Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ:...

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ: ಡಿ.ಕೆ.ಶಿವಕುಮಾರ್

ವಾರ್ತಾಭಾರತಿವಾರ್ತಾಭಾರತಿ12 July 2019 8:47 PM IST
share
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ: ಡಿ.ಕೆ.ಶಿವಕುಮಾರ್

ಬೆಂಗಳೂರು, ಜು. 12: ‘ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶದಿಂದ ಬದುಕದಿದ್ದರೆ ಬದುಕಿಗೇ ಅವಮಾನ. ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಈ ಭೂಮಿನೂ ನಮ್ಮದಲ್ಲ, ಪ್ರಕೃತಿಯೂ ನಮ್ಮದಲ್ಲ. ನಮ್ಮದು ಅಂತಾ ನಮ್ಮ ಜತೆಗಿರೋದು ನಮ್ಮ ಬದುಕಿನ ಸ್ನೇಹ ಮಾತ್ರ’
ಹೀಗೆಂದು ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಅಕ್ಷರಶಃ ಕಾವ್ಯದ ದಾಟಿಯಲ್ಲೆ ತಮ್ಮ ಮಾತು ಆರಂಭಿಸಿದ ಸಚಿವ ಡಿ.ಕೆ.ಶಿವಕುಮಾರ್, ನಾನು ಬಹಳ ದುಃಖದಿಂದ ನನ್ನ ಆತ್ಮೀಯ ಸ್ನೇಹಿತ ಶಿವಳ್ಳಿಗೆ ಸಂತಾಪ ಸೂಚಿಸಬೇಕಾಗಿದೆ. ಬಂಗಾರಪ್ಪನವರು ನನಗೆ ಆತನನ್ನು ಪರಿಚಯ ಮಾಡಿಕೊಟ್ಟರು ಎಂದರು

ಹಿರಿಯರು ಒಂದು ಮಾತು ಹೇಳ್ತಾರೆ. ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ.. ಜಾಗ್ರತ... ಮನಸ್ಸು, ಹಣ, ಯೌವನ, ಅಧಿಕಾರ ಯಾವುದೂ ಶಾಶ್ವತ ಅಲ್ಲ ಎಂದ ಅವರು, ಶಿವಳ್ಳಿ ನನಗೆ ತಮ್ಮನಿದ್ದಂತೆ. ಅವನ ಮನೆಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಶಿವಳ್ಳಿ ಬಡವ. ಸಣ್ಣ ಕೃಷಿಕ, ಸಣ್ಣ 30x40 ಅಗಲದ ಜೋಪಡಿಯಲ್ಲಿದ್ದ. ಆದರೂ, ಯಾರಾದರೂ ಸಹಾಯ ಕೇಳಿ ಬಂದರೆ ತನ್ನ ಬಳಿ ಇದ್ದದ್ದನ್ನು ತನಗೆ, ತನ್ನ ಕುಟುಂಬದ ಬಗ್ಗೆ ಯೋಚಿಸದೆ ದಾನ ಮಾಡುತ್ತಿದ್ದ ಎಂದು ಸ್ಮರಿಸಿದರು.

