Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. 30 ಸಾವಿರ ಮತಗಳಿಂದ 6.9 ಲಕ್ಷ...

30 ಸಾವಿರ ಮತಗಳಿಂದ 6.9 ಲಕ್ಷ ಮತಗಳವರೆಗೆ: ಲೆಕ್ಕಾಚಾರಗಳನ್ನೇ ಮಣಿಸಿದ ಜ್ಯೋತಿಮಣಿ

‘ಯುವ ಇಂಡಿಯಾ’ದ ಸಂಸದರು

ವಾರ್ತಾಭಾರತಿವಾರ್ತಾಭಾರತಿ30 Jun 2019 3:15 PM IST
share
30 ಸಾವಿರ ಮತಗಳಿಂದ 6.9 ಲಕ್ಷ ಮತಗಳವರೆಗೆ: ಲೆಕ್ಕಾಚಾರಗಳನ್ನೇ ಮಣಿಸಿದ ಜ್ಯೋತಿಮಣಿ

2014ರ ಚುನಾವಣೆಯಲ್ಲಿ ಇವರು ಗಳಿಸಿದ್ದು ಕೇವಲ 30 ಸಾವಿರ ಮತಗಳನ್ನು. 2019ರ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಹಣಬಲದ ಸವಾಲು ಮಾತ್ರವಲ್ಲ, ಪಕ್ಷದೊಳಗಿನ ಒಡಕು ಕೂಡ ಸವಾಲಾಯಿತು. ಎಐಎಡಿಎಂಕೆಯ ಪ್ರಭಾವಿ ನಾಯಕ , 4 ಬಾರಿಯ ಸಂಸದ ಎಂ. ತಂಬಿದುರೈಯವರನ್ನು ಮಣಿಸುವುದು ಕೇವಲ 30 ಸಾವಿರ ಮತಗಳನ್ನು ಗಳಿಸಿದ್ದ ಅಭ್ಯರ್ಥಿಗೆ ಕಷ್ಟಸಾಧ್ಯ ಎಂದೇ ರಾಜ್ಯ ರಾಜಕೀಯದಲ್ಲಿ ಪೂರ್ವನಿರ್ಧರಿತವಾಗಿತ್ತು. ಆದರೆ 4 ಲಕ್ಷ ಮತಗಳ ಅಂತರದಲ್ಲಿ ತಂಬಿದುರೈಯನ್ನು ಮಣಿಸಿ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದರು ಜ್ಯೋತಿಮಣಿ ಎಸ್.

ಕರೂರ್ ಲೋಕಸಭಾ ಕ್ಷೇತ್ರದ ಮೊದಲ ಮಹಿಳಾ ಸಂಸದೆಯಾಗಿರುವ ಜ್ಯೋತಿಮಣಿ ಕಾಂಗ್ರೆಸ್ ನಿಂದ ಕಣಕ್ಕಿಳಿದವರು. ಇಲ್ಲಿ ಎಐಎಡಿಎಂಕೆಯ ಪ್ರಭಾವಿ ಅಭ್ಯರ್ಥಿಯನ್ನು ಮಣಿಸುವಲ್ಲಿ ಡಿಎಂಕೆ ಕೂಡ ಕಾಂಗ್ರೆಸ್ ಗೆ ನೆರವಾಗಿತ್ತು. ರಾಹುಲ್ ಗಾಂಧಿಯವರೇ ಸ್ವತಃ ಆಯ್ಕೆ ಮಾಡಿದ ಅಭ್ಯರ್ಥಿಯಾಗಿದ್ದರು ಜ್ಯೋತಿಮಣಿ.

ಅಭ್ಯರ್ಥಿಯಾಗಿ ಘೋಷಣೆಯಾದ ಮಾತ್ರಕ್ಕೆ ಜ್ಯೋತಿಮಣಿಯವರ ಸ್ಪರ್ಧೆಯೇನೂ ಸುಲಭವಾಗಿರಲಿಲ್ಲ. ಪಕ್ಷದೊಳಗೇ ಜ್ಯೋತಿಮಣಿ ಅಭ್ಯರ್ಥಿತನದ ಬಗ್ಗೆ ಅಸಮಾಧಾನ ಮೂಡಿತ್ತು. ಪಕ್ಷದ ಹಲವು ನಾಯಕರು ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡಿದರು. ಈ ಸಂದರ್ಭ ಆಕೆಯ ಚುನಾವಣಾ ಪ್ರಚಾರದ ಕಳೆ ಹೆಚ್ಚಿಸಿದ್ದು ಡಿಎಂಕೆ. ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರೇ ಸ್ವತಃ ಜ್ಯೋತಿಮಣಿ ಪರ ಕರೂರಿನಲ್ಲಿ ಪ್ರಚಾರ ನಡೆಸಿದರು.

