Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಾರ್ಕಿಂಗ್ ಗಲಾಟೆಯನ್ನು 'ದೇವಸ್ಥಾನದ...

ಪಾರ್ಕಿಂಗ್ ಗಲಾಟೆಯನ್ನು 'ದೇವಸ್ಥಾನದ ಮೇಲಿನ ಉಗ್ರರ ದಾಳಿ'ಯಾಗಿ ಪರಿವರ್ತಿಸಿದ ಬಿಜೆಪಿ ಟ್ವಿಟರ್ ಪಡೆ !

ವಾರ್ತಾಭಾರತಿವಾರ್ತಾಭಾರತಿ2 July 2019 4:52 PM IST
share
ಪಾರ್ಕಿಂಗ್ ಗಲಾಟೆಯನ್ನು ದೇವಸ್ಥಾನದ ಮೇಲಿನ ಉಗ್ರರ ದಾಳಿಯಾಗಿ ಪರಿವರ್ತಿಸಿದ ಬಿಜೆಪಿ ಟ್ವಿಟರ್ ಪಡೆ !

ಹೊಸದಿಲ್ಲಿ: ಜುಲೈ ಒಂದರಂದು ಸಂಜೆ ಹಳೆ ದಿಲ್ಲಿಯಲ್ಲಿ ನಡೆದ ಪಾರ್ಕಿಂಗ್ ಜಾಗವೊಂದರ ಕುರಿತ ವಾಗ್ವಾದ ಜುಲೈ ಎರಡರಂದು ಮಧ್ಯಾಹ್ನ ದೇವಸ್ಥಾನದ ಮೇಲಿನ ಭಯೋತ್ಪಾದಕ ದಾಳಿಯಾಗಿ ಬದಲಾಗಿದೆ !

ದಿಲ್ಲಿಯ ಒಂದು ನಿರ್ದಿಷ್ಟ ಜಾಗದಲ್ಲಿ ನಡೆದ ಸ್ಥಳೀಯ ವಿವಾದವೊಂದನ್ನು ಟ್ವಿಟರ್ ನಲ್ಲಿರುವ ಕೆಲವು ಕೋಮುವಾದಿ ಅಜೆಂಡಾ ಇರುವ ಜನಪ್ರತಿನಿಧಿಗಳು, ಬಿಜೆಪಿಯ ಬೆಂಬಲಿಗರ ದೊಡ್ಡ ಪಡೆ, ಪಾವತಿ ಪಡೆದು ಟ್ವೀಟ್ ಮಾಡುವ ಅಕೌಂಟ್ ಗಳು ಹಾಗು ಬಾಟ್ ಅಕೌಂಟ್ ಗಳು  ಟಾಪ್ ಟ್ರೆಂಡಿಂಗ್ ವಿಷಯವಾಗಿ ಪರಿವರ್ತನೆ ಮಾಡಿದೆ, ಅದೂ ದೇವಸ್ಥಾನದ ಮೇಲೆ ಉಗ್ರರ ದಾಳಿ ಎಂದು ! 

ಹಳೆ ದಿಲ್ಲಿಯ ಚಾಂದಿನಿ ಚೌಕ್ ಪ್ರದೇಶದಲ್ಲಿ ಸೋಮವಾರ ಸಂಜೆ ಪಾರ್ಕಿಂಗ್ ಕುರಿತು ಒಂದು ಜಗಳ ಹುಟ್ಟಿಕೊಂಡಿತು. ಬಳಿಕ ಸ್ಥಳೀಯ ದೇವಸ್ಥಾನದಲ್ಲಿ ದಾಂಧಲೆ ನಡೆಯಿತು ಎಂಬ ವರದಿಗಳು ಬಂದವು. ಪೊಲೀಸರು ಹಾಗು ಸ್ಥಳೀಯ ಜನಪ್ರತಿನಿಧಿಗಳು ಜನರನ್ನು ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ಪತ್ರಿಕೆಗಳೂ ಆ ವಿಷಯವನ್ನು ವೈಭವೀಕರಿಸದೆ ಒಳಗಿನ ಪುಟದಲ್ಲಿ ಪ್ರಕಟಿಸಿದವು. 

