ಕಲ್ಲು ಬಂಡೆಯ ಮೇಲಿಂದ ಜಾರಿ ಬಿದ್ದು ಕಾಡಾನೆ ಸಾವು
ಚಿಕ್ಕಮಗಳೂರು, ಜು.4: ತಾಲೂಕಿನ ದೇವದಾನ ಗ್ರಾ.ಪಂ. ವ್ಯಾಪ್ತಿಯ ಯಾರಂಬಿ ಗ್ರಾಮದ ಗುಡ್ಡೆಕೊಪ್ಪಲಲ್ಲಿ ಕಾಡಾನೆಯೊಂದು 50 ಅಡಿ ಎತ್ತರದ ಕಲ್ಲುಬಂಡೆ ಮೇಲಿಂದ ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಕವಿತಾಲಿಂಗರಾಜ್, ಪರಿಸರ ಸಂಘಟನೆಗಳ ಮುಖಂಡರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
Next Story