“ಈ ಬಾರಿಯ ಚುನಾವಣೆಯಲ್ಲಿ ಹಲವು ಅಂಶಗಳು ಕೆಲಸ ಮಾಡಿವೆ. ಈ ಬಾರಿ ಡಿಎಂಕೆ ನೇತೃತ್ವದ ಮೈತ್ರಿ ಬಗ್ಗೆ ಒಲವಿತ್ತು ಮತ್ತು ಮೋದಿ ವಿರೋಧಿ ಅಲೆಯಿತ್ತು. ರಾಜಕಾರಣಿಗಳು ಶ್ರೀಮಂತರಾಗಿದ್ದು, ಬಡವರ ಜೊತೆ ಬೆರೆಯುತ್ತಿಲ್ಲ ಎನ್ನುವುದನ್ನು ಜನರು ಮನಗಂಡಿದ್ದರು. ಸಾಧಾರಣ ಹಿನ್ನೆಲೆಯ ವ್ಯಕ್ತಿಯೊಬ್ಬರು ಅವರಿಗೆ ಬೇಕಾಗಿದ್ದರು. ನನ್ನ ಬಳಿ ಹಣವಿರಲಿಲ್ಲ, ಆದ್ದರಿಂದ ನನಗೆ ಟಿಕೆಟ್ ನೀಡಿ ಸೀಟು ವ್ಯರ್ಥ ಮಾಡುತ್ತಿರುವುದೇಕೆ ಎನ್ನುವ ಪ್ರಶ್ನೆ ಪಕ್ಷದ ಒಳಗೂ, ಹೊರಗೂ ಕೇಳಿಬಂದಿತ್ತು. ಇದೇ ಪ್ರಶ್ನೆ ಮತದಾರರಿಗೆ ನಾಟಿತು ಎಂದು ನಾನು ಭಾವಿಸುತ್ತೇನೆ” ಎಂದವರು ತನ್ನ ಗೆಲುವಿನ ಬಗ್ಗೆ ವಿವರಿಸುತ್ತಾರೆ.

ಜ್ಯೋತಿಮಣಿಯವರನ್ನು ಕ್ಷೇತ್ರದ ಜನರು ತಮ್ಮ ಮನೆ ಮಗಳಂತೆಯೇ ಸ್ವೀಕರಿಸಿದರು. ತಮಿಳುನಾಡಿನಲ್ಲಿ ರಾಜಕೀಯ ಕ್ಷೇತ್ರದ ವಿವಾದಗಳು, ಭ್ರಷ್ಟಾಚಾರ, ಅದಕ್ಷತೆಯ ಬಗ್ಗೆ ಜನರು ಅದಾಗಲೇ ಆಕ್ರೋಶಗೊಂಡಿದ್ದು, ಸಾಮಾಜಿಕ ಜಾಲತಾಣ ಫೇಸ್ ಬುಕ್, ಯುಟ್ಯೂಬ್, ವಾಟ್ಸ್ಯಾಪ್ ಗಳಲ್ಲಿ ಅರ್ಹ ಅಭ್ಯರ್ಥಿಗಳ ಆಯ್ಕೆಯೇ ನಮ್ಮ ಗೆಲುವು ಎಂದು ಜನಜಾಗೃತಿ ಮೂಡಿಸಲು ಆರಂಭಿಸಿದ್ದರು. ಜನರಿಗೂ ಹೊಸ ಮುಖವೊಂದರ, ಜನರ ಜೊತೆ ಬೆರೆಯುವ ಅಭ್ಯರ್ಥಿ ಬೇಕಾಗಿದ್ದು, ಜ್ಯೋತಿಮಣಿಯವರನ್ನು ಆರಿಸಿದರು.