ಆದರೆ ಮಂಗಳವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಟ್ವಿಟರ್ ನಲ್ಲಿ #TempleTerrorAttack ಹ್ಯಾಷ್ ಟ್ಯಾಗ್ ನಲ್ಲಿ ಟ್ವೀಟ್ ಗಳು ಹರಿದು ಬರಲಾರಂಭಿಸಿದವು. ಮಧ್ಯಾಹ್ನ ಕೇವಲ ಐದು ನಿಮಿಷದ ಅವಧಿಯಲ್ಲಿ ಈ ಹ್ಯಾಷ್ ಟ್ಯಾಗ್ ನ 500 ಟ್ವೀಟ್ ಗಳು ಸುಮಾರು ಮೂರು ಲಕ್ಷ ಟ್ವಿಟರ್ ಅಕೌಂಟ್ ಗಳನ್ನು ತಲುಪಿದವು. ಮಧ್ಯಾಹ್ನ ಈ ಹ್ಯಾಷ್ ಟ್ಯಾಗ್ 80,000 ಟ್ವೀಟ್ ಗಳೊಂದಿಗೆ ಟಾಪ್ ಟ್ರೆಂಡಿಂಗ್ ಆಯಿತು. ಇದರೊಂದಿಗೆ #ChandiniChowk , #TempleDestroyed, #TempleAttacked ಈ ಹ್ಯಾಷ್ ಟ್ಯಾಗ್ ಗಳೂ ಟ್ರೆಂಡಿಂಗ್ ಆಗತೊಡಗಿದವು.

ಇದರ ಬಗ್ಗೆ huffingtonpost.com ನಡೆಸಿದ ವಿಶ್ಲೇಷಣೆಯಲ್ಲಿ ಬಿಜೆಪಿಯ ಬೆಂಬಲಿಗರು ನಡೆಸಿದ ವ್ಯವಸ್ಥಿತ ಅಪಪ್ರಚಾರದ ಅಭಿಯಾನ ಇದು ಎಂಬುದು ಸ್ಪಷ್ಟವಾಗಿ ಕಂಡು ಬಂದಿತು. ದೊಡ್ಡ ಸಂಖ್ಯೆಯ ಫಾಲೋವರ್ಸ್ ಇರುವ ಟ್ವಿಟರ್ ಪ್ರಭಾವಿಗಳು ಹಾಗು ಹೆಚ್ಚು ಫಾಲೋವರ್ ಗಳೇ ಇಲ್ಲದ ಇಂತಹ ಅಭಿಯಾನ ನಡೆಸುವುದಕ್ಕಾಗಿಯೇ ಇರುವ ಅಕೌಂಟ್ ಗಳಿಂದ ನಡೆದ ಕೆಲಸ ಇದು. ಟ್ವಿಟರ್ ನಲ್ಲಿರುವ ಬಿಜೆಪಿಯ ಧಾರಾಳ ಸಂಖ್ಯೆಯ ಬೆಂಬಲಿಗರು, ಹಣಕ್ಕಾಗಿಯೇ ಟ್ವೀಟ್ ಮಾಡುವವರು, ರಾಜಕೀಯ ಕನ್ಸಲ್ಟೇನ್ಸಿಗಳು ಹಾಗು ಬಾಟ್ ಅಕೌಂಟ್ ಗಳು ಇದರಲ್ಲಿ ದೊಡ್ಡ ಪಾತ್ರ ವಹಿಸಿವೆ.