ಶಿವಳ್ಳಿ ಒಂದು ದಿನ ನಾನು ಊರಿಗೆ ಹೋಗುತ್ತಿದ್ದೇನೆ. ನಿಮ್ಮನ್ನು ನೋಡಲೇಬೇಕು ಅಂತಾ ತನ್ನ ಆಪ್ತ ಸಹಾಯಕ ಹಾಗೂ ಇಲಾಖೆ ಅಧಿಕಾರಿಗಳನ್ನು ಕರೆದುಕೊಂಡು ಬಂದು ನನ್ನ ಬಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ನಂತರ ಬೆಳಗ್ಗೆ ನಾನು ದೇವಸ್ಥಾನಕ್ಕೆ ಹೋಗುವಾಗ ಶಿವಳ್ಳಿ ಅಸ್ವಸ್ಥರಾಗಿದ್ದಾರೆಂಬ ಸುದ್ದಿ ಬಂತು. ನಾನು ತಕ್ಷಣ ವೈದ್ಯರಿಗೆ ಕರೆ ಮಾಡಿ ವಿಚಾರಿಸಿದೆ. ಅವರು ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದರು. ಆದರೆ, ಐದೆ ನಿಮಿಷದಲ್ಲಿ ಶಿವಳ್ಳಿ ಇಲ್ಲ ಅಂತಾ ಸುದ್ದಿ ಬಂತು.
ಇವತ್ತು ಆತ ನಮ್ಮೊಂದಿಗೆ ಇಲ್ಲ. ಅವನ ಹೆಣ ಹೊರುವ ಭಾಗ್ಯ ನನಗೆ ಸಿಗಲಿಲ್ಲ. ಆದರೆ ಅವನ ಜೀವನದ ಪಲ್ಲಕ್ಕಿಯಲ್ಲಿ ನಾನು ಸಣ್ಣ ಹೂವಿನ ಹಾರದ ಭಾಗವಾಗಲು ನನಗೆ ಭಗವಂತ ಅವಕಾಶ ಮಾಡಿಕೊಟ್ಟ. ದೇವರು ವಜ್ರಕ್ಕೆ ಹೊಳಪು ಕೊಟ್ಟ. ಆದರೆ ಸುವಾಸನೆ ಕೊಡಲಿಲ್ಲ. ಆದರೆ ಮೃದುವಾದ ನಮ್ಮ ಮಲ್ಲಿಗೆ ಹೂವಿಗೆ ಸುಗಂಧ ಪರಿಮಳ ಕೊಟ್ಟ, ಆದರೆ ಅದಕ್ಕೆ ಹೆಚ್ಚಿನ ಆಯಸ್ಸು ಕೊಡಲಿಲ್ಲ. ಅದೇ ರೀತಿ ಶ್ರಮಜೀವಿಗಳಿಗೆ, ಶಿವಳ್ಳಿಗೆ ಕಡಿಮೆ ಆಯಸ್ಸು ಕೊಟ್ಟರು, ಅವನು ಮಾಡಿದ ಕೆಲಸ ಮಾತ್ರ ಅಲ್ಲಿನ ವಿಪಕ್ಷಗಳ ನಾಯಕರುಗಳು ಹಾಡಿ-ಹೊಗಳುವಂತೆ ಮಾಡಿದೆ.
ನನಗೆ ಆರೋಗ್ಯ ಸರಿ ಇರಲಿಲ್ಲ. ಆದರೂ ನಮ್ಮ ಪಕ್ಷದ ನಾಯಕರುಗಳು ಉಪಚುನಾವಣೆ ಜವಾಬ್ದಾರಿ ಕೊಟ್ಟರು. ಆಗಷ್ಟೇ ಲೋಕಸಭೆ ಚುನಾವಣೆ ಮುಗಿದಿತ್ತು. ನಾನು ಸುಮಾರು 26ದಿನ ಅಲ್ಲೇ ಇದ್ದೆ. ನನ್ನ ಸ್ನೇಹಿತನ ಭಾವನೆ ಪ್ರೀತಿ ನನ್ನನ್ನು ಅಲ್ಲಿಗೆ ಸೆಳೆಯುತ್ತಿತ್ತು ಎಂದರು.

