Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಾಡಿದ್ದು ಶರಣಾಗುವ ಸರವಣ ಭವನದ...

ನಾಡಿದ್ದು ಶರಣಾಗುವ ಸರವಣ ಭವನದ ರಾಜಗೋಪಾಲ್ ಗೆ ಆಜೀವ ಜೈಲು

'ದೋಸೆ ದೊರೆ'ಯ ದುರಂತ ಕಥನ ಎಲ್ಲ ಪ್ರಭಾವಿಗಳಿಗೆ ಪಾಠ

ವಾರ್ತಾಭಾರತಿವಾರ್ತಾಭಾರತಿ3 July 2019 10:00 PM IST
share
ನಾಡಿದ್ದು ಶರಣಾಗುವ ಸರವಣ ಭವನದ ರಾಜಗೋಪಾಲ್ ಗೆ ಆಜೀವ ಜೈಲು

ಚೆನ್ನೈ, ಜು 3 : ಇದೊಂದು ಅಸಾಮಾನ್ಯ ದುರಂತ ಕತೆ. ಸುಮಾರು ಮೂರು ದಶಕಗಳ ಹಿಂದೆ ಅಂದಿನ ಮದ್ರಾಸ್ ನಲ್ಲಿ ಒಂದು ಸಾಮಾನ್ಯ ಹೋಟೆಲ್ ತೆರೆದ ವ್ಯಕ್ತಿಯೊಬ್ಬ 2019 ರಲ್ಲಿ ವಿಶ್ವದಲ್ಲೇ ಅತಿದೊಡ್ಡ ದಕ್ಷಿಣ ಭಾರತೀಯ ತಿಂಡಿಗಳ ಹೋಟೆಲ್ ಸರಣಿಯ ಮಾಲಕನಾಗುತ್ತಾನೆ.

ದೇಶವಿದೇಶಗಳಲ್ಲಿ ಆತನ ಹೋಟೆಲ್ ಬ್ರ್ಯಾಂಡ್ ಖ್ಯಾತಿ ಗಳಿಸುತ್ತದೆ. ಸಾವಿರಾರು ಕೋಟಿ ರೂಪಾಯಿಯ ಒಡೆಯನಾಗುತ್ತಾನೆ. ಸಾವಿರಾರು ಮಂದಿಗೆ ಉದ್ಯೋಗದಾತನಾಗುತ್ತಾನೆ. ಇಷ್ಟೆಲ್ಲಾ ಸಾಧಿಸಿದ ಮೇಲೆ  ಕೊನೆಗೆ ತನ್ನ ಒಂದು ದೌರ್ಬಲ್ಯದಿಂದಾಗಿ ಸಾಯುವವರೆಗೆ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿಗೆ ತಲುಪುತ್ತಾನೆ  ! 

ಇದು ಸಿನಿಮಾ ಕತೆಯಲ್ಲ. ನಿಜ ಜೀವನದಲ್ಲಿ ನಡೆದ ಕತೆ. ವಿಶ್ವವಿಖ್ಯಾತ ಹೋಟೆಲ್ ಸಮೂಹ ಸರವಣ ಭವನದ ಮಾಲಕ ಪಿ. ರಾಜಗೋಪಾಲ್ ಅವರ ದುರಂತ ಕಥನ.

ದೈವಭಕ್ತಿಯುಳ್ಳ ನೀರುಳ್ಳಿ ವ್ಯಾಪಾರಿಯೊಬ್ಬರ ಮಗ ರಾಜಗೋಪಾಲ್ 1981ರಲ್ಲಿ ಒಂದು ಹೋಟೆಲ್ ಪ್ರಾರಂಭಿಸುತ್ತಾರೆ. ಅಂದಿನ ದಿನಗಳಲ್ಲಿ ಜನರು ಹೋಟೆಲ್ ಗೆ ಹೋಗಿ ತಿನ್ನುವುದೇ ಅಪರೂಪ. ಆದರೂ ಧೈರ್ಯದಿಂದ ಆ ಸಾಹಸಕ್ಕೆ ಇಳಿಯುತ್ತಾರೆ ರಾಜಗೋಪಾಲ್. ಹೋಟೆಲ್ ವಿಶೇಷತೆ - ರುಚಿರುಚಿಯಾದ ದೋಸೆ, ಇಡ್ಲಿ, ವಡೆ ಇತ್ಯಾದಿ ದಕ್ಷಿಣ ಭಾರತೀಯ ತಿನಿಸುಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯ. ಮಧ್ಯಮವರ್ಗದ, ಕೆಳ ಮಧ್ಯಮವರ್ಗದ ಕುಟುಂಬಕ್ಕೆ ಜೇಬಿಗೆ ಹೊರೆಯಾಗದೆ  ಹೊರಗೆ ಹೋಗಿ ಹಾಯಾಗಿ ತಿಂದು ಬರಲು ಸುಲಭ ದಾರಿಯಾಯಿತು ಸರವಣ ಭವನ.