ಬಿಜೆಪಿ ಘಟಕದ ಐಟಿ ಸೆಲ್ ಮುಖ್ಯಸ್ಥ ಪುನೀತ್ ಅಗರ್ವಾಲ್, ಮಾಜಿ ಆಪ್ ಶಾಸಕ ಈಗ ಬಿಜೆಪಿಯಲ್ಲಿರುವ  ಕಪಿಲ್ ಮಿಶ್ರಾ ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ನೇರವಾಗಿ ಏನನ್ನೂ ಮಾಡದ ಪುನೀತ್ ಅಗರ್ವಾಲ್ ಈ ಕುರಿತ ಟ್ವೀಟ್ ಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ರಿಟ್ವೀಟ್ ಆಗುವಂತೆ ನೋಡಿಕೊಂಡರೆ ಕಪಿಲ್ ಮಿಶ್ರಾ ನೇರವಾಗಿಯೇ ಪ್ರಚೋದನಕಾರಿ ಹೇಳಿಕೆಗಳನ್ನು ಟ್ವೀಟ್ ಮಾಡುತ್ತಿದ್ದಾರೆ. " ಪೊಲೀಸರು ಜನರ ಸಹನೆ ಪರೀಕ್ಷಿಸಬೇಡಿ ", " ದೇವಸ್ಥಾನ ಭಗ್ನ ಮಾಡಿದವರು ಆರಾಮವಾಗಿ ಓಡಾಡಿಕೊಂಡಿದ್ದಾರೆ " ಇತ್ಯಾದಿ ಘೋಷಣೆಗಳ ಹೇಳಿಕೆಗಳನ್ನು , ವೀಡಿಯೊಗಳನ್ನು ಕಪಿಲ್ ಟ್ವೀಟ್ ಮಾಡುತ್ತಲೇ ಇದ್ದಾರೆ. ಅವು ದೊಡ್ಡ ಸಂಖ್ಯೆಯ ಜನರನ್ನು ತಲುಪುತ್ತಿವೆ.

ಆದರೆ ಈ ಸುಳ್ಳಿನ ಅಭಿಯಾನದಲ್ಲಿ ಟ್ವೀಟ್ ಮಾಡುತ್ತಿರುವ ಇತರ ಕೆಲವು ಅಕೌಂಟ್ ಗಳನ್ನು ಪರಿಶೀಲಿಸಿದರೆ ಬೆಚ್ಚಿ ಬೀಳಿಸುವ ಅಂಶಗಳು ಹೊರಬೀಳುತ್ತವೆ. #Chandichowk ಹ್ಯಾಷ್ ಟ್ಯಾಗ್ ನ ಟಾಪ್ ಟ್ವಿಟರ್ ಗಳಲ್ಲಿ ಮೂರನೇ ಅಕೌಂಟ್ ಗೆ ಪ್ರೊಫೈಲ್ ಪಿಕ್ಚರ್ ಕೂಡ ಇಲ್ಲ , ಇರುವುದು ಕೇವಲ ಮೂರು ಫಾಲೋವರ್ ಗಳು ಆದರೆ ಇದರ ಟ್ವೀಟ್ ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿವೆ ! ಇನ್ನೊಂದು 32 ಫಾಲೋವರ್ ಗಳಿರುವ ಅಕೌಂಟ್ ಮಾಡಿರುವ ಇದೇ ಹ್ಯಾಷ್ ಟ್ಯಾಗ್ ನ ಟ್ವೀಟ್ ಕೂಡ ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿವೆ ! ಈ ಸರಣಿಯಲ್ಲಿ 1400 ಬಾರಿ ರಿಟ್ವೀಟ್ ಆಗಿರುವ ಟ್ವೀಟ್ ನ ಅಕೌಂಟ್ ಗೆ ಇರುವುದು ಕೇವಲ 205 ಫಾಲೋವರ್ ಗಳು !

share
ವಾರ್ತಾಭಾರತಿ
ವಾರ್ತಾಭಾರತಿ
Next Story
X