Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಹುಆ ವಿರುದ್ಧ ಸುಳ್ಳಾರೋಪ ಮಾಡಿ...

ಮಹುಆ ವಿರುದ್ಧ ಸುಳ್ಳಾರೋಪ ಮಾಡಿ ಮಂಗಳಾರತಿ ಮಾಡಿಸಿಕೊಂಡ ಝೀ ನ್ಯೂಸ್‌ನ ಸುಧೀರ್ ಚೌಧರಿ

ವಾರ್ತಾಭಾರತಿವಾರ್ತಾಭಾರತಿ4 July 2019 9:45 AM IST
share
ಮಹುಆ ವಿರುದ್ಧ ಸುಳ್ಳಾರೋಪ ಮಾಡಿ ಮಂಗಳಾರತಿ ಮಾಡಿಸಿಕೊಂಡ ಝೀ ನ್ಯೂಸ್‌ನ ಸುಧೀರ್ ಚೌಧರಿ

ಹೊಸದಿಲ್ಲಿ, ಜು.4: ತೃಣಮೂಲ ಕಾಂಗ್ರೆಸ್‌ನ ಮೊದಲ ಬಾರಿಯ ಸಂಸದೆ ಮಹುಆ ಮೊಯಿತ್ರಾ ಜೂನ್ 25ರಂದು ಮಾಡಿದ ತನ್ನ ಚೊಚ್ಚಲ ಸಂಸತ್ತಿನ ಭಾಷಣ ದೇಶಾದ್ಯಂತ ಭಾರೀ ಚರ್ಚೆಯಲ್ಲಿ ಇನ್ನೂ ಮುಂದುವರಿದಿದೆ. ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಚಾಚಿ ಏಟು ಎಂದೇ ವಿಪಕ್ಷ, ಪ್ರಗತಿಪರ ವಲಯಗಳಲ್ಲಿ ಈ ಭಾಷಣ ವ್ಯಾಪಕ ಜನಪ್ರಿಯತೆ ಪಡೆಯಿತು. ಇದಕ್ಕೆ ಮುಖ್ಯ ಕಾರಣ ದೇಶದಲ್ಲಿ ಈಗ ಫ್ಯಾಶಿಸಂನ ಆರಂಭಿಕ ಏಳು ಲಕ್ಷಣಗಳು ಸ್ವಷ್ಟವಾಗಿ ಕಾಣುತ್ತಿದೆ ಎಂದು ಮಹುಆ ವಿವರಿಸಿ ಹೇಳಿದ್ದು. ಆ ಭಾಷಣದ ಕುರಿತೇ ಹಲವು ರಾಷ್ಟ್ರೀಯ ಮಾಧ್ಯಮಗಳು ಮಹುಆ ಅವರ ವಿಶೇಷ ಸಂದರ್ಶನ ಹಾಗೂ ಚರ್ಚೆಗಳನ್ನು ನಡೆಸಿದ್ದವು.

ಈಗ ಮಹುಆ ಅವರ ಭಾಷಣ ಮತ್ತೆ ಚರ್ಚೆಗೆ ಬಂದಿದೆ. ಈ ಬಾರಿ ಬೇರೆಯೇ ಕಾರಣಕ್ಕೆ ಮಹುಆ ತನ್ನ ಭಾಷಣದಲ್ಲಿ ಕೃತಿ ಚೌರ್ಯ ಮಾಡಿ ಸಂಸತ್ತಿಗೆ ಅವಮಾನ ಮಾಡಿದ್ದಾರೆ ಎಂದು ಸುಳ್ಳಾರೋಪ ಮಾಡಿ ಝೀ ನ್ಯೂಸ್ ಹಾಗೂ ಅದರ ಪ್ರಧಾನ ಸಂಪಾದಕ ಸುಧೀರ್ ಚೌಧರಿ ಮಂಗಳಾರತಿ ಮಾಡಿಸಿಕೊಳ್ಳುವ ಮೂಲಕ ಮತ್ತೆ ಮಹುಆ ಭಾಷಣಕ್ಕೆ ಪ್ರಚಾರ ನೀಡಿದ್ದಾರೆ.

ಆಗಿದ್ದಿಷ್ಟು....
ಮಹುಆ ಭಾಷಣದಲ್ಲಿ ಹೇಳಿದ ವಿಷಯಗಳನ್ನು 2017ರಲ್ಲಿ ವಾಷಿಂಗ್ಟನ್ ಮಾಸಿಕದಲ್ಲಿ ಪ್ರಕಟವಾದ ಲೇಖನವೊಂದರಿಂದ ಕದ್ದಿದ್ದಾರೆ ಎಂಬರ್ಥದಲ್ಲಿ ಕೆಲವು ಬಲಪಂಥೀಯ ಚಿಂತಕರು ಮೊದಲು ಟ್ವೀಟ್ ಮಾಡಿದರು. ಮಕರಂದ್ ಪರಾಂಜಪೆ, ಕಾಂಚನ್ ಗುಪ್ತಾ ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇವರಲ್ಲಿ ಪ್ರಮುಖರು.

