Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಹಾಂಕಾಂಗ್ ಚೀನಾಕ್ಕೆ ಹಸ್ತಾಂತರ ವಿರೋಧಿಸಿ...

ಹಾಂಕಾಂಗ್ ಚೀನಾಕ್ಕೆ ಹಸ್ತಾಂತರ ವಿರೋಧಿಸಿ ಪ್ರತಿಭಟನೆ

ಸಂಸತ್ತಿಗೆ ನುಗ್ಗಲು ಪ್ರತಿಭಟನಕಾರರ ಯತ್ನ: ಪೊಲೀಸರಿಂದ ಮೆಣಸಿನ ಹುಡಿಯ ಸ್ಪ್ರೇ

ವಾರ್ತಾಭಾರತಿವಾರ್ತಾಭಾರತಿ1 July 2019 11:44 PM IST
share
ಹಾಂಕಾಂಗ್ ಚೀನಾಕ್ಕೆ ಹಸ್ತಾಂತರ ವಿರೋಧಿಸಿ ಪ್ರತಿಭಟನೆ

ಹಾಂಕಾಂಗ್, ಜು. 1: ಹಾಂಕಾಂಗ್ ಚೀನಾಕ್ಕೆ ಹಸ್ತಾಂತರಗೊಂಡ ವಾರ್ಷಿಕ ದಿನದ ಸಂದರ್ಭದಲ್ಲಿ ಸೋಮವಾರ ಜನರು ಭಾರೀ ಸಂಖ್ಯೆಯಲ್ಲಿ, ಮೆಣಸಿನ ಹುಡಿಯ ಸ್ಪ್ರೇ ಹಿಡಿದು ನಿಂತಿದ್ದ ಪೊಲೀಸರನ್ನು ಎದುರಿಸಿ ಹಾಂಕಾಂಗ್ ಸಂಸತ್ತಿಗೆ ನುಗ್ಗಲು ಪ್ರಯತ್ನಿಸಿದರು.

 ಕೆಲವು ವಾರಗಳ ಹಿಂದೆ, ಹಾಂಕಾಂಗ್‌ನಿಂದ ಆರೋಪಿಗಳನ್ನು ಚೀನಾಕ್ಕೆ ಗಡಿಪಾರು ಮಾಡುವ ಮಸೂದೆಯನ್ನು ವಿರೋಧಿಸುವ ಬೃಹತ್ ಪ್ರತಿಭಟನೆಗಳ ಕೇಂದ್ರವಾಗಿದ್ದ ನಗರ ಸೋಮವಾರ ಮತ್ತೊಮ್ಮೆ ಬೃಹತ್ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು.

ಪ್ರಜಾಪ್ರಭುತ್ವಪರ ಹೋರಾಟಗಾರರು ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು.

ಪ್ರತಿಭಟನಕಾರರು ಸಂಸತ್ತಿನ ಕಿಟಿಕಿ ಗಾಜುಗಳನ್ನು ಒಡೆದರು ಹಾಗೂ ಲೋಹದ ಗಾಡಿಯನ್ನು ಗಾಜಿನ ಬಾಗಿಲುಗಳಿಗೆ ಢಿಕ್ಕಿ ಹೊಡೆಸಿ ಸಂಸತ್ತಿನ ಒಳ ನುಗ್ಗಲು ಪ್ರಯತ್ನಿಸಿದರು.

ಕಟ್ಟಡದ ಒಳಗಿದ್ದ ಪೊಲೀಸರು ಆರಂಭದಲ್ಲಿ ಮೇಲಿನಿಂದ ಮೆಣಸಿನ ಹುಡಿಯ ದ್ರಾವಣವನ್ನು ಪ್ರತಿಭಟನಕಾರರತ್ತ ಎರಚಿದರು. ಇದನ್ನು ತಡೆಯಲು ಜನರು ಕೊಡೆ ಬಿಡಿಸಿದರು.

ಕೆಲವು ಪ್ರಜಾಪ್ರಭುತ್ವಪರ ಸಂಸದರು ಮಧ್ಯಪ್ರವೇಶಿಸಿ ಸಂಸತ್ತಿಗೆ ನುಗ್ಗುವುದರಿಂದ ಹಿಂದೆ ಸರಿಯುವಂತೆ ಕೋರಿದರು.