ಹೀಗೆ ಪ್ರಾರಂಭವಾದ ರಾಜಗೋಪಾಲ್ ಅವರ ಹೋಟೆಲ್ ಪಯಣ ಇಂದು ಭಾರತದಲ್ಲಿ 33 ಕಡೆ ಹಾಗು ವಿಶ್ವದ ವಿವಿಧೆಡೆ ಸುಮಾರು 47 ಕ್ಕೂ ಹೆಚ್ಚು ಹೋಟೆಲ್ ಸ್ಥಾಪನೆಯಾಗುವಲ್ಲಿ ಬಂದು ನಿಂತಿದೆ. ಸುಮಾರು 9000 ಜನರಿಗೆ ಉದ್ಯೋಗ ಕಲ್ಪಿಸಿರುವ ಈ ಹೋಟೆಲ್ ಸಮೂಹ ಇವತ್ತು ಸುಮಾರು 3000 ಕೋಟಿ ಮೌಲ್ಯ ಪಡೆದಿವೆ ಎನ್ನುತ್ತವೆ ಮೂಲಗಳು . 

ಆದರೆ ಎಲ್ಲ ಚೆನ್ನಾಗಿ ಹೋಗುತ್ತಿರುವಾಗ ರಾಜಗೋಪಾಲ್ 2000ದ ದಶಕದಲ್ಲಿ ಒಂದು ತಪ್ಪು ಹೆಜ್ಜೆ ಇಡುತ್ತಾರೆ. ತನ್ನ ಸಮೂಹದ ಉದ್ಯೋಗಿಯೊಬ್ಬರ ಮಗಳ ಮೇಲೆ ಅವರ ಕಣ್ಣು ಬೀಳುತ್ತದೆ. ಸಾಲದ್ದಕ್ಕೆ ಅವಳನ್ನು ನೀನು ನಿನ್ನ ಮೂರನೇ ಪತ್ನಿಯಾಗಿಸು ಎಂದು ಜ್ಯೋತಿಷಿಯೊಬ್ಬ ಸಲಹೆ ನೀಡುತ್ತಾನೆ.

ಸಾಧನೆ, ಹಣ, ಪ್ರಭಾವದ ಭ್ರಮೆಯಲ್ಲಿ ಬಿದ್ದ ರಾಜಗೋಪಾಲ್ ಜ್ಯೋತಿಷಿಯ ಮಾತು ಕೇಳಿ ಆ ಮಹಿಳೆಯ ಬೆನ್ನು ಬೀಳುತ್ತಾರೆ. ಆದರೆ ಆಕೆಗೆ ಮದುವೆಯಾಗಿ ಸಂಸಾರ ಇದೆ ಎಂಬುದನ್ನು ಕಡೆಗಣಿಸುತ್ತಾರೆ. ಆಕೆಗಾಗಿ ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಇಲ್ಲದ ಕಾಟ ಕೊಡುತ್ತಾರೆ. ಕೊನೆಗೆ 2001 ರಲ್ಲಿ ಆಕೆಯ ಪತಿಯನ್ನು ಕೊಲೆ ಮಾಡಿಸಿಬಿಡುತ್ತಾರೆ ! 

2004 ರಲ್ಲಿ ಅಪರಾಧ ಸಾಬೀತಾಗಿ ಮೊದಲು ಹತ್ತು ವರ್ಷ ಜೈಲಾಗುತ್ತದೆ. ಬಳಿಕ ಮತ್ತೆ ಆಜೀವ ಜೈಲಾಗುತ್ತದೆ. ಈಗ ಮಾರ್ಚ್ ನಲ್ಲಿ ಸುಪ್ರೀಂ ಕೋರ್ಟ್ ಕೂಡ ಆ ಶಿಕ್ಷೆಯನ್ನು ಎತ್ತಿಹಿಡಿಯುತ್ತದೆ. ಜುಲೈ 7 ರಂದು ಸರವಣ ಭವನದ ರಾಜಗೋಪಾಲ್ ಶರಣಾಗಲು ಅಂತಿಮ ಗಡು . ಆ ಬಳಿಕ ಅವರು ಕೊನೆಯುಸಿರಿನವರೆಗೆ ಕಂಬಿ ಹಿಂದೆ ಕಳೆಯಬೇಕು. 

ಕಠಿಣ ಪರಿಶ್ರಮ ಹಾಗು ಹೊಸ ಐಡಿಯಾ ಇದ್ದರೆ ವ್ಯಕ್ತಿ ಎಲ್ಲಿಗೂ ತಲುಪಬಹುದು ಎಂಬುದಕ್ಕೆ ರಾಜಗೋಪಾಲ್ ಅತ್ಯುತ್ತಮ ನಿದರ್ಶನ. ಆದರೆ ಮಹಿಳೆಯರ ಕುರಿತ ಅವರ ದೌರ್ಬಲ್ಯ ಹಾಗು ಹಣ, ಪ್ರಭಾವದ ಭ್ರಮೆ ಅವರನ್ನು ಅಧಪತನದತ್ತ ಕೊಂಡೊಯ್ಯಿತು ಎನ್ನುತ್ತಾರೆ ಹಿರಿಯ ಪತ್ರಕರ್ತ ಜಿ ಸಿ ಶೇಖರ್. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X