Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 36 ವರ್ಷಗಳ ಹಿಂದೆ ನಾಪತ್ತೆಯಾದ...

36 ವರ್ಷಗಳ ಹಿಂದೆ ನಾಪತ್ತೆಯಾದ ತರುಣಿಗಾಗಿ ಶೋಧ

ವ್ಯಾಟಿಕನ್‌ನ 2 ಸಮಾಧಿಗಳ ಅಗೆತ

ವಾರ್ತಾಭಾರತಿವಾರ್ತಾಭಾರತಿ11 July 2019 10:59 PM IST
share
36 ವರ್ಷಗಳ ಹಿಂದೆ ನಾಪತ್ತೆಯಾದ ತರುಣಿಗಾಗಿ ಶೋಧ

ವ್ಯಾಟಿಕನ್, ಜು. 11: 36 ವರ್ಷಗಳ ಹಿಂದೆ ನಾಪತ್ತೆಯಾದ ಇಟಲಿಯ ಓರ್ವ ತರುಣಿಯ ಶೋಧ ಕಾರ್ಯವನ್ನು ಕೈಗೆತ್ತಿಕೊಂಡಿರುವ ವ್ಯಾಟಿಕನ್, ಗುರುವಾರ ಎರಡು ಸಮಾಧಿಗಳನ್ನು ಅಗೆಯಲು ಆರಂಭಿಸಿದೆ.

ಆ ಎರಡು ಗೋರಿಗಳಲ್ಲಿ ಆ ತರುಣಿಯ ಅವಶೇಷಗಳು ಇರಬಹುದು ಎಂಬುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ನೀಡಿದ ಸುಳಿವಿನ ಮೇರೆಗೆ ಅಗೆತ ಕಾರ್ಯವನ್ನು ನಡೆಸಲಾಗುತ್ತಿದೆ.

ವ್ಯಾಟಿಕನ್ ಉದ್ಯೋಗಿಯೊಬ್ಬರ 15 ವರ್ಷದ ಮಗಳು ಇಮಾನುಯೆಲಾ ಒರ್ಲಾಂಡಿ ನಾಪತ್ತೆಯಾಗಿರುವವರು. ಅವರು ಸಂಗೀತ ತರಗತಿಯೊಂದರಿಂದ ಹೊರಬರುತ್ತಿರುವುದನ್ನು ಜನರು ಕೊನೆಯದಾಗಿ ನೋಡಿದ್ದಾರೆ. ಅವರನ್ನು ಯಾರು ಕರೆದುಕೊಂಡು ಹೋಗಿದ್ದಾರೆ ಹಾಗೂ ಅವರ ಮೃತದೇಹ ಎಲ್ಲಿರಬಹುದು ಎಂಬ ಬಗ್ಗೆ ದಶಕಗಳಿಂದ ವಿವಿಧ ಊಹಾಪೋಹಗಳು ಕೇಳಿಬರುತ್ತಿವೆ.

ಒರ್ಲಾಂಡಿಯ ಸಹೋದರ ಪೀಟ್ರೊ ಮಾತ್ರ, ಸಹೋದರಿಯನ್ನು ಜೀವಂತವಾಗಿ ಕಾಣುವ ಆಶೆಯನ್ನು ಕೈಬಿಟ್ಟಿಲ್ಲ.

ವ್ಯಾಟಿಕನ್‌ನ ಸ್ಮಶಾನದಲ್ಲಿರುವ, ತುದಿಯಲ್ಲಿ ದೇವತೆಯ ಚಿತ್ರವನ್ನು ಹೊಂದಿರುವ ಸಮಾಧಿಯ ಚಿತ್ರ ಹಾಗೂ ‘ದೇವತೆಯು ಎಲ್ಲಿಗೆ ಕೈತೋರಿಸುತ್ತದೆಯೋ ಅಲ್ಲಿ ನೋಡಿ’ ಎಂಬ ಸಂದೇಶವೊಂದನ್ನು ಕುಟುಂಬದ ವಕೀಲರು ಪಡೆದ ಬಳಿಕ ಸಮಾಧಿ ಅಗೆತವನ್ನು ನಡೆಸಲಾಗಿದೆ.

ಸಾಲ ವಸೂಲಾತಿಗಾಗಿ ವ್ಯಾಟಿಕನ್ ಮೇಲೆ ಒತ್ತಡ ಹೇರುವುದಕ್ಕಾಗಿ ಗ್ಯಾಂಗ್‌ಸ್ಟರ್‌ಗಳು ಬಾಲಕಿಯನ್ನು ಅಪಹರಿಸಿರಬಹುದು ಅಥವಾ 1981ರಲ್ಲಿ ಪೋಪ್ ದ್ವಿತೀಯ ಜಾನ್ ಪಾಲ್‌ರನ್ನು ಹತ್ಯೆಗೈಯಲು ಪ್ರಯತ್ನಿಸಿದ ಟರ್ಕಿಯ ಮುಹಮ್ಮದ್ ಅಲಿ ಅಜ್ಕನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಡ ಹೇರುವುದಕ್ಕಾಗಿ ಆಕೆಯನ್ನು ಅಪಹರಿಸಿರಬಹುದು ಎಂಬ ಊಹಾಪೋಹಗಳು ದಶಕಗಳ ಕಾಲ ಹರಿದಾಡಿರುವುದನ್ನು ಸ್ಮರಿಸಬಹುದಾಗಿದೆ.

ಎರಡು ಸಮಾಧಿಗಳೂ ಖಾಲಿ!

ಮೂವತ್ತಾರು ವರ್ಷಗಳ ಹಿಂದೆ ನಾಪತ್ತೆಯಾದ 15 ವರ್ಷದ ಇಮಾನುಯೆಲಾ ಒರ್ಲಾಂಡಿಯ ಅವಶೇಷಗಳು ಇರಬಹುದು ಎಂಬುದಾಗಿ ಭಾವಿಸಲಾಗಿದ್ದ ವ್ಯಾಟಿಕನ್‌ನ ಎರಡು ಸಮಾಧಿಗಳು ಖಾಲಿಯಾಗಿರುವುದು ಪತ್ತೆಯಾಗಿದೆ.

ಇದರೊಂದಿಗೆ ಈ ನಿಗೂಢ ನಾಪತ್ತೆಯ ಸುತ್ತ ಆವರಿಸಿರುವ ನಿಗೂಢತೆ ಮತ್ತಷ್ಟು ಆಳವಾಗಿದೆ.

ಈ ಎರಡು ಸಮಾಧಿಗಳು ಇಬ್ಬರು ರಾಜಕುಮಾರರದ್ದೆಂದು ನಂಬಲಾಗಿತ್ತು. ಆದರೆ, ಸಮಾಧಿಗಳಲ್ಲಿ ಇಮಾನುಯೆಲಾ ಒರ್ಲಾಂಡಿಯ ಮೃತದೇಹ ಕಂಡುಬಂದಿಲ್ಲ ಮಾತ್ರವಲ್ಲ, ಅವುಗಳಲ್ಲಿ ರಾಜಕುಮಾರರ ಅಸ್ಥಿಪಂಜರಗಳೂ ಇರಲಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X