Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇದು ಪ್ರಕೃತಿಯ ಮೇಲೆ ನಡೆಸುವ ಹಲ್ಲೆ

ಇದು ಪ್ರಕೃತಿಯ ಮೇಲೆ ನಡೆಸುವ ಹಲ್ಲೆ

-ತಾರಾನಾಥ್ ಮೇಸ್ತ, ಶಿರೂರು-ತಾರಾನಾಥ್ ಮೇಸ್ತ, ಶಿರೂರು26 Jun 2019 11:40 PM IST
share

ಮಾನ್ಯರೇ,

ಕುಡಿಯುವ ನೀರಿನ ಸಮಸ್ಯೆಗಳಿಗೆ ಸಮಂಜಸವಾದ ಉತ್ತರ ಹುಡುಕುವಲ್ಲಿ ಸರಕಾರವು ವಿಫಲವಾಗಿದೆ. ಕರಾವಳಿಯ ನೇತ್ರಾವತಿ, ಮಲೆನಾಡಿನ ಶರಾವತಿ ಜೀವನದಿಗಳನ್ನು ಬೆಂಗಳೂರು-ಚಿಕ್ಕಬಳ್ಳಾಪುರ ಮೊದಲಾದ ಪ್ರದೇಶಗಳಿಗೆ ತಿರುಗಿಸುವ ಪ್ರಯತ್ನಗಳನ್ನು ಸರಕಾರ ಮಾಡುತ್ತಿದೆ. ಈಗಾಗಲೇ ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಭರದಿಂದ ನಡೆಯುತ್ತಿದೆ. ಅದಕ್ಕಾಗಿಯೇ ಎಣಿಕೆಗೆ ಸಿಗದಷ್ಟು ಮರಮಟ್ಟುಗಳನ್ನು ಉರುಳಿಸಲಾಗಿದೆ. ಪ್ರಕೃತಿ ಮೇಲಿನ ಹಸಿರು ನಾಶವಾದ ಕಾರಣದಿಂದ ಮಳೆ ಬೀಳುವ ಪ್ರಮಾಣ ಕಡಿಮೆ ಆಗಿದೆ. ಅದಕ್ಕೆ ಉತ್ತರವಾಗಿ ಭೂ ಮಡಿಲು ಹಸಿರಾಗಿಸುವ ಪ್ರಯತ್ನ ಮಾಡುವ ಬದಲು ಸರಕಾರ ಅವೈಜ್ಞಾನಿಕವಾಗಿ, ಪ್ರಕೃತಿ ಧರ್ಮಕ್ಕೆ ವಿರುದ್ಧವಾಗಿ ನದಿಗಳನ್ನು ತಿರುಗಿಸುವ ಯೋಜನೆಗಳನ್ನು ರೂಪಿಸುತ್ತಿದೆ. ಲಕ್ಷಾಂತರ ಮರಗಳನ್ನು ನಾಶಗೊಳಿಸುತ್ತಿದೆ. ಜನರ ಕೋಟ್ಯಂತರ ಹಣವನ್ನು ವ್ಯಯಮಾಡುತ್ತಿದೆ. ನದಿಗಳ ದಿಕ್ಕು ಬದಲಿಸುವ ಯೋಜನೆಗೆ ಕೃಷಿ ಭೂಮಿ, ಅರಣ್ಯ ಭೂಮಿ, ಜನ ವಸತಿ ಪ್ರದೇಶಗಳ ಕಬಳಿಸಲು ಮುಂದಾಗಿದೆ. ಅದಕ್ಕೆ ಬದಲಾಗಿ ಮಳೆ ನೀರು ಕೊಯ್ಲು, ಇಂಗು ಗುಂಡಿ ಮೊದಲಾದ ಭೂಗರ್ಭದೊಳಗೆ ಅಂತರ್ಜಲ ಹೆಚ್ಚಿಸುವ ವಿಧಾನಗಳ ಪ್ರಚಾರ ಪಡಿಸುವ ಮತ್ತು ಕಾರ್ಯಗತಗೊಳಿಸುವ ಪ್ರಯತ್ನಗಳನ್ನು ಮಾಡಬಹುದಿತ್ತು. ಈ ಮೂಲಕ ಜಲಕ್ಷಾಮವನ್ನು ಹತ್ತಿರ ಸುಳಿಯದಂತೆ ಮಾಡಬಹುದಿತ್ತು.

ಪಾಶ್ಚಿಮಾತ್ಯ-ತೈಲ ರಾಷ್ಟ್ರಗಳಲ್ಲಿ ಅಲ್ಲಿಯ ಆಡಳಿತ ವ್ಯವಸ್ಥೆಗಳು ಸಮುದ್ರದ ಉಪ್ಪುನೀರನ್ನು ಸಿಹಿಯಾಗಿ ಪರಿವರ್ತಿಸುತ್ತಿದ್ದಾರೆ. ಆ ನೀರಿನಿಂದಲೇ ಅಲ್ಲಿಯ ನಾಗರಿಕ ಸಮಾಜದ ಬದುಕು ಸಾಗುತ್ತಿದೆ. ನಮ್ಮ ದೇಶದ ಮೂಡಣ, ಪಡುವಣ, ತೆಂಕಣ ತ್ರಿದಿಕ್ಕುಗಳಲ್ಲಿ ಸುಮುದ್ರಗಳಿದ್ದು ಇಲ್ಲಿಯ ಉಪ್ಪು ನೀರನ್ನು ವಿದೇಶದ ತಂತ್ರಜ್ಞಾನದಂತೆ ಸಿಹಿಗೊಳಿಸಬಹುದಲ್ಲವೇ..! ಈ ಬಗ್ಗೆ ಕಡಲ ತಡಿ ಹೊಂದಿರುವ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಅಗತ್ಯವಾಗಿ ಚಿಂತಿಸಬೇಕಾಗಿದೆ. ನದಿ ತಿರುವು ಯೋಜನೆಗಳು ಹೀಗೆ ಮುಂದುವರಿಯುತ್ತ ಹೋದರೆ, ಸರಕಾರವು ಮುಂದಿನ ದಿನಗಳಲ್ಲಿ ಹಳ್ಳ ಕೊಳ್ಳಗಳ ತಿರುವು ಯೋಜನೆಗಳನ್ನು ರೂಪಿಸಲೂಬಹುದು. ನೀರಿನ ಸಮಸ್ಯೆಗೆ ಪ್ರಕೃತಿ ಧರ್ಮವನ್ನು ಬದಲಿಸುವುದು ಉತ್ತರವಲ್ಲ. ಭೂ ಮಡಿಲು ಹಸಿರಾಗಿಸುವ ಪ್ರಯತ್ನವೇ ಜಲಕ್ಷಾಮ ನಿವಾರಣೆಗೆ ಪರಿಹಾರ ಎಂದು ಸರಕಾರ ಸ್ವೀಕರಿಸಬೇಕು. ನದಿ ತಿರುಗಿಸುವ ಯೋಜನೆಗಳು ಪ್ರಕೃತಿಯ ಮೇಲೆ ನಡೆಸುವ ಹಲ್ಲೆ. ಸರಕಾರ ನಿರ್ಧರಿಸಿದ ನದಿ ತಿರುವು ಯೋಜನೆ ಖಂಡನೀಯವಾಗಿದೆ.

share
-ತಾರಾನಾಥ್ ಮೇಸ್ತ, ಶಿರೂರು
-ತಾರಾನಾಥ್ ಮೇಸ್ತ, ಶಿರೂರು
Next Story
X