ದಲಿತ, ಮುಸ್ಲಿಮರ ಮೇಲೆ ಗುಂಪು ಹಲ್ಲೆಗೂ ಸಂಘ ಪರಿವಾರಕ್ಕೂ ಸಂಬಂಧ ಇದೆ: ಉವೈಸಿ
ಹೊಸದಿಲ್ಲಿ: ಜೈಶ್ರೀರಾಂ ಘೋಷಣೆ ಕೂಗಲು ನಿರಾಕರಿಸುವವರ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಸಂಘ ಪರಿವಾರ ನೇರ ಹೊಣೆ ಎಂದು ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಆಪಾದಿಸಿದ್ದಾರೆ. ದಲಿತರು ಮತ್ತು ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
"ಜೈಶ್ರೀರಾಂ ಮತ್ತು ವಂದೇ ಮಾತರಂ ಘೋಷಣೆ ಕೂಗದವರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇಂಥ ಘಟನೆಗಳು ನಿಲ್ಲುತ್ತಿಲ್ಲ. ಕೇವಲ ದಲಿತರು ಮತ್ತು ಮುಸ್ಲಿಮರನ್ನು ಗುರಿ ಮಾಡಲಾಗುತ್ತಿದೆ. ಇಂಥ ಘಟನೆಗಳ ಹಿಂದೆ ಇರುವ ಸಂಘಟನೆಗಳಿಗೆ ಸಂಘ ಪರಿವಾರದ ಸಂಪರ್ಕವಿದೆ" ಎಂದು ಎಎನ್ಐ ಜತೆ ಮಾತನಾಡಿದ ಅವರು ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ತಬ್ರೇಝ್ ಅನ್ಸಾರಿ ಎಂಬ ವ್ಯಕ್ತಿಯ ಮೇಲೆ ಜೈಶ್ರೀರಾಂ ಹಾಗೂ ಜೈ ಹನುಮಾನ್ ಘೋಷಣೆ ಕೂಗಿಲ್ಲ ಎಂಬ ಕಾರಣಕ್ಕಾಗಿ ಹಲ್ಲೆ ನಡೆದ ಬೆನ್ನಲ್ಲೇ ಉವೈಸಿ ಈ ಹೇಳಿಕೆ ನೀಡಿದ್ದಾರೆ.
Next Story