ್ಷನೇ ಸರ್ವಾಧಿಕಾರಿ. ಅಂಥ ವ್ಯವಸ್ಥೆ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಕೋಮುವಾದಿ ಶಕ್ತಿಗಳಿಗೆ ಬೇಕಾಗಿದೆ. ಅದಕ್ಕೆ ಅವಕಾಶ ನೀಡಬಾರದು.
ಒಂದೇ ದೇಶ ಒಂದೇ ಚುನಾವಣೆ ಎಂಬುದು ಅಂದುಕೊಂಡಷ್ಟು ಸುಲಭವಲ್ಲ. ಇದು ಅನೇಕ ಸಂವಿಧಾನಾತ್ಮಕ ಹಾಗೂ ವಾಸ್ತವಿಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಇದು ಸಂವಿಧಾನದ ಒಕ್ಕೂಟ ಸ್ವರೂಪಕ್ಕೆ ವಿರೋಧವಾಗಿದೆ. ಬಹುಮುಖಿ ಭಾರತದ ಅಂತಃಸತ್ವವನ್ನೇ ಇದು ಹೊಸಕಿ ಹಾಕುತ್ತದೆ.
 ಕೊನೆಯದಾಗಿ ಒಂದು ದೇಶಕ್ಕೆ ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಬ್ಬನೇ ನಾಯಕ ಎಲ್ಲ ಸರಿ. ಆದರೆ, ಒಂದೇ ದೇಶ ಒಂದೇ ಜಾತಿ ಏಕೆ ಇಲ್ಲ. ಹಿಂದೂ ಒಂದು ಎನ್ನುವವರಲ್ಲಿ ಇಷ್ಟೊಂದು ಮೇಲು ಕೀಳುಗಳೇಕೆ? ಸ್ವಾಮಿ ವಿವೇಕಾನಂದರು ಹೇಳುವಂತೆ ಮುಟ್ಟಬೇಡ ಎಂಬುದೇ ಇಲ್ಲಿನ ಧರ್ಮವಾಗಿದೆ. ಒಂದೇ ದೇಶ ಒಂದೇ ಜಾತಿ ಎಂಬುದನ್ನು ಒಪ್ಪಿದರೆ ಒಂದೇ ಭಾರತ ಎಂಬುದನ್ನು ಒಪ್ಪಬಹುದು.
ಇಲ್ಲಿ ಒಂದೇ ಭಾರತವಿಲ್ಲ. ಅಂಬಾನಿಯ ಭಾರತ, ಅಸ್ಪಶ್ಯರ ಭಾರತ, ಅತ್ಯಾಚಾರ ಮಾಡುವವರ, ಮಾಡಿಸಿಕೊಳ್ಳುವವರ ಭಾರತ. ಹೀಗೆ ಹಲವಾರು ಭಾರತಗಳು ಇಲ್ಲಿವೆ. ಇದು ವಾಸ್ತವ ಭಾರತ.

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X