ನಾನು ಚುನಾವಣೆ ಪ್ರಚಾರದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಿದ್ದೆ. ಆಗ ಶಿವಳ್ಳಿ ನೆನೆದು ಭಾವುಕನಾದೆ. ಬೇರೆ ಎಂತಹುದೇ ಸಂದರ್ಭದಲ್ಲಿ ನಾನು ಹೆದರಿದವನಲ್ಲ. ನಾನು ಅಳುವುದು ಕಡಿಮೆ. ಪ್ರೀತಿ, ಸ್ನೇಹಕ್ಕೆ ಭಾವುಕನಾದೆ. ನಾನು ಭಾವುಕನಾದದನ್ನು ನಮ್ಮ ರಾಜಕೀಯ ಸ್ನೇಹಿತರು ಟೀಕೆ ಟಿಪ್ಪಣಿ ಮಾಡಿದರು. ಅವರ ಮಾತಿನಿಂದ ಅವರಿಗೆ ಒಳ್ಳೆಯದಾಗೋದಾದ್ರೆ ಆಗಲಿ. ಆದರೆ ಚುನಾವಣೆಯಲ್ಲಿ ಜನ ತೋರಿಸಿದ ಪ್ರೀತಿ ಇದೆಯಲ್ಲಾ ಅದು ಮುಖ್ಯ. ಲೋಕಸಭೆ ಚುನಾವಣೆಯಲ್ಲಿ 20 ಸಾವಿರ ಲೀಡ್ ಅಲ್ಲಿ ಅಭ್ಯರ್ಥಿ ಗೆಲ್ತಾರೆ. ಶಿವಳ್ಳಿ ಮಾಡಿದ ಬಡ ಜನರ ಸೇವೆಗೆ ಪಕ್ಷ, ಧರ್ಮ, ಜಾತಿ ಬಿಟ್ಟು, ನಾನು ಹೊತ್ತ ಪಲ್ಲಕ್ಕಿಗೆ ಬಡವರು ಆಶೀರ್ವಾದ ಮಾಡಿ 20ಸಾವಿರ ಮತಗಳ ಮುನ್ನಡೆಯಲ್ಲಿ ನನ್ನ ಸೋದರಿಯನ್ನು ವಿಧಾನಸಭೆಗೆ ಕಳುಹಿಸಿ ಕೊಟ್ಟಿದ್ದಾರೆ. ಅದರಲ್ಲಿ ನನ್ನದೂ ಅಳಿಲು ಸೇವೆ ಇದೆ ಎಂಬ ತೃಪ್ತಿ ಇದೆ.
ಮಗು ಹುಟ್ಟಿದಾಗ ಅದು ಅಳುತ್ತದೆ. ಆದರೆ ಸಮಾಜ ಖುಷಿಯಾಗುತ್ತದೆ. ಅದೇ ವ್ಯಕ್ತಿ ಸತ್ತಾಗ ಆತನ ಸೇವೆಯಿಂದ ಆತ ಸಂತೋಷವಾಗಿರುತ್ತಾನೆ. ಇಡೀ ಸಮಾಜ ಅಳುತ್ತದೆ. ಅದೇ ರೀತಿ ಶಿವಳ್ಳಿಯನ್ನು ನಾವು ಸ್ಮರಿಸಿಕೊಂಡು ಭಾವುಕರಾಗುತ್ತಿದ್ದೇವೆ. ಶಿವಳ್ಳಿ ಬಗ್ಗೆ ಮಾತನಾಡುವುದು ಇನ್ನು ಸಾಕಷ್ಟು ವಿಷಯವಿದೆ. ಆದರೆ ನನಗೆ ಸಮಯ ಕಡಿಮೆ ಇರುವುದರಿಂದ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ.

‘ನನಗೆ ಸಂಸ್ಕೃತಿ ಇಲಾಖೆ ಜವಾಬ್ದಾರಿ ಸಿಕ್ಕ ಮೇಲೆ ವಿಧಿ ಇಲ್ಲದೆ ಕೆಲವರಿಗೆ ಅಂತಿಮ ಗೌರವ ಸಲ್ಲಿಸಬೇಕಾಯಿತು. ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ. ಇಲಾಖೆ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲು ನಿರ್ಧರಿಸಿದ್ದೆವು. ಆದರೆ ಅವರ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಸರಳವಾಗಿ ನಡೆಸಬೇಕಾಯಿತು.
-ಸಚಿವ ಡಿ.ಕೆ.ಶಿವಕುಮಾರ್ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X