ಇದರ ಬೆನ್ನಿಗೇ ಝೀ ನ್ಯೂಸ್ ಪ್ರಧಾನ ಸಂಪಾದಕ ಸುಧೀರ್ ಚೌಧರಿ ತನ್ನ ಪ್ರಮುಖ ಕಾರ್ಯಕ್ರಮ ಡೈಲಿ ನ್ಯೂಸ್ ಆ್ಯಂಡ್ ಅನಾಲಿಸಿಸ್(ಡಿಎನ್‌ಎ)ನಲ್ಲಿ ಸುದೀರ್ಘ ವಿವರಣೆ ನೀಡಿ ಮಹುಆ ಭಾಷಣದಲ್ಲಿ ಉಲ್ಲೇಖಿಸಿದ್ದ 12 ಅಂಶಗಳಲ್ಲಿ 7 ಅಂಶಗಳನ್ನು 2017ರ ‘ವಾಷಿಂಗ್ಟನ್ ಮಂತ್ಲಿ’ಯ ಲೇಖನವೊಂದರಿಂದ ಕದ್ದಿದ್ದಾರೆ. ಇದು ದ್ವೇಷ ಭಾಷಣ ಬೇರೆ. ಇದು ನಮ್ಮ ಸಂಸತ್ತಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದರು. ಆದರೆ ಸತ್ಯ ಬೇರೆಯೇ ಇತ್ತು. ಅದನ್ನು ಸ್ವತಃ 2017ರಲ್ಲಿ ಲೇಖನ ಬದರೆ ಮಾರ್ಟಿನ್ ಲಾಂಗ್‌ಮ್ಯಾನ್ ಅವರೇ ಟ್ವೀಟ್ ಮಾಡುವ ಮೂಲಕ ಝೀ ನ್ಯೂಸ್ ಹಾಗೂ ಸುಧೀರ್ ಚೌಧರಿ ಸಹಿತ ಮಹುಆ ವಿರುದ್ಧ ಸುಳ್ಳಾರೋಪ ಮಾಡಿದ ಎಲ್ಲರ ವಿರುದ್ಧವೂ ಅತ್ಯಂತ ಕಟುವಾಗಿ ಟೀಕಾ ಪ್ರಹಾರ ಮಾಡಿದ್ದಾರೆ.

ಮಹುಆ ತನ್ನ ಭಾಷಣದಲ್ಲೇ ತಾನು ಈ ಅಂಶಗಳನ್ನು ಅಮೆರಿಕದ ಹೊಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂನಲ್ಲಿ ಹಾಕಿರುವ ಪೋಸ್ಟರ್‌ನಿಂದ ನೋಡಿ ತಿಳಿದುಕೊಂಡಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಮಾರ್ಟಿನ್ ಕೂಡಾ ಇದೇ ಪೋಸ್ಟರ್‌ನಿಂದ ಪ್ರೇರಣೆ ಪಡೆದು ತನ್ನ ಲೇಖನ ಬರೆದಿದ್ದರು. ಹಾಗಾಗಿ ಮಹುಆ ಕೃತಿ ಚೌರ್ಯ ಮಾಡುವ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ.

‘‘ನಾನು ಭಾರತದ ಇಂಟರ್‌ನೆಟ್‌ನಲ್ಲಿ ಬಹಳ ಖ್ಯಾತಿ ಪಡೆಯುತ್ತಿದ್ದೇನೆ, ಏಕೆಂದರೆ ಅಲ್ಲಿನ ರಾಜಕಾರಣಿಯೊಬ್ಬರ ವಿರುದ್ಧ ತನ್ನ ಲೇಖನದ ಕೃತಿಚೌರ್ಯ ಮಾಡಿದ್ದಾರೆ ಎಂದು ಸುಳ್ಳಾರೋಪ ಮಾಡಲಾಗಿದೆ. ಇದು ಬಹಳ ತಮಾಷೆಯಾಗಿದೆ. ಆದರೆ ಬಲಪಂಥೀಯ ಕತ್ತೆಗಳು ಎಲ್ಲ ದೇಶಗಳಲ್ಲೂ ಒಂದೇ ರೀತಿ ಇರುತ್ತದೆ’’ ಎಂದು ಮಾರ್ಟಿನ್ ಕಟು ಟೀಕೆ ಮಾಡಿದ್ದಾರೆ. ‘‘ಇದು ಹಾಸ್ಯಾಸ್ಪದ. ಆಕೆ ಏನನ್ನೂ ಕದ್ದಿಲ್ಲ ಅಥವಾ ಕೃತಿಚೌರ್ಯ ಮಾಡಿಲ್ಲ’’ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಪ್ರಕಟನೆ ನೀಡಿರುವ ಮಹುಆ ಕೂಡಾ ನಾನು ಆ ಪೋಸ್ಟರ್ ಬಗ್ಗೆ ಭಾಷಣದಲ್ಲೇ ಹೇಳಿದ್ದೆ. ಅದರಲ್ಲಿದ್ದ 14 ಅಂಶಗಳಲ್ಲಿ ಭಾರತಕ್ಕೆ ಸೂಕ್ತ ಕಂಡ 7 ಅಂಶಗಳನ್ನು ಉಲ್ಲೇಖಿಸಿದ್ದೇನೆ ಎಂದು ಹೇಳಿದ್ದಾರೆ. ವಿಶೇಷವೆಂದರೆ ಮಹುಆ ಕೃತಿಚೌರ್ಯ ಮಾಡಿದ್ದಾರೆ ಎಂದು ಸುಳ್ಳಾರೋಪ ಮಾಡಿದ ಸುಧೀರ್ ಚೌಧರಿ ಸ್ವತಃ ಸುಳ್ಳು ಸುದ್ದಿ ಹರಡುವ ಮೂಲಕ ಕುಖ್ಯಾತಿ ಗಳಿಸಿರುವವರು. ಅವರ ಕುರಿತ www.newslaundry.com ನವರ ವೀಡಿಯೊವೊಂದು ಇಲ್ಲಿದೆ ನೋಡಿ:

I’m internet famous in India because a politician is being falsely accused of plagiarizing me. It’s kind of funny, but right-wing assholes seem to be similar in every country.

— Martin Longman (@BooMan23) July 2, 2019

Whether they reach out to me or not, this is ridiculous. She didn’t steal or plagiarize anything.

— Martin Longman (@BooMan23) July 3, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X