''ಪಕ್ಷದ ಅಧ್ಯಕ್ಷ ಸ್ಥಾನ ನಿರ್ವಹಿಸಲಾಗದವರು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ?''
ಎಚ್.ವಿಶ್ವನಾಥ್ ಟೀಕೆಗೆ ಸಿದ್ದರಾಮಯ್ಯ ತಿರುಗೇಟು
ಮೈಸೂರು, ಜು.4: ಜೆಡಿಎಸ್ ರಾಜ್ಯಾಧ್ಯಕ್ಷಗಿರಿಯನ್ನೇ ಮಾಡಲಾಗದೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ನಮ್ಮ ಬಗ್ಗೆ ಏನು ಮಾತನಾಡುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ
ಮೈತ್ರಿ ಸರಕಾರವನ್ನು ಹೊಂದಾಣಿಕೆಯಾಗಿ ಕೊಂಡೊಯ್ಯುವಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ಎಚ್.ವಿಶ್ವನಾಥ್ ಬುಧವಾರ ದಿಲ್ಲಿಯಲ್ಲಿ ನೀಡಿದ್ದ ಹೇಳಿಕೆ ಕುರಿತಂತೆ ಇಂದು ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಜೆಡಿಎಸ್ ಅಧ್ಯಕ್ಷಗಿರಿಯನ್ನೆ ಮಾಡಲಾಗದವರು ನಮ್ಮ ಬಗ್ಗೆ ಏನು ಮಾತನಾಡುವುದು. ಅಧ್ಯಕ್ಷರಾಗಿ ಎಷ್ಟು ದಿನ ಆಯ್ತು, ಇನ್ನೂ 6 ತಿಂಗಳಾಗಿಲ್ಲ, ಆಗಲೇ ಮೂರು ಬಾರಿ ರಾಜೀನಾಮೆ ನೀಡಿದ್ದಾರೆ. ಇನ್ನು ನಮ್ಮ ಬಗ್ಗೆ ಏನು ಮಾತನಾಡುವುದು ಎಂದು ವ್ಯಂಗ್ಯವಾಡಿದರು.
Next Story