“ತನ್ನ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ನನ್ನ ಮೊದಲ ಕೆಲಸ. 25 ವರ್ಷಗಳಿಂದ ಯಾವುದೇ ಅಭಿವೃದ್ಧಿ ನಡೆಯದ ಕ್ಷೇತ್ರದಲ್ಲಿ ನಾನಿದ್ದೇನೆ. 5 ವರ್ಷಗಳಲ್ಲಿ ನಾನು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಸುಶಿಕ್ಷಿತ ಜನರಿಗೆ ಉದ್ಯೋಗಗಳು ದೊರಕುತ್ತಿಲ್ಲ. ಇದಕ್ಕಾಗಿ ಕೌಶಲ್ಯ ಅಭಿವೃದ್ಧಿಯೋಜನೆಯೊಂದನ್ನು ಆರಂಭಿಸಲಿದ್ದೇವೆ” ಎಂದು ಜ್ಯೋತಿಮಣಿ ಹೇಳುತ್ತಾರೆ.

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಕರೂರಿಗೆ ತೆರಳಿದ ಜ್ಯೋತಿಮಣಿ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಣ್ಣ್… ಜ್ಯೋತಿಮಣಿ, ನಲ್ಲಾ ಇರ್ ಕ್ಕಿಯಾ? ಮಕ್ಕಳ್ ಕ್ಕ್ ನಲ್ಲದು ಪಣ್ಣಿಪೋಡು ಕಣ್ಣ್” (ಮಗಳೇ ಜ್ಯೋತಿಮಣಿ, ಚೆನ್ನಾಗಿದ್ದೀಯಾ?, ಜನರಿಗೆ ಒಳ್ಳೆಯದನ್ನು ಮಾಡು) ಎಂದು ಮಹಿಳೆಯರು ಹೇಳುವಾಗ, “ನಾನು ಮಾಡುತ್ತೇನೆ. ನೀವು ನನ್ನನ್ನು ನಂಬಿ ಮತ ನೀಡಿದ್ದೀರಿ” ಎಂದು ಜ್ಯೋತಿಮಣಿ ಹೇಳುತ್ತಾರೆ.

ರೈತನಾಗಿದ್ದ ತನ್ನ ತಂದೆಯನ್ನು ಜ್ಯೋತಿಮಣಿ 13 ವರ್ಷದವರಾಗಿದ್ದಾಗಲೇ ಕಳೆದುಕೊಂಡರು. ಪಂಚಾಯತ್ ವಾರ್ಡ್ ಕೌನ್ಸಿಲರ್ ಆಗಿ ಆರಂಭಗೊಂಡ ಜ್ಯೋತಿಮಣಿಯವರ ರಾಜಕೀಯ ಪ್ರಯಾಣ ಇಂದು ಅವರನ್ನು ಸಂಸತ್ ಪ್ರವೇಶಿಸುವಂತೆ ಮಾಡಿದೆ.

ಜ್ಯೋತಿಮಣಿಯವರು ಕೇವಲ ರಾಜಕಾರಣಿ ಮಾತ್ರವಲ್ಲ, ಲೇಖಕಿಯೂ ಹೌದು. 1996ರಲ್ಲಿ ತಮಿಳು ವಾರಪತ್ರಿಕೆಯೊಂದರಲ್ಲಿ ಪ್ರಕಟವಾದ ಅವರ ಸಣ್ಣಕಥೆ ಅತ್ಯುತ್ತಮ ಸಣ್ಣ ಕಥೆಗಳಲ್ಲೊಂದು ಎಂಬ ಹೆಗ್ಗಳಿಕೆ ಪಡೆಯಿತು. ‘ನೀರ್ ಪಿರಕ್ಕುಂ ಮುನ್’ ಎಂಬ ಸಣ್ಣ ಕಥೆಯಲ್ಲಿ ದಲಿತ ಕಾಲನಿಗೆ ನೀರಿನ ಸಂಪರ್ಕ ಕಲ್ಪಿಸಿದ ಬಗ್ಗೆ ತನ್ನ ಅನುಭವಗಳನ್ನು ತೆರೆದಿಟ್ಟಿದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X