1997 ಜುಲೈ 1ರಂದು ಹಾಂಕಾಂಗ್‌ನ ಆಡಳಿತವನ್ನು ಬ್ರಿಟನ್ ಚೀನಾಕ್ಕೆ ಹಸ್ತಾಂತರಿಸಿತ್ತು. ಆದಾಗ್ಯೂ, ಹಾಂಕಾಂಗ್‌ನಲ್ಲಿ ಈಗಲೂ ‘ಒಂದು ದೇಶ, ಎರಡು ವ್ಯವಸ್ಥೆಗಳು’ ಎಂಬ ವ್ಯವಸ್ಥೆಯ ಆಡಳಿತವಿದೆ.

ಹಾಂಕಾಂಗ್‌ನಲ್ಲಿ ಪ್ರಧಾನ ನೆಲ ಚೀನಾದಲ್ಲಿ ಕಾಣಸಿಗದ ಹಕ್ಕುಗಳು ಮತ್ತು ಸ್ವಾತಂತ್ರಗಳಿವೆ. ಆದರೆ, ಈ ವ್ಯವಸ್ಥೆಯಿಂದ ಚೀನಾ ಈಗಾಗಲೇ ಹಿಂದೆ ಸರಿಯುತ್ತಿದೆ ಎಂಬುದಾಗಿ ಹೆಚ್ಚಿನ ನಿವಾಸಿಗಳು ಭಾವಿಸಿದ್ದಾರೆ.

ರವಿವಾರ ಇಲ್ಲಿ ಪೊಲೀಸ್ ಪರವಾಗಿ ಪ್ರತಿಭಟನೆ ನಡೆದಿರುವುದನ್ನು ಸ್ಮರಿಸಬಹುದಾಗಿದೆ. ಪ್ರತಿಭಟನಕಾರರು ಚೀನಾ ಪರ ಘೋಷಣೆಗಳನ್ನೂ ಕೂಗಿದರು.

ಹಾಂಕಾಂಗ್ ಬಗ್ಗೆ ಬ್ರಿಟನ್‌ಗೆ ಈಗ ಜವಾಬ್ದಾರಿಯಿಲ್ಲ: ಚೀನಾ

ಹಾಂಕಾಂಗ್ ಬಗ್ಗೆ ಈಗ ಬ್ರಿಟನ್‌ಗೆ ಯಾವುದೇ ಜವಾಬ್ದಾರಿಯಿಲ್ಲ, ತನ್ನ ಮಾಜಿ ವಸಾಹತಿನ ಬಗ್ಗೆ ಹೇಳಿಕೆಗಳನ್ನು ನೀಡುವುದನ್ನು ಅದು ನಿಲ್ಲಿಸಬೇಕು ಎಂದು ಚೀನಾದ ವಿದೇಶ ಸಚಿವಾಲಯ ಸೋಮವಾರ ಹೇಳಿದೆ.

ಹಾಂಕಾಂಗ್ ಕುರಿತು ಚೀನಾದೊಂದಿಗೆ ಮಾಡಿಕೊಂಡಿರುವ ಜಂಟಿ ಘೋಷಣೆಗೆ ತಾನು ಬದ್ಧವಾಗಿರುವುದಾಗಿ ಬ್ರಿಟಿಶ್ ಸರಕಾರ ಪುನರುಚ್ಚರಿಸಿದ ಬಳಿಕ ಚೀನಾ ಈ ಹೇಳಿಕೆ ನೀಡಿದೆ.

ಹಾಂಕಾಂಗ್ ಚೀನಾಕ್ಕೆ ಹೋದ ಬಳಿಕ ಅದನ್ನು ಹೇಗೆ ಆಳಬೇಕು ಎಂಬುದರ ಕುರಿತ ನೀಲನಕಾಶೆಯು ಐತಿಹಾಸಿಕ ದಾಖಲೆಯಾಗಿದೆ ಹಾಗೂ ಅದಕ್ಕೆ ಯಾವುದೇ ಪ್ರಾಯೋಗಿಕ ಮಹತ್ವವಿಲ್ಲ ಎಂಬುದಾಗಿ ಚೀನಾ ಎರಡು ವರ್ಷಗಳ ಹಿಂದೆ ಘೋಷಿಸಿತ್ತು.

ಆದರೆ, ಈ ಘೋಷಣೆ ಈಗಲೂ ಚಾಲ್ತಿಯಲ್ಲಿದೆ ಹಾಗೂ ಅದು ಕಾನೂನುಬದ್ಧ ಒಪ್ಪಂದವಾಗಿದೆ ಹಾಗೂ ಅದನ್ನು ಎತ್ತಿಹಿಡಿಯಲು ತಾನು ಈಗಲೂ ಬದ್ಧವಾಗಿದ್ದೇನೆ ಎಂಬುದಾಗಿ ಬ್ರಿಟನ್ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X