ನಿಬ್ರಸತ್ತುಲಬಾ ಸಾಹಿತ್ಯ ಸಮಾಜದ ಅಧ್ಯಕ್ಷರಾಗಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಆಯ್ಕೆ
ಬಂಟ್ವಾಳ, ಜೂ. 29: ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದಿನ್ ಜುಮಾ ಮಸೀದಿ ಅಧೀನದಲ್ಲಿರುವ ನೂರಾನಿಯಾ ಅರಬಿಕ್ ದರ್ಸ್ ವಿದ್ಯಾರ್ಥಿಗಳ ಸಂಘಟನೆಯಾದ ನಿಬ್ರಸತ್ತುಲಬಾ ಸಾಹಿತ್ಯ ಸಮಾಜದ ನೂತನ ಅಧ್ಯಕ್ಷರಾಗಿ ದರ್ಸ್ ಮುದರ್ರಿಸ್ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅನ್ಸೀಫ್ ನಂದಾವರ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ದರ್ಸ್ ಸಭಾಂಗಣದಲ್ಲಿ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಫಾಮಿದ್ ನಂದಾವರ ಹಾಗೂ ಮುಸ್ತಫಾ ಮೋಂತಿಮಾರು, ಕೋಶಾಧಿಕಾರಿಯಾಗಿ ಕೆ.ಎಚ್. ಹಸೈನಾರ್ ಕಳಂಜಿಬೈಲು, ಜೊತೆ ಕಾರ್ಯದರ್ಶಿಗಳಾಗಿ ಹಸೈನಾರ್ ನಂದಾವರ ಹಾಗೂ ಶರ್ವಾನ್ ನಂದಾವರ ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರಿಫ್ ಇರಾ, ಅರ್ಫಾಝ್ ಆಲಡ್ಕ, ಜುನೈದ್ ಬೋಗೋಡಿ, ಇರ್ಶಾದ್ ಎಡಪದವು, ತ್ವಯ್ಯಿಬ್ ಇರಾ, ನೌಫಲ್ ಬೋಳಂತೂರು, ಉವೈಸ್ ಸರಳಿಕಟ್ಟೆ, ಶಿಹಾಬ್ ಇರಾ, ನಿಝಾಮ್ ಅಮ್ಮೆಂಬಳ, ಝುಬೈರ್ ಪುತ್ತೂರು, ಸಿದ್ದೀಕ್ ಪುಚ್ಚಮೊಗರು, ಅನೀಸ್ ಬಜ್ಪೆ, ಅನೀಸ್ ಪಿ.ಜೆ. ಅಕ್ಕರಂಗಡಿ, ತಾಝಿಂ ಬೋಳಂತೂರು, ಸ್ವಲಾಹುದ್ದೀನ್ ಆಲಡ್ಕ, ಶಫೀಕ್ ಅಮ್ಮೆಂಬಳ ಅವರನ್ನು ನೇಮಿಸಲಾಯಿತು ನೂರಾನಿಯಾ ಎಂದು ದರ್ಸ್ ಪ್ರಕಟನೆ ತಿಳಿಸಿದೆ.